Saturday

ಪೇಪರ್ "ಖುಸಿತ" ವಿಸಯ ! ಇದು ವಿಕೆ ವಿಸ್ಮಯ



ವಿಶಿಷ್ಟ ರಂಗನಾಥ, ವಿಚಿತ್ರ ಅನಾಥರ ಬಗ್ಗೆ ಬರೆದಷ್ಟು ಮುಗಿಯದು. ಮಂಗಳೂರಿನ ವಿಕೆಯಲ್ಲಿ ಮೂಡಿ ಬರುತ್ತಿರುವ ಅಭಿಯಾನ ಪ್ರೆಸ್ ಕ್ಲಬ್ ಗಳಲ್ಲಿ ಸಕಾರಾತ್ಮಕವಾಗಿ ಚರ್ಚೆ ಆಗುತ್ತಿದ್ದರೆ ಒಳಗೊಳಗೆ ಚೇಳುಗಳು ಕೊತ ಕೊತ ಕುದಿಯುತ್ತಿವೆ. ನಾವಡ ಎಕ್ಸ್ ಪೆರಿಮೆಂಟ್ ಗಳಿಂದ ತಾನು ಎಕ್ಸ್ ಚೀಪ್ ಆಗಿಬಿಟ್ಟರೆ ಎಂಬ ಭಯ. ಕೊನೆಗೆ ಅನಾಥನಾಗಿಬಿಟ್ಟರೆ ಎಂಬ ಹೆದರಿಕೆ ಆಸ್ಥಾನ ಸಂಪಾದಕೆ.



ಪೇಪರ್ ಸಂಖ್ಯೆ ಇಳಿಯುತ್ತಿದೆ ಎಂಬ ದೂರು ನೀಡಿ ನಾವಡರನ್ನು ನೀವಾಳಿಸಬಹುದೋ ಎಂಬ ದುರಾಸೆ. ಕಳೆದ ಬಾರಿ ಜಾಹೀರಾತು ವಿಭಾಗ ಮೂಲಕ ಹಣಿಯಲು ಯತ್ನಿಸಿದ್ದರೂ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಹೀಗಾಗಿ ದೂರನ್ನು ಈ ಬಾರಿ ಸರ್ಕುಲೇಶನ್ ವಿಭಾಗ ಮೂಲಕ ಪ್ರಸರಣಕ್ಕೆ ಷಡ್ಯಂತ್ರ ನಡೆಯುತ್ತಿದೆ. ಅಭಿಯಾನದ ಪರಿಣಾಮ ಸರ್ಕುಲೇಶನ್ ಇಳಿದಿದೆ ಎಂಬ ವರಾತ ಎತ್ತಿರುವ ಅನಾಥ ಪಡೆ ದೂರು ಸಿ ಇ ಒಗೆ ನೀಡುವಂತೆ ಎಲ್ಲರ ಬಳಿ ದಂಬಾಲು ಬೀಳುತ್ತಿದೆ. ಏಕೆಂದರೆ ಸಂಪಾದಕರಿಗೆ ಹೇಳಿದರೆ ಕ್ಯಾರೆ ಅನ್ನದೆ ನಾವಡರಿಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬ ಹೆದರಿಕೆ, ಇದು ಹಿಂದಿನ ಅನುಭವ ಕುನಾಥಗೆ ಲಭಿಸಿದೆ.



ಹೀಗಾಗಿ ಸ್ಥಳೀಯ ಹೆಡ್ಡ್ ಗಳ ಬಳಿ " ಬೇರೆ ಯಾರಲ್ಲಿಯೂ ಹೇಳುವುದು ಬೇಡ ನೀವು ಸಿ ಇ ಒಗೆ ದೂರು ನೀಡಿ' ಎಂದು ಚಾಡಿ ಕೆಲಸ ಹೇಳಲು ಆರಂಭಿಸಿದ್ದಾನೆ.



ಈ ಬಾರಿ ಸರ್ಕುಲೇಶನ್ ಮೂಲಕ ಮಣಿಯದಿದ್ದರೆ ಇನ್ನು ಮಂಗಳೂರಿ ಗಣ್ಯರ ಮೂಲಕ ದೂರು ಕೊಡಿಸಬೇಕು ಎಂಬ ಸ್ಕೆಚ್ ರೆಡಿಯಾಗುತ್ತಿದೆ. ನಾವಡರು ಎಷ್ಟೇ ಚಾಣಾಕ್ಷ ನಾದರೂ ಕುನಾಥ ಕೌಟಿಲ್ಯದ ಮುಂದೆ ಯಶಸ್ವಿಯಾಗುವುದೇ ಎಂಬ ಬಗ್ಗೆ ಪ್ರೆಸ್ ಕ್ಲಬ್ ನಲ್ಲಿ ಚರ್ಚೆ ನಡೆಯುತ್ತಿದೆ.



ಅಲ್ಲ ಸ್ವಾಮಿ ಕುನಾಥನ ಹಿಂದೆ ಮಾಡಿದ ಎಡವಟ್ಟಿನಿಂದ ಪತ್ರಿಕೆ ಸಂಖ್ಯೆ ಇಳಿದಿರಬಹುದು, ಒಂದು ತಿಂಗಳ ಅಭಿಯಾನದಿಂದ ಪತ್ರಿಕೆ ಇಳಿಯುವುದಾದರೂ ಹೇಗೆ ? ಕೃಷ್ಣ ಪರಮಾತ್ಮನೇ ಬಲ್ಲ. ಇದರ ಪ್ರಭಾವ ಏನಿದ್ದರೂ ಮುಂದಿನ ೩ ತಿಂಗಳ ಬಳಿಕ ಗೊತ್ತಾಗಬಹುದು. ಮಿಂಚು ಹೊಡೆದ ಬಳಿಕ ಸಿಡಿಲು ಬರುತ್ತದೆ. ಆದರೆ ಭೂಕಂಪ ಆದ ಬಳಿಕ ಸುನಾಮಿ ಬರಲು ಅನೇಕ ಗಂಟೆಗಳು ಹಿಡಿಯುತ್ತವೆ. ಇದೇ ರೀತಿ ವ್ಯತ್ಯಾಸ ತಿಳಿಯದ ದಡ್ಡರು ಕತ್ತೆಗೆ ಮೂರೇ ಕಾಲು ಎನ್ನುತ್ತಾರೆ.

No comments: