ಹೇಳುವುದು ಶಾಸ್ತ್ರ ಕುಡಿಯುವುದು ಎಣ್ಣೆ (ಗುಂಡು) ಹಾಗಾಯ್ತು ಗಂಗಾವತಿ ವಿಕೆ ಆವೃತ್ತಿ ಮುಖ್ಯಸ್ಥನ ಪ್ರವೃತ್ತಿ. ವಿಷಯ ಏನಪ್ಪಾ ಅಂಥಂದ್ರೆ ಈ ಆವೃತ್ತಿ ವಿಕೆ ಸಿಬ್ಬಂದಿ ಯೊಬ್ಬ (ಲೋಕೇಶ ಗಂಗಾವತಿ) ಅಕ್ರಮ ಮದ್ಯ ತಯಾರಿಕೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಆದರೆ ವಿಕೆ ಹೆಸರು ಹೇಳಿ ತಪ್ಪಿಸಿಕೊಂಡಿದ್ದಾನೆ. ಈತನಿ ಅಕ್ರಮ ಸರಾಯಿ ಜಾಲದ ದಂಧೆಯಲ್ಲಿ ಮನೆಹಾಳ ಚಂದ್ರನಿಗೂ ಪಾಲಿದೆ ಎಂಬ ಆರೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವುದೋ ಆಸ್ಪತ್ರೆಯಲ್ಲಿ ರಕ್ತ ನೀಡುವಾಗ ಹಣ ಪಡೆದರು ಎಂಬ ಕಾರಣಕ್ಕೆ ವಿಷಯ ಗೊತ್ತೇ ಇಲ್ಲದ ಮುಗ್ಧ ಗಂಗಾವತಿಯ ಜನಪ್ರಿಯ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಸರಣಿ ಲೇಖನಗಳನ್ನೇ ಬರೆಸಿದ. ಪರಣ್ಣ ವಸೂಲಿ ಏಕಣ್ಣ ಎಂದೆಲ್ಲಾ ಹಾಯ್ ಬೆಂಗೂರು ಗಿಂತಲೂ ಕೀಳಾಗಿ ಬರಹಗಳನ್ನು ಪ್ರಕಟಿಸಿದ.
ಎರಡು ನಾಲಿಗೆ ನೀಚನ ದುರ್ಬುಧಿ ನೋಡಿ. ಈತನ ಸಿಬ್ಬಂದಿಯೇ ಜಾಲದಲ್ಲಿ ಶಾಮೀಲಾಗಿದ್ದರೂ ಪತ್ರಿಕೆ ಹೆಸರನ್ನು ಬರೆಸದೆ ಆತನನ್ನು ಮನೆಗೆ ಕಳುಹಿಸಲು ಶಿಫಾರಸು ಮಾಡಿದ್ದಾನೆ. ಅದುವರೆಗೆ ಆತನ ಎಲ್ಲ ಅಕ್ರಮಗಳ ಬಗ್ಗೆ ಸಮ್ಮತಿ ನೀಡಿ ಲಾಭ ಪಡೆದು ಸಿಕ್ಕಿ ಬಿದ್ದ ಎಂದಾಕ್ಷಣ ನೀವಾಳಿಸಿದ್ದಾನೆ. ಒಳ್ಳೆಯವರನ್ನೇ ಕಿತ್ತು ಹಾಕಿದ ಕೀಚಕನಿಗೆ ತನ್ನವರು ದಂಧೆಯಲ್ಲಿ ಸಿಕ್ಕಿಬಿದ್ದಾಗ ರಕ್ಷಿಸದೆ ಒದ್ದೋಡಿಸುವುದು ದೊಡ್ಡ ವಿಚಾರವಲ್ಲ. ಆದರೆ ದೊಡ್ಡ ಸಂಸ್ಥೆ ಎನ್ನುವ ಸಣ್ಣ ಮನಸ್ಸಿನವರೇ ಇರುವ ಟೈಮ್ಸ್ ಈ ಬಗ್ಗೆ ಏನನ್ನುತ್ತದೆ ?
ಸ್ಥಳೀಯ ಚಾನೆಲ್ ಗಳು, ಸ್ಥಳೀಯ ಪತ್ರಿಕೆಗಳು ರಾಜ್ಯದ ನಂ.ವನ್ ಪತ್ರಿಕೆ (ಕೆಲವೇ ದಿನ) ಹೆಸರು ಹಾಕಿದ್ದಾರೆ. ಆದೆ ವಿಕೆ ಮಾತ್ರ ಏನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದೆ.