ಬಹಳ ದಿನಗಳ ವಿರಾಮ ಬಳಿಕ ಮತ್ತೆ ಪೆನ್ ಕೈ ಹಿಡಿಯುತ್ತಿದ್ದೇನೆ. ಮಾಧ್ಯಮದಲ್ಲಿ ಬೆಳವಣಿಗೆ ನಡೆಯುತ್ತಿದೆ. ಯಾರದೇ ಮುಖಪುಟ (ಫೇಸ್ ಬುಕ್) ನೋಡಿದರೂ ವೈರಾಗ್ಯ ಬಿಡುವ ಮಾತು ಆಡುತ್ತಿದ್ದಾರೆ. ಎಲ್ಲರೂ ಉಂಡೆನಾಮ ಹಾಕಿಸಿಕೊಳ್ಳುತ್ತಿದ್ದಾರೆ. ಒಳ್ಳೆಯ ಬೆಳವಣಿಗೆಯೋ ಕೆಟ್ಟ ಬೆಳವಣಿಗೆಯೋ ಗೊತ್ತಿಲ್ಲ. ಸಮಯ ಶಶಿಧರ ಭಟ್ಟರು ಸಮಯ ಬಿಡುವ ಸಮಯ ಬಂದಿದೆ. ವಿಕೆ ಯಿಂದ ಅರವಿಂದ ನಾವಡರು ಬಿಡುವ ಬಗ್ಗೆ ವಿಶ್ವೇಶ್ವರ ಭಟ್ಟರ ಜತೆ ಚರ್ಚೆ ನಡೆಸಿದ ಮಾಹಿತಿ ಬಂದಿದೆ. ವಿಕೆಯಿಂದ ಬಿಡಲು ಸಾಲುಗಟ್ಟಿ ನಿಂತಿರುವುದು ಮತ್ತು ವಿಜಯವಾಣಿ, ಕನ್ನಡಪ್ರಭ, ಪ್ರಜಾವಣಿ, ಸುವರ್ಣ ಚಾನೆಲ್ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರತಿಭಾನ್ವಿತರಾದ ಸಾಪ್ತಾಹಿಕ ಮುಖ್ಯಸ್ಥೆ ವೆಂಕಟಲಕ್ಷ್ಮಿ, ಮಂಗಳೂರು ಮುಖ್ಯವರದಿಗಾರ ಜಿತೇಂದ್ರ ಕುಂದೇಶ್ವರ, ವಿನಾಯಕ ಕೋಡ್ಸರ, ಜಲರೆಡ್ಡಿ ಈಗಾಗಲೇ ಕೆಟ್ಟ ಬಾಸ್ ಕರಿಸ್ವಾಮಿಯ ದೌರ್ಜನ್ಯ ತಾಳದೆ ವಿಜಯ ಕರ್ನಾಟಕ ತೊರೆದಿದ್ದಾರೆ. ಇನ್ನು ಶಶಿಧರ ಭಟ್ಟರು ಸಮಯ ಬಿಡುವ ಬಗ್ಗೆ ಇತ್ತೀಚೆಗೆ 4 ತಿಂಗಳಿಂದ ಊಹಾಪೋಹಗಳಿದ್ದವು. ಇದೀಗ ಒಂದರ ಅಂತ್ಯ ಇನ್ನೊಂದರ ಆರಂಭ ಎಂದು ಭಟ್ಟರು ವೇದಾಂತ ಹೇಳುವ ಹಿಂದೆ ರಾಜೀನಾಮೆ ನೋವಿದೆ.
ಇನ್ನು ಎಂದಿನಂತೆ ಸಂಕೇಶ್ವರ ವಿಜಯವಾಣಿಗೆ ಉದಯವಾಣಿಯಿಂದ ಕ್ಯೂ ನಿಂತಿದೆ. ರವಿ ಹೆಗಡೆ ಅವರ ಬೆದರಿಕೆಗೆ ರಾಘವೇಂದ್ರ ಗಣಪತಿ, ಚಿಕ್ಕ ಗೌಡ, ದೊಡ್ಡ ಗೌಡರು ಹೊರಟಿದ್ದಾರೆ. ಸದ್ಯಕ್ಕೆ ಉಷಾಕಿರಣ ಟೀಮ್ ಇದೆ. ಸೆಟ್ ಮಾಡಿದ ಬಳಿಕ ವಿಕೆ ಹಳೆ ಪೌಂಡರ್ ಕೆಲಸಗಾರರನ್ನು ಸೇರ್ಪಡೆ ಗೊಳಿಸುವ ಪ್ರಯತ್ನ ನಡೆಯುತ್ತಿದೆ. ಮಂಗಳೂರಿಂದ ಹರಗಿ ಪ್ರಯತ್ನಿಸುತ್ತಿದ್ದರೆ, ಕು.ನಾಥ ವಿಕೆಯಲ್ಲಿ ಸಮಸ್ಯೆ ಆದರೆ ಹೋಗುತ್ತೇನೆ ಎಂದಿರುವ ಮಾಹಿತಿ ಇದೆ. ಆದರೆ ರಾಮಕೃಷ್ಣನ ಬಾಸ್ ಅರುಣ್ ಈಗಾಗಲೆ ನಿರ್ಧಾರ ಕೈಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನದ ಆಫರ್ ನೀಡಲಾಗಿದೆ. ಅರುಣ್ ಹಿಂದೆ ಬಾಲದಂತೆ ಕಪಿ ಸೇನೆ ಸಾಗಲಿದೆ ಎನ್ನುವ ಗುಮಾನಿ ಇದೆ. ಪ್ರಿಂಟಿಂಗ್ ತಜ್ಞ ಜಿ.ಎಸ್. ಕುಲಕರ್ಣಿ ತನ್ನ ಸಂಬಂಧಿಕರನ್ನು ವಿಕೆ ಯಲ್ಲಿರುವ ಆಯಕಟ್ಟಿನ ಮುಖ್ಯಸ್ಥರನ್ನು ವಿಜಯವಾಣಿಗೆ ಕರೆಸಿಕೊಳ್ಳಲು ಮಾತುಕತೆ ನಡೆಸಿದ್ದಾರೆ.
ಜಿತೇಂದ್ರ ಕುಂದೇಶ್ವರ ರಾಜೀನಾಮೆ ಪತ್ರವನ್ನು ಬ್ಲಾಗ್ ಗೆ ಪೋಸ್ಟ್ ಮಾಡಿದ್ದು ಅದನ್ನು ಯಥಾವತ್ ಪ್ರಕಟಿಸುತ್ತಿದ್ದೇವೆ. ಓದುಗರ ನೋವು, ಸೀನಿಯರ್ ಗಳ ದಬ್ಬಾಳಿಕೆ, ಲೈಂಗಿಕ ಕಿರುಕುಳಗಳ ಬಗ್ಗೆ ನೀವು ಪೋಸ್ಟ್ ಮಾಡಬಹುದು.ವಿ
ವಿಕೆ ಗೆ ಕುಂದೇಶ್ವರ ಡೈವೋರ್ಸ್ !
ಸುಮಾರು 11 ವರ್ಷಗಳ ಕಾಲ ದುಡಿದ ವಿಜಯ ಕರ್ನಾಟಕದಿಂದ ದೂರವಾಗುತ್ತಿದ್ದೇನೆ. ಕಂಪನಿ ನನ್ನಿಂದ ಬಲವಂತದ ಡೈವೋರ್ಸ್ ಕೇಳಿದೆ.ನಕ್ಸಲ್, ಮಂಗಳೂರು ಟೆರರ್, ಅಂಡರ್ ವಲ್ಡ್, ಸರಣಿ ಹಂತಕ ಮೋಹನ, ಬೀದಿ ಮಕ್ಕಳ ಕುರಿತ ಸಾಮಾಜಿಕ ಕಳಕಳಿ, ಬುಡಕಟ್ಟು ಜನಾಂಗ ಕೊರಗರ ಬಗ್ಗೆ ಸರಣಿ ಲೇಖಗಳಿಗೆ ವಡ್ಡರ್ಸೆ, ಗ್ರಾಮೀಣ ವರದಿಗಾರಿಕೆಗೆ ಪ.ಗೋ. ಇತ್ತೀಚೆಗೆ ಮಾನವೀಯ ವರದಿಗಳಿಗೆ ಗವರ್ನರ್ ಕೈಯಲ್ಲಿ ಚರಕ ಅವಾರ್ಡ್ ಕೂಡಾ ಪಡೆದಿದ್ದೆ. ವಿಮಾನ ದುರಂತ ವರದಿಗಾಗಿ ಸಂಪಾದಕರಿಂದ ಶಹಬ್ಬಾಸ್ ಪತ್ರ, ಸಿಇಒ ರಿಂದ ವಿಶೇಷ ಪ್ರಶಂಸಾಪತ್ರ ಬಂದ ಆರೇ ತಿಂಗಳಲ್ಲಿ ಗಂಗಾವತಿಗೆ ವರ್ಗಾವಣೆ ಮಾಡಿಸಿದರು.ಿಸಂಪಾದಕರಿಂದ ಶಿಫಾರಸು, ಸಿ ಇ ಒ ನಿಂದ ಮೆಚ್ಚುಗೆ ಪತ್ರ ನೀಡಿದ್ದರು, ವಿಶ್ವೇಶ್ವರ ಭಟ್ಟರು ವಿಕೆ ಬಿಟ್ಟ ಬಳಿಕ ನನಗೆ ವರ್ಗಾವಣೆ ಪತ್ರ ಕೊಟ್ಟರು. ಇದರ ಹಿಂದೆ ಕು.ನಾಥನ ಕುಮ್ಮಕ್ಕಿತ್ತು. ಗಂಗಾವತಿಯಲ್ಲಿ ಕೆಟ್ಟ ಬಾಸ್ ಅನರ್ಹ ತುಲ್ಲುಹಾಳ ಚಂದ್ರ ನನಗೆ ಆಫೀಸ್ ಅಸಿಸ್ಟೆಂಟ್ ಕೆಲಸ ನೀಡಿ ಅವಮಾನಿಸಿದರು. ಬಳಿಕ ರಾಜೀನಾಮೆ ಪತ್ರ ಕೇಳಿದರು. ಕಿರುಕುಳಕ್ಕೆ ನೊಂದು ರಾಜೀನಾಮೆ ನೀಡಿದ್ದೇನೆ. ಹಣತಿನ್ನುವ ಭ್ರಷ್ಟರೇ ನನ್ನ ಮೇಲೆ ಸವಾರಿ ಮಾಡಿದರು ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಇದೆಂಥ ಅನ್ಯಾಯ?
-ಜಿತೇಂದ್ರ ಕುಂದೇಶ್ವರ ಮಾಜಿ ಪ್ರಧಾನ ವರದಿಗಾರ ವಿಕೆ.