Friday

ರಾಘವಾಂಕ ಚರಿತ, ಕುಮಾರ ಪತನ, ವಿಶ್ವೇಶ್ವರ ವಿಜಯ ತ್ರೀ ಶತಕಂ ಇದಂ


ವಿಕ ಚಕ್ರಾಧಿಪತ್ಯವ ಧಿಕ್ಕರಿಸಿ, ಹಾಲಾಹಲವ ಉಂಡು ಭಕ್ತರ ರಕ್ಷಿಸಿ ತಾ ನೀಲ ಕಂಠನೆನಿಸಿದ ತ್ಯಾಗಮೂರ್ತಿ ವಿಶ್ವೇಶ್ವರ ಕೈಲಾಸ ಸೇರಿ ಧನಲಕ್ಷ್ಮೀ ಸಹಿತಂ ಚಂದಂದಿಂ ಆಡಳಿತ ನಡೆಸುತ್ತಿರೆ, ವಿನಾಯಕ, ಮುರುಗ ಸರ್ವ ದೇವ, ಭೂತ ಗಣಂಗಳಿಗೆ ಚೈತನ್ಯ ಸಂಗಡಂ ಭಡ್ತಿಯ ನೀಡಿ ತನ್ನ ಪ್ರತಾಪವಂ ತೋರಿಸುತ ಅಭಯಂ ಗೈಯುತ್ತಿರಲಾಗಿ, ಇತ್ತ ಭರತ ಖಂಡದ ವಿಕ ಚಕ್ರಾಧಿಪತಿ ರಘುಕುಲ ತಿಲಕ ರಾಘವ ಲಂಡನಾ ನಗರಕ್ಕೆರಜಾ ಮಜಾ ಬಿಜಯಂ ಗೈಯುತ್ತಿರಲು..

ಇತ್ತ ಭೂಲೋಕದ ಪಂಪಾಮಾರ್ಗದೊಳು ವೈಕುಂಠ ದ್ವಾರದಲ್ಲಿ ನಿಂತಿರ್ಪ ಅಶೋಕಿಲಾಲ ಮತ್ತು ಕರಿ ಮುಖದ ಗಣಪ ತಾನೇ ದ್ವಾರಪಾಲಕರೆಂದಿನಿಪ ಜಯ ವಿಜಯರೆಂಬ ಗರ್ವದೊಳು ಪ್ರಕಾಶಮಾನ ಆಡಳಿತ ನಡೆಸುತಿರೆ, ಕೆಂಚಣ್ಣ, ಕರಿಯಣ್ಣ ನನಗೆ ಎನೂ ಗೊತ್ತಿಲ್ಲಣ್ಣ ಎಂದುಸಿರದನೂ....

ಅರರೇ...ಇದೇನಿದು... ಮಂಗನೂರಿನ ಸಾಮ್ರಾಜ್ಯದೊಳು ಬಂಡಾಯ ಭುಗಿಲೇಳುತಿರೆ.. ಕುಮಾರ ತನ್ನ ಕಪಿ ಸೇನೆ ಜಾಗೃತಗೊಳಿಸುತ್ತಿರಲು... ಇವರ ಮಂಗಾಟವ ಕಂಡು ಬೆದರದ ಮೈಸೂರಿನ ಝೂ ನಾಡ ಅಧಿಪತಿಯಾಗಿ ಈ ಪರಿಯ ಅಸಂಖ್ಯ ಕಂಡಿರ್ಪ ನಾವಡ, ತನ್ನ ಚೆಂಡೆ ಮದ್ದಳೆ ಬಾರಿಸುತಿರಲು, ಈ ಚರ್ಮ ವಾದ್ಯಕೆ ಕಪಿಸೇನೆ ವಿಲ ವಿಲನೆ ಒದರಾಡಿ ಹಾ ರಾಮಾ, ಹಾ ಕೃಷ್ಣ ಪ್ರಲಾಪಿಸುತಿರಲಾಗಿ..

ಸೀರೆ ಪ್ರಸಂಗವಾದರೆ ಕೃಷ್ಣ ನೆನೆಸು ಬಾ, ಯಾರಿಗಾದರೂ ಕಾಡಿಗೋ, ನೀರಿಲ್ಲದ ನಾಡಿಗೋ ಅಟ್ಟಬೇಕಾದರೆ ವನವಾಸಿ ಕುಮಾರ-ರಾಮನ ನೆನೆಯೋ,

ಅಯ್ಯೋ ಇದೇನಿದು ನಾ ಕಾಣುತಿರೆ.. ಇದು ನಾವಡನ ಬಸಿರು, ಕುಮಾರನ ಹೆಸರಾಯ್ತು, ಇದು ಎಂಚಪೊರ್ಲಾಂಡು, ಇದಂ ಎತ್ತಣಿಂದೆತ್ತ ಸಂಬಂಧವಯ್ಯಾ

ಎಂದು ದಾಸ ವರೇಣ್ಯ ಚಾಡಿ ದಾಸ, ಹೊನ್ನು, ಕ್ವಾಟರ್ ದಾಸ, ಹರ ಹರಾ ಹರಾಮಿ ಕೊಳಕು ಬಾಯಿಯಿಂದಂ ಕುವಚನಗಳನ್ನು ಉದುರಿಸಿ, ಹಲುಬಿದ ಎಂಬಲ್ಲಿಗೆ ಒಂದು ಷಟ್ಪದಿ ಮುಕ್ತಾಯಂ.

ಇತ್ತ ಇದ್ದಲ್ಲಿಯೇ ಚರಂಡಿ ಹೂಳೊಳು ನಲುಗುತ್ತಿರೆ ವ ರದ್ದಿಗಾರರು ಇನ್ ಕ್ರಿಮಿನೆಂಟ್ ಇಲ್ಲದೆ ನಾ ಕೆಲಸ ಮಾಡೆವು ಎಂದು ಕಂಪನಿಗಳಲ್ಲಿ ತಾ ಕ್ರಿಮಿಗಳೆಂಬ ಕೊಂಚಮೂ ಮಾಹಿತಿ ಇಲ್ಲದೆ ಒದರುತ್ತಿರಲು.. ನೆಟ್ ಗಳೇ ನೆಟ್ ವರ್ಕ ಆಗಿರ್ಪ ಬರಿದೇ ಕಾಸು ಹಾಸೆನ್ನುವ, ಹಳೆ ಫೈಲುಗಳನೇ ದೋಸೆಯಂತೆ ಮಗುಚಿ ಹಾಕುತ್ತ ಬರಿದೇ ತಮ್ಮ ನಾಮಕರಣವ ಮಾಡತಿರ್ಪ ಪರ್ತಕರ್ತರ ಕಂಡು ವಿಹ್ವಲನಾದ ಕೆಲಸ ಖೋರ ನಾವಡ, ಮುದಿ ಹುಲಿಗಳಿಗೆ ರಾಘವ ಕೊಡಮಾಡಿದ ರಿಂಗ್ ಹಿಡಿದು ಚೆಂದದಿಂ ಆಡಿಸುತ್ತಿರಲು, ಕಪಿಸೇನೆ ಬಾಲ ಮುದುರಿ ರೋದಿಸುತ್ತಿರಲು... ಇಲ್ಲಿಗೆ ಪಂಚಪದಿ ಮುಕ್ತಾಯಂ

(ಕೃಪೆ: ರಾಘಾವಂಕ ಚರಿತ ಮತ್ತು ವಿಶ್ವೇಶ್ವರ ವಿಜಯ)

1 comment:

Anonymous said...

dayavittu innu mng vik bagge bareybedi... nanage smsye aaguttade. illige mugisibidi..-j k.