Sunday
ಪತ್ರಕರ್ತ ರ ಸಂಪುಟ- ಆಡಳಿತ ಮಂಡಳಿಗೆ ಸಂಕಟ
ವಿಶ್ವೇಶ್ವರ ಭಟ್: ಮುಖ್ಯಮಂತ್ರಿ (ಮಾಹಿತಿ ತಂತ್ರಜ್ಞಾನ, ಶಿಕ್ಷಣ ವಿತ್ತ)
ರಂಗನಾಥ್ ಎಚ್.ಆರ್.: ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ
ಕುಮಾರನಾಥ (ಮಂಗಳೂರು ವಿಕ) :ಗೃಹ (ಮನೆಯಿಂದಲೇ ಕಾರ್ಯಾಚರಣೆ) ಇಲಾಖೆ ಸಹಾಯಕ ಸಚಿವ
ರವಿ ಬೆಳಗೆರೆ: ಸಹಾಯಕಶಿಕ್ಷಣ ಮತ್ತು ಅಪಹರಣ, ಗಣಿ ಮತ್ತು ಭೂವಿಜ್ಞಾನ
ದು.ಗು.ಲಕ್ಷ್ಮಣ್: ಮುಜರಾಯಿ
ಕೆ.ಎನ್.ಶಾಂತಕುಮಾರ್: ಕ್ರೀಡೆ
ಪದ್ಮರಾಜ ದಂಡಾವತಿ: ಲೋಕೋಪಯೋಗಿ
ಇ.ರಾಘವನ್: ಹಣಕಾಸು, ಕಂದಾಯ
ರಾಧಾಕೃಷ್ಣ ಬಡ್ತಿ: ನೀರಾವರಿ
ಲಕ್ಷ್ಮಣ ಕೊಡಸೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಜಿ.ಎನ್.ಮೋಹನ್: ಒಳಾಡಳಿತ, ಗುಪ್ತಚರ ಇಲಾಖೆ
ಅಶೋಕ್ ರಾಮ್: ಚರಂಡಿ ಮತ್ತು ಒಳಚರಂಡಿ ಮಂಡಳಿ
ಚಿದಂಬರ ಬೈಕಂಪಾಡಿ (ಮಂಗಳೂರು) : ಕೃಷಿ, ತೋಟಗಾರಿಕೆ
ಸಂಧ್ಯಾ ಪೈ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಿರಾಶ್ರಿತರ ಪುನರ್ವಸತಿ
ಗಿರೀಶ್ ರಾವ್ (ಜೋಗಿ): ಗ್ರಂಥಾಲಯ
ಕರಿಸ್ವಾಮಿ : ( ಅ) ಸಹಕಾರ
ಜಯಪ್ರಕಾಶ್ ನಾರಾಯಣ : ಸಹಾಯಕ ಗುಪ್ತ ಚರ ಇಲಾಖೆ
ಪಿ.ತ್ಯಾಗರಾಜ್: ಇಂಧನ
ಕನ್ನಡಪ್ರಭ ಡಾ ವೆಂಕಿ: ವೈದ್ಯಕೀಯ ಶಿಕ್ಷಣ
ಕರಾವಳಿ ಅಲೆ ಸೀತಾರಾಂ: ಕಾರಾಗೃಹ
ರವಿ ಹೆಗಡೆ: ವಿಜ್ಞಾನ ಮತ್ತು ತಂತ್ರಜ್ಞಾನ
ಇಂದ್ರಜಿತ್ ಲಂಕೇಶ್: ಯುವಜನ ಸೇವೆ
ತುಫೈಲ್ ಮೊಹಮ್ಮದ್: ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ
ಗಂಗಾಧರ ಮೊದಲಿಯಾರ್: ವಾರ್ತಾ ಮತ್ತು ಪ್ರಚಾರ
ಪ್ರತಾಪ್ ಸಿಂಹ: ಪಂಚ ವಾರ್ಷಿಕ ಯೋಜನೆ
ವಿನಾಯಕ ಭಟ್ ಮೂರೂರು, ಶಿವಪ್ರಸಾದ್ ಟಿ.ಆರ್.: ದೆಹಲಿ ವಿಶೇಷ ಪ್ರತಿನಿಧಿಗಳು
ಡಾ. ಆರ್.ಪೂರ್ಣಿಮ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಲಕ್ಷ್ಮಣ ಹೂಗಾರ್: ಸಮಾಜ ಕಲ್ಯಾಣ
ಶಿವಸುಬ್ರಹ್ಮಣ್ಯ: ಅರಣ್ಯ
ಲೋಕೇಶ್ ಕಾಯರ್ಗ : ಕಾರ್ಮಿಕ
ಅರವಿಂದ ನಾವಡ: ರೇಷ್ಮೆ
ದೀಪಕ್ ತಿಮ್ಮಯ ಮತ್ತು ರಾಧಿಕಾ ಭಾರದ್ವಾಜ್: ವಯಸ್ಕರ ಶಿಕ್ಷಣ
ತಿಮ್ಮಪ್ಪ ಭಟ್: ಸಣ್ಣ ಉಳಿತಾಯ್
ನಿಗಮ ಮಂಡಳಿಗೆ ಮೊದಲ ಪ್ರಾಶಸ್ತ್ಯ: ಉಮಾಪತಿ ಮತ್ತು ದಿನೇಶ್ ಅಮೀನ್ ಮಟ್ಟು, ಕೆ.ವಿ.ಪ್ರಭಾಕರ್
ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಒದಗಿಸಲಾಗುವುದು.
ಕೃಪೆ:ಸಂಪಾದಕೀಯ ( ಸ್ವಲ್ಪ ಎಡಿಟ್ ಮಾಡಲಾಗಿದೆ)
Friday
ಚೇತನಾ ಬರೆದಾಗ
ಕ.ಪ್ರ,. ತಸ್ಲಿಮಾ ವಿವಾದದ ಹಿಂದೆ ಜೇಪಿ: ಚೇತನ ತೀರ್ಥಳ್ಳಿ
![]() |
| ಚೇತನಾ ತೀರ್ಥಹಳ್ಳಿ |
ಕೃಪೆ: ಸಂಪಾದಕೀಯ ಬ್ಲಾಗ್ ಗೆ ಚೇತನಾ ತೀರ್ಥಳ್ಳಿ ಬರೆದ ಪತ್ರ
ಕ್ಯಾಫ್ಟನ್ ರಂಗನ ಮೇಜರ್ ದುರಂತ !
ಮಾಡಿದಮೇಲೆ ಕಂಡೆ ಕಾಣುತ್ತೆ ಬಿಡಿ!
( ಕೃಪೆ :ಸುದ್ದಿರಂಗ ಬ್ಲಾಗ್ )
....................
ಕೃಪೆ: ಮೀಡಿಯಾ ಮನ
Tuesday
ಇಷ್ಟು ದೊಡ್ಡ ಸಂಘರ್ಷ ಬೇಕಿತ್ತೆ? ಇದು ಇಷ್ಟು ದಿನಗಳ ಕಾಲ ಬೆಳೆಯಬೇಕಿದ್ದ ವಿವಾದವೇ?
ಒಂದು ಸಿನಿಮಾ ತಯಾರಾಗುತ್ತಿದೆಯೆಂದರೆ ಅದರಲ್ಲಿ ನೂರೆಂಟು ಸಮಸ್ಯೆಗಳು ಇದ್ದೇ ಇರುತ್ತವೆ. ಮನೆಯೊಳಗೆ ಜಗಳ, ಅಲ್ಲಲ್ಲೇ ತೀರ್ಮಾನವಾಗಬೇಕು, ಬಹುತೇಕ ಹೀಗೇ ಆಗುತ್ತದೆ. ಇತ್ತೀಚಿಗೆ ನಟ ಗಣೇಶ್ ಅಭಿನಯಿಸಿದ ಸಿನಿಮಾ ಒಂದರ ಪ್ರಮೋಷನ್ಗೆ ಆತ ಬಂದಿರಲಿಲ್ಲ. ಹೀಗಾಗಿಯೇ ಸಿನಿಮಾ ಸೋತು ಹೋಯಿತು ಎಂದು ಅದರ ನಿರ್ದೇಶಕ, ನಿರ್ಮಾಪಕ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯೂಸು ಟಿವಿಗಳಲ್ಲಿ ಗಂಟೆಗಟ್ಟಲೆ ಚರ್ಚೆಯೂ ನಡೆದಿತ್ತು. ಆದರೆ ನಿರ್ಮಾಪಕರ ಸಂಘ ಹೀಗೆ ಫೀಲ್ಡಿಗೆ ಇಳಿದಿರಲಿಲ್ಲ. ಹೀಗೆ ನಾಯಕ-ನಾಯಕಿ ಚಿತ್ರದ ಪ್ರಮೋಷನ್ಗೆ ಬರದೇ ಇರುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತದೆ. ಟಿವಿ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿರುವುದರಿಂದಲೇ ಸಿನಿಮಾ ಪ್ರಮೋಷನ್ ವಿಷಯ ಈಗ ಇಷ್ಟು ಮಹತ್ವದ ಪಾತ್ರ ವಹಿಸುತ್ತಿದೆ.
ದಂಡಂ ದಶಗುಣಂ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ರಮ್ಯಾ ಬರಬೇಕಿತ್ತು, ಬರಲಿಲ್ಲ. ಬರದೇ ಹೋಗಿದ್ದಕ್ಕೆ ಕಾರಣವೂ ಆಕೆಯ ಬಳಿಯಿತ್ತು. ಚಿತ್ರದ ನಿರ್ಮಾಪಕ ಗಣೇಶ್, ನಿರ್ಮಾಪಕರ ಸಂಘದ ಪದಾಧಿಕಾರಿಯೂ ಆಗಿದ್ದರು. ರಮ್ಯಾ ಹಾಗು ಗಣೇಶ್ ಕುಳಿತು ಇಬ್ಬರ ನಡುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು.
ಆದರೆ ಯಾಕೆ ಇಷ್ಟು ರಂಪಾಟ ನಡೆಯಿತು. ಯಾಕೆ ಗಣೇಶ್ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡರು? ನಮಗೆ ಗೊತ್ತಿರುವ ಮಾಹಿತಿ ಪ್ರಕಾರ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಗಣೇಶ್ರನ್ನು ಕೆರಳಿಸಿದ್ದು ಓರ್ವ ಪತ್ರಕರ್ತ. ಅಲ್ರೀ, ನಿಮ್ಮ ಸಿನಿಮಾ ಕಾರ್ಯಕ್ರಮಕ್ಕೇ ಅವಳು ಬರಲಿಲ್ಲ ಅಂದ್ರೆ ಏನ್ರೀ? ಏನು ಮಾಡ್ತಾ ಇದೆ ನಿಮ್ಮ ನಿರ್ಮಾಪಕರ ಸಂಘ. ಇಂಥವರನ್ನು ಹೀಗೇ ಬಿಡ್ತೀರಾ ಎಂದು ಗಣೇಶ್ರನ್ನು ಛೂ ಬಿಟ್ಟಿದ್ದು ಓರ್ವ ಪತ್ರಕರ್ತ.
ಹೌದ್ದಲ್ವಾ? ಒಂದು ಕೈ ನೋಡೇ ಬಿಡೋಣ ಎಂದು ಗಣೇಶ್ ಫೀಲ್ಡಿಗಿಳಿದರು. ಈಗ ರಣರಂಪವಾಗಿ ಹೋಗಿದೆ. ಸಿನಿಮಾ ಪತ್ರಕರ್ತರ ಪೈಕಿ ಕೆಲವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿರಲು ಬಯಸುತ್ತಾರೆ. ಅವರು ಹೆಸರಿಗಷ್ಟೆ ಪತ್ರಕರ್ತರು. ಸಿನಿಮಾ ನಟ-ನಟಿಯರಿಗೆ ಛಾನ್ಸು ಕೊಡಿಸುವುದರಿಂದ ಹಿಡಿದು ಸಿನಿಮಾ ಪ್ರೊಡಕ್ಷನ್ನ ಎಲ್ಲ ಕೆಲಸಗಳಲ್ಲೂ ಅವರು ಮೂಗು, ಕಣ್ಣು, ಬಾಯಿ ಇತ್ಯಾದಿಗಳನ್ನು ತೂರಿಸುತ್ತಾರೆ.
ನಿಮಗೆ ಆಶ್ಚರ್ಯ ಅನಿಸಬಹುದು, ಸಿನಿಮಾಗಳಿಗೆ ಫೈನಾನ್ಸು ಕೊಡಿಸುವ ದಂಧೆಯನ್ನೂ ಕೆಲವರು ಮಾಡುತ್ತಾರೆ. ರಾಜಿ ಪಂಚಾಯ್ತಿಗಳನ್ನೂ ನಡೆಸುತ್ತಾರೆ. ಒಂದರ್ಥದಲ್ಲಿ ಸಿನಿಮಾ ಮಂದಿಗೂ, ಸಿನಿಮಾ ಪತ್ರಕರ್ತರಿಗೂ ನಡುವಿನ ಅಂತರದ ಗೆರೆಯೇ ಅಳಿಸಿ ಹೋದಂತಾಗಿದೆ.
ಕೆಲವು ಪತ್ರಕರ್ತರು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಛಾನ್ಸು ಸಿಗಲಿಲ್ಲವೆಂದರೆ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ, ನಿರ್ದೇಶಕರು ಹಣ್ಣುಗಾಯಿ-ನೀರುಗಾಯಿಯಾಗುತ್ತಾರೆ. ಸಿನಿಮಾ ಮಂದಿಯ ನಡುವೆ ಜಗಳ ತಂದಿಡುವುದು, ಚಾಡಿ ಹೇಳುವುದು, ಫಿಟ್ಟಿಂಗ್ ಇಡುವುದು ಇದೆಲ್ಲವೂ ಕೆಲವು ಸಿನಿಮಾ ಪತ್ರಕರ್ತರಿಗೆ ಮಾಮೂಲಿ ಖಯಾಲಿ. ಕೆಲವರ ವರ್ತನೆ ಅತಿಯಾದಾಗ ದೊಡ್ಡ ಸಿನಿಮಾ ಸಂಸ್ಥೆಗಳ ಧಣಿಗಳು ಪತ್ರಿಕಾ ಸಂಸ್ಥೆಗಳ ಮಾಲೀಕರ ಜತೆ ಮಾತನಾಡಿ ಪತ್ರಕರ್ತರ ಸಿನಿಮಾ ಬೀಟ್ ಕಳೆದ ಅನಾರೋಗ್ಯಕರ ಬೆಳವಣಿಗೆಗಳೂ ನಡೆದಿವೆ.
ಒಮ್ಮೆ ಜನಪ್ರಿಯ ಚಿತ್ರನಟಿಯೊಬ್ಬಾಕೆ ಪತ್ರಕರ್ತರೊಬ್ಬರೊಂದಿಗೆ ಆಡಿದ ಖಾಸಗಿ ಮಾತುಗಳೆಲ್ಲ ಆಕೆ ಅಭಿನಯಿಸುತ್ತಿದ್ದ ಚಿತ್ರದ ನಿರ್ದೇಶಕನಿಗೆ ಗೊತ್ತಾಗಿ ಹೋಯಿತು. ಇಬ್ಬರೂ ಜಗಳವಾಡಿ ಹಾವು ಮುಂಗುಸಿ ಆಗಿ ಹೋದರು. ಯಾಕೆ ಹೀಗಾಯಿತು ಎಂದರೆ ಪತ್ರಕರ್ತ ಮಾತನಾಡುವಾಗ ತನ್ನ ಮೊಬೈಲ್ನ ಲೌಡ್ ಸ್ಪೀಕರ್ ಆನ್ ಮಾಡಿ ಇತರ ಪತ್ರಕರ್ತ ಮಿತ್ರರಿಗೂ ಕೇಳಿಸಿದ್ದ. ಅವರಲ್ಲಿ ಒಬ್ಬ ಅದನ್ನು ನಿರ್ದೇಶಕನಿಗೆ ಯಥಾವತ್ತಾಗಿ ವರದಿ ಮಾಡಿದ್ದ.
ಹಿಂದೆಲ್ಲ ಮುಹೂರ್ತ, ಆಡಿಯೋ ರಿಲೀಸು, ಕುಂಬಳಕಾಯಿ, ಸಿನಿಮಾ ರಿಲೀಸು, ನೂರು ದಿನದ ಸಂಭ್ರಮ ಹೀಗೆ ಹಲವು ಸಂದರ್ಭಗಳಲ್ಲಿ ಸಿನಿಮಾದ ನಿರ್ಮಾಪಕರು ಪತ್ರಕರ್ತರಿಗೆ ಪಾರ್ಟಿ ಕೊಡುತ್ತಿದ್ದರು. ಈ ಪಾರ್ಟಿಗಳಲ್ಲಿ ಕೆಲವರು ಎಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರೆಂದರೆ ಅವರನ್ನು ರಾತ್ರಿ ಸರಿಹೊತ್ತಿನಲ್ಲಿ ಮನೆಗಳಿಗೆ ತಲುಪಿಸುವುದೇ ಕಷ್ಟವಾಗುತ್ತಿತ್ತು. ಎರಡು ಲಾರ್ಜು ಒಳಗೆ ಇಳಿದ ಮೇಲೆ ಎದುರಿಗೆ ಕುಳಿತವನು ಯಾರು ಎತ್ತ ಎಂದು ನೋಡದೆ ಸೊಂಟದ ಕೆಳಗೆ ಮಾತನಾಡುವ ಚಾಳಿ ಹಲವರದ್ದು. ಪುಗಸಟ್ಟೆ ಪಾರ್ಟಿಯಲ್ಲವೇ? ಕೆಲವರು ತಮ್ಮ ಗೆಳೆಯರು, ಅಕ್ಕಪಕ್ಕದ ಮನೆಯವರು, ಬಂಧುಗಳನ್ನೂ ಕರೆತರುತ್ತಿದ್ದರು. ಪಾರ್ಟಿ ಮುಗಿಸಿ ಹೋಗುವಾಗ ಗಿಫ್ಟು ಎಲ್ರೀ ಎಂಬ ಕೂಗಾಟ. ಎಲ್ಲ ನೋಡಿ ಬೇಜಾರಾದ ನಿರ್ಮಾಪಕರ ಸಂಘ, ಇನ್ನು ಮೇಲೆ ಯಾರೂ ಪಾರ್ಟಿ ಕೊಡಬಾರದು ಎಂದು ಫರ್ಮಾನು ಹೊರಡಿಸಿತು. ಪ್ರೊಡಕ್ಷನ್ ಕಾಸ್ಟ್ ಏರಿರುವುದರಿಂದ ಪಾರ್ಟಿ ಕೊಡಿಸುವುದಿಲ್ಲ ಎಂದು ಅದು ಸಮಜಾಯಿಷಿ ನೀಡಿತು. ಇಂಥ ಅವಮಾನ ಬೇಕಿತ್ತೆ?
ಹಾಗಂತ ಎಲ್ಲ ಸಿನಿಮಾ ಪತ್ರಕರ್ತರೂ ಹಾಗಲ್ಲ. ಅಲ್ಲೂ ಬೇಕಾದಷ್ಟು ಮಂದಿ ಮಾನವಂತರು ಇದ್ದಾರೆ. ಆದರೆ ಎಲ್ಲರ ಹೆಸರು ಕೆಡಿಸಲು ನಾಲ್ಕೈದು ಮಂದಿ ಸಾಕಲ್ಲವೇ?:
ಕೃಪೆ ಸಂಪಾದಕೀಯ
Monday
ಪತ್ರಕರ್ತಾರಾ ರಾಜಕಾರಣಿಗಳ ವಕ್ರ ತುಂದೊಕ್ತಿ...ವದಂತಿ
ಅವ್ರು ಈ ಪತ್ರಿಕೆ ಸೇರ್ತಾರಂತೆ, ಇವ್ರನ್ನು ೧೫ನೇ ತಾರೀಖು ಒದ್ದು ಹೊರಗೆ ಹಾಕ್ತಾರಂತೆ, ಇವ್ರಿಗೆ ಅವ್ರು ದುಡ್ಡು ಹಾಕಿ ಹೊಸ ಪೇಪರ್ ತರ್ತಾರಂತೆ, ಅವ್ರು ಮತ್ತು ಇವ್ರು ಇಬ್ರೂ ಸೇರಿ ಆ ಪತ್ರಿಕೆ ಸೇರೋದಕ್ಕೆ ಕಾಯ್ತಾ ಇದಾರಂತೆ, ಇವ್ರು ಒಂದು ಎರಡು ಮೂರು ನಾಲ್ಕು ಆಮೇಲಿನ್ನೇನು ಅಂತ ಹಾಡ್ತಾ ಇದಾರಂತೆ… ಇವ್ರ ಫೋನ್ ಸ್ವಿಚ್ಆಫ್… ಅವ್ರ ಮ್ಯಾನೇಜ್ಮೆಂಟ್ ಸ್ಟೇಕ್ ಇನ್ನು ಒಂದೇ ವಾರದಲ್ಲಿ ಹೆಚ್ಚಾಗುತ್ತಂತೆ…. ಅಕಸ್ಮಾತ್ ಅವ್ರು ಬಿಟ್ಟಿದ್ದೇ ಆದ್ರೆ ಈ ಪತ್ರಿಕೆಯಿಂದ ಇವ್ರು ಅಲ್ಲಿಗೆ ಹೋಗೋದಕ್ಕೆ ತಯಾರಿ ನಡೆದಿದೆಯಂತೆ…
ಇವ್ರೆಲ್ಲ ಯಾರು? ಇವ್ರ ಬಗ್ಗೆ ಬರೀತಾ ಇರೋರು ಯಾರು? ಎಸ್ ಎಂ ಎಸ್ಗಳನ್ನು ಹರಿಬಿಡ್ತಾ ಇರೋರು ಯಾರು? ಇದಕ್ಕೆಲ್ಲ ಏನು ಆಧಾರ? ನಂಗೊತ್ತಿಲ್ಲ.
ಕಳೆದ ಹತ್ತು ದಿನಗಳಿಂದ ಇಂಥದ್ದೇ ವದಂತಿಗಳನ್ನು ಗಿರಣಿಗಳಲ್ಲಿ ಅರೆದು ಅರೆದು ಹೊರೆ ಹರಿಬಿಡಲಾಗುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಏನೋ ಭಯಂಕರ ಬದಲಾವಣೆಗಳು ಆಗಿಬಿಡುತ್ತವೆ ಅನ್ನೋ ಕಲ್ಪನೆಯನ್ನು ಕೊಡೋ ಈ ವದಂತಿಗಳು ನಿಜವಾಗುವವರೆಗೂ ಟ್ರಾಶ್ ಎಂದೇ ಕರೆಯಬೇಕಷ್ಟೆ. ವದಂತಿಗಳನ್ನು ಆಧರಿಸಿ ಮ್ಯಾನೇಜ್ಮೆಂಟ್ಗಳು ನಿರ್ಧಾರ ತಗೋಳೋದೇ ಆಗಿದ್ರೆ…. ಆಹಾ…
ಎಂಥ ಮಜಾ ನೋಡಿ, ಸುದ್ದಿಯನ್ನು ಜನರಿಗೆ ತಲುಪಿಸೋ ಪರಮ ಪವಿತ್ರ ಕೆಲಸ ಮಾಡ್ತಾ ಇರೋ ಈ ಪತ್ರಕರ್ತರು ಹರಿದುಬಿಡ್ತಾ ಇರೋ ವದಂತಿಗಳೇನು…. ಇವುಗಳ ಸತ್ಯಾಸತ್ಯತೆ ಎಷ್ಟು? ವದಂತಿಗಳಿಗೇ ಬ್ಲಾಗುಗಳನ್ನು ಬಳಸಿಕೊಳ್ಳೋ ಹೊಸ ಪ್ರವೃತ್ತಿಗೆ ಏನು ಹೇಳೋಣ? ದಾಖಲೆಯಿಲ್ಲ, ಅಧಿಕೃತ ಹೇಳಿಕೆಯಿಲ್ಲ, ಕಣ್ಣಿಗೆ ಕಾಣುವ ಯಾವುದೇ ಬೆಳವಣಿಗೆಗಳೂ ಇಲ್ಲ. ಆದರೂ ಇವೆಲ್ಲ ಕ್ಷಣಕ್ಷಣಕ್ಕೂ ನಡೀತಾ ಇರೋ ವಿದ್ಯಮಾನಗಳು ಎಂದು ಮಾತನಾಡುವ ಪತ್ರಕರ್ತರು ನಮ್ಮ ನಡುವೆಯೇ ಇದ್ದಾರೆ. ನಿಜಘಟನೆಗಳನ್ನು ವರದಿ ಮಾಡುವವರು ಹೀಗೆ ಅತಿರಂಜಿತ ವದಂತಿಗಳನ್ನು ಬರೆಯುತ್ತಿರೋದು ನೋಡಿದರೆ ವಾಕರಿಕೆ ಬರುತ್ತದೆ.
ವಿಮರ್ಶಕಿ ಎಂದೂ ಇಂಥ ವದಂತಿಗಳನ್ನು ಬರೆಯುವ ಗೋಜಿಗೆ ಹೋಗದಿರಲು ನಿರ್ಧರಿಸಿದ್ದಾಳೆ. ನಡೆದ ಘಟನೆಗಳಷ್ಟೇ ವಿಮರ್ಶಕಿಗೆ ಆಧಾರ ಮತ್ತು ಮೂಲ. ಅದನ್ನು ಬಿಟ್ಟು ವದಂತಿಗಳನ್ನು ಹರಡುವವರಿಗೆ ಆಕಾಶವಾಣಿಯಲ್ಲಿ ಬಿತ್ತರವಾಗುವಂತೆ ಎಚ್ಚರಿಕೆ ನೀಡಬೇಕಿದೆ. ವದಂತಿಗಳನ್ನು ಹರಡಬೇಡಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸಿಕೊಳ್ಳಬೇಕಿದೆ.
ಇಲ್ಲಿ ಅವರಿವರು ಆ ಸಂಸ್ಥೆ ಬಿಡುವ, ಸೇರುವ ವಿಷಯಗಳನ್ನು ಅತ್ಯಂತ ಜಾಣತನದಿಂದ ಹರಡುತ್ತಿರುವ ಕುತ್ಸಿತ ಮನಸ್ಸುಗಳಿವೆ ಎಂದೇ ಬಲವಾಗಿ ಅನ್ನಿಸುತ್ತದೆ. ಇಂಥ ವ್ಯಕ್ತಿಗಳನ್ನು ಹುಡುಕಿ ತದಕುವ ಕೆಲಸ ನಡೆಯಬೇಕಿದೆ.
ಒಂದೊಂದು ಪತ್ರಿಕೆಯೂ ಒಂದೊಂದು ಥರದ ಮ್ಯಾನೇಜ್ಮೆಂಟನ್ನು ಹೊಂದಿದೆ. ಉದಯವಾಣಿಯ ಆಡಳಿತ ವರ್ಗವು ನಿನ್ನೆ ಮೊನ್ನೆ ಸೇರಿದ ತಿಮ್ಮಪ್ಪ ಭಟ್ಟರನ್ನು ಸಂಸ್ಥೆಯಲ್ಲೇ ಮೂಲೆಗುಂಪಾಗಿಸುವಂಥ ಕ್ಷುದ್ರ ಸಂಸ್ಥೆಯಂತೂ ಅಲ್ಲ. ಕನ್ನಡಪ್ರಭದ ಮ್ಯಾನೇಜ್ಮೆಂಟ್ ಒಂದು ವರ್ಷದ ಹಿಂದೆ ನಡೆದ ಕ್ಷಿಪ್ರಕ್ರಾಂತಿಯಿಂದ ಕಂಗೆಟ್ಟಿದ್ದರೂ ಪತ್ರಿಕೆಯ ರೀಡರ್ಶಿಪ್ಪನ್ನು ಮೇಲೆತ್ತಿದ ಶಿವಸುಬ್ರಹ್ಮಣ್ಯರನ್ನು ಅಷ್ಟು ಸಲೀಸಾಗಿ ಸರಿಸಿಬಿಡುತ್ತದೆ ಎಂದು ನಂಬಬೇಕೆ? ಹಾಗೇನಾದರೂ ನಡೆದೀತು ಅಂದುಕೊಳ್ಳೋಣ. ಆಗ ಅದೊಂದು ದುರಂತವೇ ಹೊರತು ಸಹಜ ಘಟನೆಯಾಗಲಾರದು. ವಿಮರ್ಶಕಿಗೆ ಶಿವಸುಬ್ರಹ್ಮಣ್ಯರನ್ನು ಹೊಗಳಿ ಏನೂ ಆಗಬೇಕಿಲ್ಲ. ಎನ್ ಆರ್ ಎಸ್ ನ ಪ್ರಕಟಿತ ಅಧಿಕೃತ ಅಂಕಿ ಅಂಶಗಳೇ ಸಾಕಲ್ಲವೆ? ವಿಶ್ವೇಶ್ವರ ಭಟ್ಟರು ಪತ್ರಿಕೆಯನ್ನು ಮೇಲೆತ್ತಿದರು ಎಂದು ಎಷ್ಟೇ ನಂಬಬೇಕೆಂದರೂ, ಅದೇ ಹೊತ್ತು ಅವರೇ ಪತ್ರಿಕೆಯ ರೀಡರ್ಶಿಪ್ ಕುಸಿಯಲೂ ಕಾರಣರಾದರು ಎಂಬ ಮಾತನ್ನು ಯಾಕೆ ಒಪ್ಪಿಕೊಳ್ಳಬಾರದು? ಅಷ್ಟಿದ್ದಾಗ ಅವರನ್ನು ಯಾವುದೇ ಸಂಸ್ಥೆಯು ಕೆಂಪುಹಾಸಿನ ಸ್ವಾಗತ ನೀಡುತ್ತದೆ ಎಂದು ನಂಬಬೇಕೆ? ಹಾಗೆ ನಡೆಯಿತು ಅಂದುಕೊಳ್ಳೋಣ. ಹಾಗೆ ಸೇರಿಸಿಕೊಳ್ಳುವ ಮ್ಯಾನೇಜ್ಮೆಂಟ್ಗೆ ಕಾಮನ್ಸೆನ್ಸ್ ಇಲ್ಲ ಎಂದೇ ಹೇಳಬೇಕಾಗುತ್ತದೆ. ಉನ್ನತ ಶಿಕ್ಷಣಕ್ಕೆ ಹೋಗಬಯಸಿ ರಾಜೀನಾಮೆ ನೀಡಿದ ಭಟ್ಟರು ಇನ್ನೂ ಭಾರತದಲ್ಲಿ ಯಾಕೆ ಇದ್ದಾರೆ ಎಂಬುದೇ ದೊಡ್ಡ ಪ್ರಶ್ನೆ.
ಪತ್ರಿಕೋದ್ಯಮದ ಬಗ್ಗೆ ಸದಾ ಅತ್ಯಂತ ಹಳೆಯ ದಾಖಲೆಗಳನ್ನೆಲ್ಲ ಎತ್ತಿ ಕಾಲಂ ಬರೆಯುತ್ತಿದ್ದ ಭಟ್ಟರೆಲ್ಲಿ? ಪ್ರತಾಪಸಿಂಹ, ಯಶವಂತ ಸರದೇಶಪಾಂಡೆಯವರ ನಿಯಂತ್ರಣದಲ್ಲಿ ತಮ್ಮ ವೆಬ್ಸೈಟನ್ನು ಬಿಟ್ಟುಕೊಟ್ಟು ಹಾಯಾಗಿರುವ ಭಟ್ಟರೆಲ್ಲಿ? ಪತ್ರಿಕೋದ್ಯಮದ ಬಗ್ಗೆ, ತಮ್ಮ ಅನುಭವಗಳನ್ನು ಬರೆಯಲು ಈಗ ಅವರಿಗೆ ಸಕಾಲವಾಗಿತ್ತು. ವ್ಯಕ್ತಿಗತ ನಿಂದನೆ, ಕಟಕಿಗೇ ತಮ್ಮ ವೆಬ್ಸೈಟನ್ನು ಮೀಸಲಾಗಿಟ್ಟ ಅವರ `ಕ್ವಾಲಿಟಿ ಪಾಲಿಸಿ’ ಹೇಸಿಗೆ ತರುತ್ತದೆ. ವೆಬ್ಜಗತ್ತಿಗೆ ಬಂದಮೇಲೆ ವೆಬ್ ಮಾಧ್ಯಮದ ಪ್ರಾಥಮಿಕ ಹೊಣೆಗಾರಿಕೆಗಳನ್ನೂ ಅರಿಯದೇ ಹೋದ ಭಟ್ಟರ ಬಗ್ಗೆ ಕನಿಕರ ಮೂಡುತ್ತದೆ. ಅವರು ಹಾಗೇ, ಭಟ್ಟಂಗಿಗಳ ವೇದಘೋಷಗಳ ಗುಂಗಿನಲ್ಲೇ ಇದ್ದರೆ ಒಳ್ಳೆಯದು; ಆದಷ್ಟು ಬೇಗ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತಾರೆ!
ಅವರ ಸಂಪಾದಕತ್ವದಲ್ಲಿ ನಡೆದ ಸುದ್ದಿಗಳ ಭಾನಗಡಿಯ ಬಗ್ಗೆ ವಿಮರ್ಶಕಿಯು ಬರೆದ ಯಾವ ಬ್ಲಾಗಿಗೂ ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ. ಈಗಲೂ ಅವರು ಮೌನಿಯಂತೆ. ಅವರ ಬಾಯಿ ತೆರೆದಾಗ ಏನೆಲ್ಲ ಘನಘೋರ ಸತ್ಯಗಳು ಹೊರಬೀಳುತ್ತವೆ ಎಂದು ವಿಮರ್ಶಕಿಯಂತೂ ಕಾತರಳಾಗಿಲ್ಲ. ವೆಬ್ ಜಗತ್ತಿಗೆ ಬಂದಮೇಲಾದರೂ ಸ್ವಲ್ಪ ಹೊಸ ಜರ್ನಲಿಸಮ್ ಪಾಠ ಕಲಿತರೆ ಒಳ್ಳೆಯದು ಎಂದಷ್ಟೆ ಹೇಳಬಹುದು.
ಕೃಪೆ :vimarshaki
