Wednesday

ಯಾರು ಅನಾಥ ಕು. ನಾಥ ! ಫಿಟ್ಟಿಂಗ್ ಮಾಸ್ತರ್ ರೀ ಪಿಟ್

ಯಾರು ಅನಾಥ ಕು. ನಾಥ !
ವಿ ಕೆ ಯಲ್ಲಿ ಇಂದು ಮಂಗಳೂರಿನ ಮುಖ ಪುಟದಲ್ಲಿ ಪ್ರಕಟವಾದ ಸಾಯಿ ಆಪ್ತ ಅನಾಥ ಸುದ್ದಿ ಹೊಸದಿಗಂತ, ಕೆ ಪಿ , ಉದಯವಾಣಿಯಲ್ಲಿ ಒಂದು ದಿನ ಮುಂಚಿತವಾಗಿ ಫ್ರಂಟ್ ಪೇಜ್ ಸುದ್ದಿ. ವಿ ಕೆ ಯಲ್ಲಿ ಮಿಸ್ಸಿಂಗ್ ! ಮರುದಿನ ಕುದ್ದು ಕುಮಾರ ಉಳಿದ ಪೇಪರ್ ಓದಿ ಅದನ್ನು ಕದ್ದು ವರದಿ ರೆಡಿ ಮಾಡಿದ್ದ. ಪಾಪ ಸತ್ಯಜಿತ್ ಯಾರಿಗೂ ಸಿಕ್ಕಿಲ್ಲ. ಆದರೆ ಮಂಗಲೋರಿನ ಅವರ ಅಪ್ಪಬಳಿ ಮಾತನಾಡಿ ಅವರು ಹೇಳಿದ್ದನ್ನೇ ಮಗ (ಸತ್ಯ) ಹೇಳಿದ ಎಂದು ಇವ ಸುಳ್ಳೇ ಬರೆದ. ಇದು ಓದುಗರಿಗೆ ಮತ್ತು ಸಂಪಾದಕರಿಗೆ ಮಾಡಿದ ಅನ್ಯಾಯ.
ಕಳೆದ ೧೫ ದಿನಗಳಿಂದ ಲವಲವಿಕೆ ಪೇಜ್ ಪೇಜ್ ಗಳೇ ೪ ದಿನಗಳಿಗೆ ಒಮ್ಮೆ ಮತ್ತೆ ಪ್ರಕಟ ಆಗುತ್ತಿವೆ. (ಕಳೆದ ಶುಕ್ರವಾರದ ಪುಟ ಶನಿವಾರ ಪೂರ್ತಿ ಪುಟ , ಮತ್ತು ಮೊನ್ನೆ ಮಂಗಳ ವಾರದ ಪುಟ ಬುಧವಾರ ಏಪ್ರಿಲ್ ೨೨ ರ ಪೇಜ್ ಲವಲವಿಕೆ ೭ , ೨೭ರ ಸಿನಿ ಲವಲವಿಕೆ ಪೇಜ್ ೩ ! ರೀ ಪೀಟ್ ). ಯಾರದೋ ಫೋಟೋ ಯಾರಿಗೋ ತಗುಲಿಸಿ ಸುದ್ದಿ ಪ್ರಕಟಿಸುತ್ತಿದ್ದಾರೆ. ( ಇ ಬಗ್ಗೆ ಇನ್ನೊಮ್ಮೆ ದಾಖಲೆ ಸಹಿತ ರಿಪೀಟ್ ಪುಟಗಳನ್ನೂ ನೀಡುತ್ತೇನೆ. ಜೆ. ರಾಮ ಪ್ರಸಂಗ ಮತ್ತೆ ಮರುಕಲಿಸುವ್ ಸಾಧ್ಯತೆ ಇದೆ. ಒಳ್ಳೆ ಪತ್ರಿಕೆ ಎಂಬ ವಿ ಕೆ ಇಮೇಜ್ ಕು.ನಾಥ ಹೋಗುವ ಮುಂಚೆ ಹಾಳೂ ಮಾಡುವ ಪ್ರಯತ್ನದಲ್ಲಿ ಇದ್ದಾನೆ. ಉದಯವಾಣಿ ಒಂದು ದಿನ ಮುಂಚಿತವಾಗಿ ಪ್ರಕಟವಾದ ಸುದ್ದಿ (ಮನೋಹರ ಪ್ರಸಾದ್ ) ಮತ್ತು ಒಂದು ದಿನ ಬಳಿಕ ಅನಾಥ ಸುದ್ದಿ ತುಲನೆ ಮಡಿ. ಇನ್ನು ಇ ಬಾರಿ ಸಂಪಾದಕರಿಗೆ ಬ್ಲಾಗ್ ತೋರಿಸುವ ದುಸ್ಸಾಹಸ ಮಾಡುವ ಸಾಧ್ಯತೆ ಇಲ್ಲ. ಕಳ್ಳ ಸಿಕ್ಕಿ ಬೀಳುತ್ಥನಲ್ಲ ಹ ಹ ..
ನಾವಡ ಬರುತ್ತಾನೆ ಅಂದಾಗ ನಡುಗಿದ ನಾಥ ಮತ್ತು ಮತ್ತು ಎಡವಟ್ಟು ಮಾಡಿಕೊಳ್ಳುತ್ತಲೇ ಇದ್ದಾನೆ.. ನೋಡೋಣ ಇನ್ನೂ ಏನು ತಪ್ಪು ಮಾಡ್ತಾನೆ ಅಂತ. ಆದ್ರೆ ಪೆಟ್ಟು ಅಭಿಮಾನದ ಪತ್ರಿಕೆ ವಿ ಕೆ ಗೆ ಎನ್ನುವುದೇ ಬೇಸರ.

Tuesday

ಕು ನಾಥ ಸಾಧನೆ... !ಸಂಪಾದನೆ

ಕುಮಾರನಾಥ ಸಾದನೆ ಸೊನ್ನೆ ಎಂದು ಬರೆದ ನಮ್ಮ ಮೇಲೆ ಬ್ಲಾಗ್ ಓದುಗ ವಿನೋದ್ ಸಿಟ್ಟಾಗಿ ಕಾಮೆಂಟ್ ಕಳಿಸಿದ್ದಾರೆ ಅದನ್ನು ಯಥಾವತ್ ಪ್ರಕಟಿಸುತ್ತಿದ್ದೇವೆ

ವಿಕ ಮಂಗಳೂರು ಬ್ಯೂರೋಚೀಪ್. ಸಾಧನೆ ಸೊನ್ನೆ...
who said ? ask the bar attender and cashier ! and who else response team leaders..
Ask Bank Mangers..ಸಾಧನೆ
ಸೊನ್ನೆ too many zeros
banker can count it
wow..wow...

April 12, 2011 8:01 AM

Monday

ನೇ ..ಸಾರ ನೋಡು..ನೇಸರ ನೋಡು...

ತ್ರಿಕಾ ಕಛೇರಿಗಳಲ್ಲಿ ಓತ್ಲಾ ಹೊಡೆದುಕೊಂಡು ಇರುವವರಿದ್ದಾರೆ. ಅದನ್ನು ಸ್ವಯಂ ಘೋಷಿಸಿಕೊಂಡವರು ಕಡಿಮೆ. ಇಲ್ಲೊಬ್ಬರು ಆ ಕೆಲಸವನ್ನು ಮಾಡಿದ್ದಾರೆ. ಒಬ್ಬರು ಕೆಪಿ ಬಿಟ್ಟು ವಿಜಯ ನೆಕ್ಸ್ಟ್ ಸೇರಿಕೊಂಡವರು. ಇನ್ನೊಬ್ಬರು ಕನ್ನಡಪ್ರಭದಲ್ಲಿ ಮೈಸೂರಿನಲ್ಲಿ ಇರುವವರು. ಇಬ್ಬರ ನಡುವೆ ಶಿವ!

ನೇಸರ ಕಾಡನಕುಪ್ಪೆ ಮತ್ತು ವಿಜಯ ನೆಕ್ಸ್ಟ್ ನಲ್ಲಿರುವ ಚೇತನ ತೀರ್ಥಹಳ್ಳಿ ಅವರ ನಡುವಿನ ಚಾಟ್ ಸಂಭಾಷಣೆಯನ್ನು ವಿಜಯ ನೆಕ್ಸ್ಟ್ ನಲ್ಲಿರುವ ನನ್ನ ವಿದ್ಯಾರ್ಥಿನಿ ಕಳುಹಿಸಿದ್ದಾರೆ. ಟೈಮ್ಸ್ ನಲ್ಲಿ ಇಂತಹ ಚಾಟ್ ಗಳೆಲ್ಲ ರೆಕಾರ್ಡ್ ಆಗುತ್ತಂತೆ. ಅದನ್ನೇ ಆಕೆ ಕಳುಹಿಸಿದ್ದಾಳೆ. ನಿಮ್ಮ ಅವಗಾಹನೆಗಾಗಿ ಇಲ್ಲಿ ಕೊಡಲಾಗಿದೆ.

ಕೆಲವರು ಊರಿಗೆಲ್ಲ ಉಪದೇಶ ಮಾಡುತ್ತಾರೆ. ತಾವು ಮಾತ್ರ ಕಚೇರಿಯಲ್ಲಿ ಕುಳಿತು ಇಂತಹ ಚಿಲ್ಲರೆ ಬುದ್ದಿ ತೋರಿಸುತ್ತಾರೆ. ಪ್ರೆಸ್ ಮೀಟ್ ಗಳಲ್ಲಿ ರಾಜಕಾರಣಿಗಳನ್ನು ಗೊಳುಹೊಯ್ದುಕೊಳ್ಳುವ, ಬರಹಗಳ ಮೂಲಕ ನೀತಿಪಾಠ ಹೇಳುವ, ಸಮಾಜ ಸುಧಾರಕರ ರೂಪ ಧರಿಸುವ ಪತ್ರಕರ್ತರ ಒಳಮನಸ್ಸು ಹೇಗಿರುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.
ಫಾರ್ ಮೋರ್ ಡಿಟೇಲ್ಸ್ ವಿಸಿಟ್
http://mediamana.blogspot.com/

Thursday

ಆನಂದ ಕರ್ನಾಟಕಕ್ಕೆ ಎ ನಾರಾಯಣ ಸಂಪಾದಕ

Kumarnath new associate editor of Ananda karnataka news paper by Vijya Sankeshwar. He wil be posted in Hubli.
A.Narayana will be the Editor.

ಹೆಚ್ಚಿನ ಮಾಹಿತಿಗೆ... ನಿರೀಕ್ಷಿಸಿ...


http://chillymedia.blogspot.com/

Tuesday

ನಾವಡ ಮಂಗಳೂರಿಗೆ, ಕುಮಾರ ....?

ಓದುಗರೊಬ್ಬರು ಕಾಮೆಂಟಿಸಿದ್ದರು. ಆಗ ಗೊತ್ತಾಯ್ತು ಕುಮಾರನಾಥ್ ಎಂಬೊಬ್ಬ ವ್ಯಕ್ತಿ ಪತ್ರಿಕೊದ್ಯಮದಲ್ಲಿದ್ದಾನೆ, ಬ್ಯೂರೋಚೀಪ್ ಆಗಿದ್ದಾನೆ ಎಂದು. ವಿಕ ಮೈಸೂರು ಬ್ಯೂರೋ ಮುಖ್ಯಸ್ಥರಾಗಿರುವ ಅರವಿಂದ ನಾವಡ ಅವರನ್ನು ಮಂಗಳೂರಿಗೆ ವರ್ಗಾಯಿಸಲಾಗಿದೆಯಂತೆ. ಅವರು ಮಕ್ಕಳ ಕಾರಣಕ್ಕೆ ಮಂಗಳೂರಿಗೆ ವರ್ಗಾವಣೆ ಬೇಕು ಎಂದು ಬಹು ಸಮಯದಿಂದ ಬೇಡಿಕೆ ಇಟ್ಟಿದ್ದರಂತೆ. ವಿ.ಭಟ್ಟರು ಕುಮಾರನಾಥನ ಮೇಲೆ ಅದೇನು ಪ್ರೀತಿ ಇಟ್ಟಿದ್ದರೋ, ಅವನನ್ನು ವರ್ಗಾಯಿಸಲಿಲ್ಲ. ನಾವಡರ ಆಸೆ ತೀರಲಿಲ್ಲ. ಹೊಸ ಸಂಪಾದಕರು ಬಂದ ಮೇಲೆ ನಾವಡರನ್ನು ಮಂಗಳೂರಿಗೆ ವರ್ಗಾಯಿಸಿದ್ದಾರೆ. ವಿಚಿತ್ರವೆಂದರೆ ಕುಮಾರನಾಥನನ್ನು ವರ್ಗಾಯಿಸಲಾಗಿಲ್ಲ.
ಕೃಪೆ: ಮೀಡಿಯಾ ಮನ
ಹೆಚ್ಚಿನ ವಿವರಗಳಿಗ
ಮೀಡಿಯಾಮನಬ್ಲಾಗ್ ಸ್ಪಾಟ್ ಡಾಟ್ ಕಾಮ್ ಸಂಪರ್ಕಿಸಿರಿ
http://www.mediamana.blogspot.com/

Sunday

ಸಂಕೇಶ್ವರ ವಿಜಯವಾಣಿಗೆ ವಿಕ ಚೀಪ್ ಬ್ಯೂರೊಗಳ ಕ್ಯೂ


ಯುಗಾದಿ ಬ್ರೇಕಿಂಗ್ ನ್ಯೂಸ್
ಮಾನ್ಯ ವಿಜಯ ಸಂಕೇಶ್ವರ ಅವರು ಮುಂದಿನ ಆ.17ಕ್ಕೆ ಹೊಸ ಪತ್ರಿಕೆ ವಿಜಯವಾಣಿ ಹೊರತರಲಿದ್ದಾರೆ. (ವಿ ಕ ಕೂಡಾ ಇದೇ ದಿನಕ್ಕೆ ಹೊರತಂದಿದ್ದರು)" ಹತ್ತೂ ಆವೃತ್ತಿಗಳಲ್ಲಿ ಪತ್ರಿಕೆ ಹೊರ ತರುವ ಬಗ್ಗೆ ಪ್ಲಾನ್ ಸಿದ್ಧವಾಗಿದೆ. ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಪ್ರಿಂಟಿಂಗ್ ಮಿಷನ್ ಜೋಡಿಸಲಾಗುತ್ತಿದೆ. ರಾಜ್ಯದಲ್ಲಿರುವ ವಿಕ ಶೇ.೯೦ ಏಜೆಂಟರುಗಳ ಸಂಕೇಶ್ವರನ ವಿ ಆರ್ ಎಲ್ ಬಸ್ ಏಜೆಂಟ್ ಗಳೇ ಆಗಿದ್ದಾರೆ. ಹೀಗಾಗಿ ಮೊದಲ ಹೊಡೆತ ವಿಕಕ್ಕೆ. ಸಂಕೇಶ್ವರನ ಪತ್ರಿಕೆಗೆ ಸೇರಲು ಹಲವು ಆಸ್ಥಾನಿಕ ಸಂಪಾದಕರು ತುದಿಗಾಲಲ್ಲಿ ನಿಂತಿದ್ದಾರೆ. ಕ.ಪ್ರ. ಬಿಟ್ಟು ವಿ ಭಟ್ಟರು ಬರಲು ಒಪ್ಪದ ಕಾರಣ ಹೊಸ ಸಂಪಾದಕರ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.
ಬಾಲ್ಡಿ ಅನಾಥನಿಗೆ ಹೊಸ ಆಶ್ರಯ
ದಾವಣಗೆರೆ, ಹಾಸನ, ಮಂಗಳೂರು, ಹುಬ್ಬಳ್ಳಿಯ ಚೀಪ್ ಬ್ಯೂರೊಗಳು ಈಗಾಗಲೇ ಹೊರಡಲು ನಿರ್ಧರಿಸಲಾಗಿದೆ. ಅರ್ಧಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಜತೆಯಲ್ಲಿ ಬರಲು ಕಂಬಾರ ನಾತ ಸಂಕೇಶ್ವರ ಬಳಿ ಹೇಳಿಕೊಂಡಿದ್ದಾರೆ. ಮಂಗಳೂರಿನ ಸ್ಥಾನಿಕ ಸಂಪಾದಕ ಹುದ್ದೆಗೆ ಅನೇಕ ಮಂದಿ ಕಣ್ಣಿಟ್ಟಿರುವುದರಿಂದ ಬೋಳು ತಲೆ ಬಾಲ್ಡಿಗೆ ಬಿಸಿಯಾಗಿ ತ್ತು. ಮಂಗಳೂರಿಗೆ ಸಂಕೇಶ್ವರ ಬಂದಾಗ ತಾನು ತಮ್ಮ ಪತ್ರಿಕೆಗೆ ಸೇರುತ್ತೇನೆ, ಸಹಾಯಕ ಸಂಪಾದಕ ಪೋಸ್ಟ್ ನೀಡಬೇಕು ಎಂದುಕೈ ಕಾಲು ಹಿಡಿದ್ದ.
ಅತ್ತ ವಿ ಭಟ್ಟರು ವಿಕ ದ ಪ್ರತಿಭಾನ್ವಿತರನ್ನು ಸೆಳೆದುಕೊಳ್ಳುತ್ತಿದ್ದಾರೆ. ವಿಕ ಆರಂಭದಿಂದಲೇ ರೆಸಿಡೆಂಟ್ (ಮನೆಯಲ್ಲಿ) ಸಂಪಾದಕರಾಗಿ ತಳ ಊರಿದ ಸೋಮಾರಿ ಚೀಪ್ ಬ್ಯೂರೊಗಳ ಕುತಂತ್ರದಿಂದ ನಿಷ್ಠೂರವಾದಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಇಲ್ಲ ಟ್ರಾನ್ಸ್ ಫರ್ ಆಗುತ್ತಿದ್ದಾರೆ. ಒಟ್ಟಾರೆ ಕೊನೆಗೆಉಳಿಯುವುದು ಕೆಲಸಕ್ಕೆ ಬಾರದ, ಹೊಸ ಚಿಂತನೆ ಇಲ್ಲದ, ಕೇವಲ ಬಕಿಟ್ ಹೊಂದಿರುವ ಬಾಲ್ಡಿಗಳು, ಕೆಲವೇ ಮಂದಿ ಮುದಿಯರು, ಸೋಮಾರಿಗಳು, ಮುಗ್ಧರು ಮಾತ್ರ.

ಭವಿಷ್ಯದ ಬೊಗಳೇ ದಾಸರು

ಇನ್ನು ನಮ್ಮ ಪ್ರಳಯಾಂತಕ ನರೇಂದ್ರ ಸ್ವಾಮಿಯ ವಿಷಯಕ್ಕೆ ಬರೋಣ. ಈತ ಮಾತು-ಕಥೆ ಎಂಬ ಸಾರ್ವಜನಿಕ ಕಾರ್ಯಕ್ರಮಗಳನ್ನು ಆರಂಭಿಸಿದ್ದಾನೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದ ಪ್ರಸಾರ ನಿನ್ನೆ ಮತ್ತು ಮೊನ್ನೆ ಜೀ ಟಿವಿಯಲ್ಲಿ ಪ್ರಸಾರವಾಯಿತು. ಅಲ್ಲಿ ಆತನ ಪ್ರಕಾಂಡ ಪಾಂಡಿತ್ಯವನ್ನು ಕೇಳದವರೇ ದುರ್ಭಾಗ್ಯವಂತರು. ಕೆಲವು ಸ್ಯಾಂಪಲ್ ಇಲ್ಲಿವೆ ನೋಡಿ.

ನೋಡಿ, ನನ್ನ ವಿರುದ್ಧ ಪತ್ರಿಕೆಗಳಲ್ಲಿ, ಅಲ್ಲಿ-ಇಲ್ಲಿ ಏನೇನೋ ಬರೆದುಕೊಳ್ತಾ ಇದ್ದಾರೆ. ಬರಕೊಳ್ಳಲಿ ನಾನು ಕೇರ್ ಮಾಡಲ್ಲ. ನಾನು ಆತ್ಮವನ್ನು ನಂಬಿದ್ದೇನೆ. ಆತ್ಮವನ್ನು ಯಾರೂ ನೋಡಲಾಗದು, ಮುಟ್ಟಲಾಗದು, ನಾಶಗೊಳಿಸಲಾಗದು.
ನನ್ನ ಪ್ರಕಾರ ಆತ್ಮ ಎಂದರೆ ಎಷ್ಟೋ ದಿನ ಒಗೆಯದೆ ಕೊಳೆತು ನಾರುವ ಲಂಗೋಟಿ ಇದ್ದಂತೆ. ಈ ಲಂಗೋಟಿಯನ್ನು ಯಾರೂ ನೋಡಲಾಗದು, ಮುಟ್ಟಲಾಗದು, ನಾಶಪಡಿಸಲಾಗದು. ಉಡುಪಿಯಲ್ಲಿ ಒಂದು ಕಾರ್ಯಕ್ರಮದಲ್ಲೂ ಇದನ್ನೇ ಹೇಳಿದೆ. ಅಲ್ಲಿದ್ದ ಸ್ವಾಮೀಜಿ ನನ್ನ ಮಾತನ್ನು ಒಪ್ಪಿದರು, ಒಳ್ಳೆ ಹೋಲಿಕೆ ಕೊಟ್ಟಿದ್ದೀರಿ ಅಂದರು.

ಇದು ನರೇಂದ್ರ ಸ್ವಾಮಿಯ ವಾದಸರಣಿ. ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳು ನಮಗೆ ಗೊತ್ತು. ನರೇಂದ್ರ ಸ್ವಾಮಿಯದು ಲಂಗೋಟಾದ್ವೈತ ಸಿದ್ಧಾಂತ. ಅದನ್ನು ಪ್ರಸಾರ ಮಾಡುವ ಜೀ ವಾಹಿನಿಯೇ ಧನ್ಯ.

ಬೆಳಗಾವಿಯ ಒಬ್ಬಾಕೆ ಧೈರ್ಯ ತಂದುಕೊಂಡು ನರೇಂದ್ರ ಸ್ವಾಮಿಯನ್ನು ಕೇಳಿಯೇ ಬಿಟ್ಟಳು: ಎಲ್ಲ ಸರಿ ಗುರೂಜಿ, ನಿಮಗೆ ನಮ್ಮ ನೈಟಿ ಮೇಲೆ ಯಾಕೆ ಕಣ್ಣು?

ನರೇಂದ್ರ ಸ್ವಾಮಿ ಒಮ್ಮೆ ಮೋಹಕವಾಗಿ ನಕ್ಕು.. ದರಿದ್ರ ಕಣ್ರೀ, ಕೊಳೆ ತುಂಬಿಕೊಂಡಿರುತ್ತೆ ನೈಟಿ. ರಾತ್ರಿ ಗಂಡನ ಜೊತೆನೋ.... ಮಲಗಿ ಎದ್ದು ಬೆಳಿಗ್ಗೆ ಹಾಗೇ ಅಡುಗೆ ಮನೆಗೆ ಬರ‍್ತೀರಿ. ಅಲ್ಲಿರೋದು ಏನು? ಒಲೆ ಬೆಂಕಿ. ಬೆಂಕಿ ಅಂದ್ರೆ ಆದಿಶಕ್ತಿ. ಈಚೆಗಾಗಿರ‍್ತೀರಿ (ಮುಟ್ಟು), ಹಂಗೇ ಅಡುಗೆ ಮನೆಗೆ ಬರ‍್ತೀರಿ. ದರಿದ್ರ ಮೆಟ್ಟಿಕೊಳ್ಳದೇ ಇರುತ್ತಾ. ನೈಟಿ ಚೆನ್ನಾಗಿರಲ್ಲ ಅಂತೀನಪ್ಪ, ನಿಮ್ಮ ನೈಟಿ ಕಟ್ಕೊಂಡು ನನಗೇನಾಗಬೇಕು.. ಎಂದು ನುಡಿಯಿತು.

ನರೇಂದ್ರ ಸ್ವಾಮಿ ಬಿಟ್ವೀನ್ ದ ಲೈನ್ಸ್ ಏನನ್ನು ಹೇಳಿದ ಅನ್ನೋದು ಎಲ್ಲ ಹೆಣ್ಣುಮಕ್ಕಳಿಗೂ ಚೆನ್ನಾಗಿಯೇ ಅರ್ಥವಾಗಿರಬೇಕು. ಆದರೂ ಅವು ಪೆಚ್ಚು ಮುಖ ಮಾಡಿಕೊಂಡು ಕುಳಿತಿದ್ದವೇ ವಿನಃ ಪ್ರತಿಭಟಿಸಲಿಲ್ಲ.

ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಕರೆಂಟೇ ಇರಲ್ಲ, ಬರ‍್ಕೊಂಡು ಬಿಡಿ. ಆಮೇಲೆ ಏನ್ ಮಾಡ್ತೀರಾ? ನಿಮ್ಮ ಲೈಟು, ಫ್ರಿಡ್ಜು, ಮಿಕ್ಸಿ ಯಾವುದೂ ವರ್ಕ್ ಆಗಲ್ಲ. ಎಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ತೀರಾ?...

ಹೀಗೆ ಹೇಳುತ್ತಲೇ ಹೋಯಿತು ನರೇಂದ್ರ ಸ್ವಾಮಿ. ಅದು ಹಾಗೆ ವಟಗುಟ್ಟುತ್ತಲೇ ಇರಲಿ. ಈತನೂ ಸೇರಿದಂತೆ ಎಲ್ಲ ಚಾನಲ್‌ಗಳ ಭಂಡ, ಮೂಢ ಜ್ಯೋತಿಷಿಗಳ ವಿರುದ್ಧ ಒಂದು ಸಣ್ಣ ಆಂದೋಲನ ಹುಟ್ಟಿಕೊಂಡಿದೆ. ಈ ಕೋಡಂಗಿ ಜ್ಯೋತಿಷಿಗಳ ಉಪಟಳ ನಿಯಂತ್ರಿಸುವುದು ಹೇಗೆ? ಎಂಬ ಪೋಸ್ಟ್‌ಗೆ ೪೭ ಮಂದಿ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಮಂದಿ ಇ-ಮೇಲ್ ಮೂಲಕ ಸಲಹೆಗಳನ್ನು ನೀಡಿದ್ದಾರೆ. ಏನು ಮಾಡಬಹುದು ಎಂಬ ಕುರಿತು ಸಾಕಷ್ಟು ವಿಸ್ತ್ರತವಾಗಿ ಚರ್ಚೆ ಆಗಿದೆ. ಈ ಚರ್ಚೆ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ.

ನಾಳೆಯ ಹೊತ್ತಿಗೆ ಈ ಜ್ಯೋತಿಷಿಗಳ ವಿರುದ್ಧದದ ನಮ್ಮ ಪ್ರಜಾಸತ್ತಾತ್ಮಕ ಹೋರಾಟದ ವಿವಿಧ ಸಾಧ್ಯತೆಗಳನ್ನು ಪಟ್ಟಿ ಮಾಡಿ, ಆ ಪ್ರಕಾರವಾಗಿ ಮುಂದುವರೆಯೋಣ.

ಒಂದು ಹಳೆಯ ಜೋಕ್ ಕೇಳಿಸಿಕೊಳ್ಳಿ: ಚಾನಲ್ ಒಂದರ ಜ್ಯೋತಿಷ್ಯ ಕಾರ್ಯಕ್ರಮಕ್ಕೆ ಯುವತಿಯೊಬ್ಬಳು ಕರೆ ಮಾಡುತ್ತಾಳೆ. ಆಕೆಯ ಪ್ರಶ್ನೆ ತನ್ನ ಅಣ್ಣನನ್ನು ಕುರಿತಾಗಿತ್ತು. ಅಣ್ಣ ತುಂಬಾ ಕುಡಿಯುತ್ತಿದ್ದಾನೆ, ಹೇಗೆ ಬಿಡಿಸುವುದು ಅನ್ನೋದು ಆಕೆಯ ಪ್ರಶ್ನೆ.

ನೋಡಮ್ಮಾ, ರಮ್ ಇದೆಯಲ್ಲಾ ಅದು ರಾಹು, ವಿಸ್ಕಿ ಇದೆಯಲ್ಲ ಅದು ಕೇತು. ಒಂದು ಬಾಟಲಿ ರಮ್, ಒಂದು ಬಾಟಲಿ ವಿಸ್ಕಿ ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಡು, ಅವನು ಕುಡಿಯುವುದನ್ನು ಬಿಟ್ಟುಬಿಡುತ್ತಾನೆ.

ಆಕೆ ಮತ್ತೆ ಪ್ರಶ್ನಿಸುತ್ತಾಳೆ. ಗುರೂಜಿ, ನೀರಲ್ಲಿ ಬಿಡಬೇಕಾ?

ಮತ್ತಿನ್ನೇನು ನೀರಿಗೆ ಬಿಡದೇ ನೀನೇ ಕುಡೀತೀಯಾ, ಕುಡಿ... ಗುರೂಜಿ ಸಿಡುಕುತ್ತಾರೆ.

ಆ ಗುರೂಜಿ ಯಾರು ಅಂತ ಹೇಳಬೇಕಾಗಿಲ್ಲ ಅಲ್ಲವೇ?
ಜಪಾನ್್ ಸುನಾಮಿ ದುರಂತದಲ್ಲಿ ಸಾವಿರಾರು ಮಂದಿ ಸತ್ತಾಗ ಪಾಪಿ ಹೇಳಿದ್ದು, " ಹಾವು ತಿನ್ನೋರು ಅದಕ್ಕೆ ಹೀಗಾಗಿದೆ' ! ಏನು ಹೇಳಬೇಕು ಬೊಗಳೆ ಭವಿಷ್ಯಗಾರನಬಗ್ಗೆ !
ಕೃಪೆ: ಸಂಪಾದಕೀಯ