
ಪತ್ರಿಕೋದ್ಯಮಿಗಳು ಹೇಗೆ ಬೆಳೆಯುತ್ತಾರೆ ಎಂಬುದು ಬಟಾ ಬಯಲಾಗುತ್ತಿದೆ. ನಮ್ಮ ಬೆಂಗಳೂರಿನ ಮೂರು ಖತರ್ನಾಕ್ ವರದಿಗಾರರು ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿ ದೋಚಲು ಹೊಂಚು ಹಾಕಲು ಹೋಗಿ ಇಂಗು ತಿಂದ ಮಂಗನಂತಾಗಿದ್ದಾರೆ.
ಈ ಬ್ಲ್ಯಾಕ್ ಮೇಲ್ ಪತ್ರಕರ್ತರನ್ನು ಬೆಂಗಳೂರಿನ ಕಳ್ಳ ಪೊಲೀಸರು ಬಂಧಿಸಿಲ್ಲ. ಈ ಸುದ್ದಿಯನ್ನು ಎಲ್ಲ ಪತ್ರಿಕೆಗಳು ಪ್ರಕಟಿಸಿಲ್ಲ. ಪ್ರಕಟಿಸಿದವರು ವರದಿಗಾರರ ಹೆಸರು ಹಾಕಿಲ್ಲ. ಒಬ್ಬಾತ ಅಹಿಂದೂ ಪತ್ರಿಕೆಯ ತುಂಬಾ ಹಳೆಯ ವರದಿಗಾರ ಮತ್ತು ಕಸುಬಿನಲ್ಲಿ ಪಳಗಿದ ಹಳೇ ಗಿರಾಕಿ. ಇನ್ನಿಬ್ಬರು ಪತ್ರಿಕೋದ್ಯಮದಲ್ಲಿ ಇರದ ಉ ಟಿವಿ ವಂಚಕರು. ಯಾವ ಟಿವಿ ಚಾನಲುಗಳು ಎಫ್ ಐ ಆರ್, ಪೋಲೀಸ್, ಕ್ರೈಮ್ ಸ್ಟೋರಿಗಾಗಿ ಅರ್ಧ ಗಂಟೆ ಕಾರ್ಯಕ್ರಮ ಮಾಡುವ ಮನಸ್ಸು ಮಾಡಿಲ್ಲ.
ಕುಲ ಬಾಂಧವರ ಬಗ್ಗೆ ಅಸ್ಟೊಂದು ಕನಿಕರ. ಖದೀಮರು ಸಚಿವೆ ಶೋಭಾ ಕರಂದ್ಲಾಜೆ ಹೆಸರು ಹೇಳಿಕೊಂಡು ಡೀಲ್ ಮಾಡಲು ಹೋಗಿದ್ದರು. ಆಂಧ್ರ ಕರೆಂಟು ಕಂಪೆನಿಗೆ ಸರಕಾರ ೧೭ ಕೋಟಿ ಹಣಕೊಡಲು ಇತ್ತು. ಅದನ್ನು ವಸೂಲು ಮಾಡಲು ಕಂಪನಿಯಿಂದ ಹತ್ತು ಪೆರ್ಸೆಂಟ್ ಕೇಳಲಾಗಿತ್ತು. ಇದರ ಹಿಂದಿರುವ ಸೂತ್ರದಾರ ಒಬ್ಬ ಬಿಜೆಪಿ ಎಮೆಲ್ಸಿ ಇದ್ದಾನೆ.ಯಡ್ಡಿ ಸರಕಾರ ಬಂದ ಮೇಲೆ ಪತ್ರಿಕೋದ್ಯಮದ ಭ್ರಷ್ಟಚಾರ ಪರಕಾಷ್ಟೆ. ತಲುಪಿದೆ. ವಿಧಾನಸೌಧ, ಎಂ ಎಸ್ ಕಟ್ಟಡ, ಸಿಟಿ ಕಾರ್ಪೊರೇಷನ್ ದೊಡ್ಡ ಅಡ್ಡಗಾಲು. ಮಿಡ್ಲು ಮ್ಯಾನ್ ಬೇಕಾಗಿಲ್ಲ. ಬಿಲ್ ಪಾಸು ಮಾಡುತ್ತಾರೆ, ಟೆಂಡರ್ ಫಿಕ್ಸ್ ಆಗುತ್ತೆ. ಹೀಗಿದೆ ಪತ್ರಿಕೋದ್ಯಮ.
ಕೃಪೆ: ನ್ಯೂ ಮೀಡಿಯಾ ಬ್ಲಾಗ್.....
No comments:
Post a Comment