Thursday

ಅಕ್ರಮ ದಂಧೆ: ವಿಕೆ ಸಿಬ್ಬಂದಿ ಸೆರೆ

ಹೇಳುವುದು ಶಾಸ್ತ್ರ ಕುಡಿಯುವುದು ಎಣ್ಣೆ (ಗುಂಡು) ಹಾಗಾಯ್ತು ಗಂಗಾವತಿ ವಿಕೆ ಆವೃತ್ತಿ ಮುಖ್ಯಸ್ಥನ ಪ್ರವೃತ್ತಿ. ವಿಷಯ ಏನಪ್ಪಾ ಅಂಥಂದ್ರೆ ಈ ಆವೃತ್ತಿ ವಿಕೆ ಸಿಬ್ಬಂದಿ ಯೊಬ್ಬ (ಲೋಕೇಶ ಗಂಗಾವತಿ) ಅಕ್ರಮ ಮದ್ಯ ತಯಾರಿಕೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಆದರೆ ವಿಕೆ ಹೆಸರು ಹೇಳಿ ತಪ್ಪಿಸಿಕೊಂಡಿದ್ದಾನೆ. ಈತನಿ ಅಕ್ರಮ ಸರಾಯಿ ಜಾಲದ ದಂಧೆಯಲ್ಲಿ ಮನೆಹಾಳ ಚಂದ್ರನಿಗೂ ಪಾಲಿದೆ ಎಂಬ ಆರೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವುದೋ ಆಸ್ಪತ್ರೆಯಲ್ಲಿ ರಕ್ತ ನೀಡುವಾಗ ಹಣ ಪಡೆದರು ಎಂಬ ಕಾರಣಕ್ಕೆ ವಿಷಯ ಗೊತ್ತೇ ಇಲ್ಲದ ಮುಗ್ಧ ಗಂಗಾವತಿಯ ಜನಪ್ರಿಯ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಸರಣಿ ಲೇಖನಗಳನ್ನೇ ಬರೆಸಿದ. ಪರಣ್ಣ ವಸೂಲಿ ಏಕಣ್ಣ ಎಂದೆಲ್ಲಾ ಹಾಯ್ ಬೆಂಗೂರು ಗಿಂತಲೂ ಕೀಳಾಗಿ ಬರಹಗಳನ್ನು ಪ್ರಕಟಿಸಿದ.

ಎರಡು ನಾಲಿಗೆ ನೀಚನ ದುರ್ಬುಧಿ ನೋಡಿ. ಈತನ ಸಿಬ್ಬಂದಿಯೇ ಜಾಲದಲ್ಲಿ ಶಾಮೀಲಾಗಿದ್ದರೂ ಪತ್ರಿಕೆ ಹೆಸರನ್ನು ಬರೆಸದೆ ಆತನನ್ನು ಮನೆಗೆ ಕಳುಹಿಸಲು ಶಿಫಾರಸು ಮಾಡಿದ್ದಾನೆ. ಅದುವರೆಗೆ ಆತನ ಎಲ್ಲ ಅಕ್ರಮಗಳ ಬಗ್ಗೆ ಸಮ್ಮತಿ ನೀಡಿ ಲಾಭ ಪಡೆದು ಸಿಕ್ಕಿ ಬಿದ್ದ ಎಂದಾಕ್ಷಣ ನೀವಾಳಿಸಿದ್ದಾನೆ. ಒಳ್ಳೆಯವರನ್ನೇ ಕಿತ್ತು ಹಾಕಿದ ಕೀಚಕನಿಗೆ ತನ್ನವರು ದಂಧೆಯಲ್ಲಿ ಸಿಕ್ಕಿಬಿದ್ದಾಗ ರಕ್ಷಿಸದೆ ಒದ್ದೋಡಿಸುವುದು ದೊಡ್ಡ ವಿಚಾರವಲ್ಲ. ಆದರೆ ದೊಡ್ಡ ಸಂಸ್ಥೆ ಎನ್ನುವ ಸಣ್ಣ ಮನಸ್ಸಿನವರೇ ಇರುವ ಟೈಮ್ಸ್ ಈ ಬಗ್ಗೆ ಏನನ್ನುತ್ತದೆ ?


ಸ್ಥಳೀಯ ಚಾನೆಲ್ ಗಳು, ಸ್ಥಳೀಯ ಪತ್ರಿಕೆಗಳು ರಾಜ್ಯದ ನಂ.ವನ್ ಪತ್ರಿಕೆ (ಕೆಲವೇ ದಿನ) ಹೆಸರು ಹಾಕಿದ್ದಾರೆ. ಆದೆ ವಿಕೆ ಮಾತ್ರ ಏನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದೆ.


Tuesday

ಮಾಧ್ಯಮ ಸೇರುವ-ಬಿಡುವ ಪರ್ವ ಕಾಲ. ಶಶಿ, ವೆಂಕಟಿ, ಕುಂದೇಶ,


ಬಹಳ ದಿನಗಳ ವಿರಾಮ ಬಳಿಕ ಮತ್ತೆ ಪೆನ್ ಕೈ ಹಿಡಿಯುತ್ತಿದ್ದೇನೆ. ಮಾಧ್ಯಮದಲ್ಲಿ ಬೆಳವಣಿಗೆ ನಡೆಯುತ್ತಿದೆ. ಯಾರದೇ ಮುಖಪುಟ (ಫೇಸ್ ಬುಕ್) ನೋಡಿದರೂ ವೈರಾಗ್ಯ ಬಿಡುವ ಮಾತು ಆಡುತ್ತಿದ್ದಾರೆ. ಎಲ್ಲರೂ ಉಂಡೆನಾಮ ಹಾಕಿಸಿಕೊಳ್ಳುತ್ತಿದ್ದಾರೆ. ಒಳ್ಳೆಯ ಬೆಳವಣಿಗೆಯೋ ಕೆಟ್ಟ ಬೆಳವಣಿಗೆಯೋ ಗೊತ್ತಿಲ್ಲ. ಸಮಯ ಶಶಿಧರ ಭಟ್ಟರು ಸಮಯ ಬಿಡುವ ಸಮಯ ಬಂದಿದೆ. ವಿಕೆ ಯಿಂದ ಅರವಿಂದ ನಾವಡರು ಬಿಡುವ ಬಗ್ಗೆ ವಿಶ್ವೇಶ್ವರ ಭಟ್ಟರ ಜತೆ ಚರ್ಚೆ ನಡೆಸಿದ ಮಾಹಿತಿ ಬಂದಿದೆ. ವಿಕೆಯಿಂದ ಬಿಡಲು ಸಾಲುಗಟ್ಟಿ ನಿಂತಿರುವುದು ಮತ್ತು ವಿಜಯವಾಣಿ, ಕನ್ನಡಪ್ರಭ, ಪ್ರಜಾವಣಿ, ಸುವರ್ಣ ಚಾನೆಲ್ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರತಿಭಾನ್ವಿತರಾದ ಸಾಪ್ತಾಹಿಕ ಮುಖ್ಯಸ್ಥೆ ವೆಂಕಟಲಕ್ಷ್ಮಿ, ಮಂಗಳೂರು ಮುಖ್ಯವರದಿಗಾರ ಜಿತೇಂದ್ರ ಕುಂದೇಶ್ವರ, ವಿನಾಯಕ ಕೋಡ್ಸರ, ಜಲರೆಡ್ಡಿ ಈಗಾಗಲೇ ಕೆಟ್ಟ ಬಾಸ್ ಕರಿಸ್ವಾಮಿಯ ದೌರ್ಜನ್ಯ ತಾಳದೆ ವಿಜಯ ಕರ್ನಾಟಕ ತೊರೆದಿದ್ದಾರೆ. ಇನ್ನು ಶಶಿಧರ ಭಟ್ಟರು ಸಮಯ ಬಿಡುವ ಬಗ್ಗೆ ಇತ್ತೀಚೆಗೆ 4 ತಿಂಗಳಿಂದ ಊಹಾಪೋಹಗಳಿದ್ದವು. ಇದೀಗ ಒಂದರ ಅಂತ್ಯ ಇನ್ನೊಂದರ ಆರಂಭ ಎಂದು ಭಟ್ಟರು ವೇದಾಂತ ಹೇಳುವ ಹಿಂದೆ ರಾಜೀನಾಮೆ ನೋವಿದೆ.

ಇನ್ನು ಎಂದಿನಂತೆ ಸಂಕೇಶ್ವರ ವಿಜಯವಾಣಿಗೆ ಉದಯವಾಣಿಯಿಂದ ಕ್ಯೂ ನಿಂತಿದೆ. ರವಿ ಹೆಗಡೆ ಅವರ ಬೆದರಿಕೆಗೆ ರಾಘವೇಂದ್ರ ಗಣಪತಿ, ಚಿಕ್ಕ ಗೌಡ, ದೊಡ್ಡ ಗೌಡರು ಹೊರಟಿದ್ದಾರೆ. ಸದ್ಯಕ್ಕೆ ಉಷಾಕಿರಣ ಟೀಮ್ ಇದೆ. ಸೆಟ್ ಮಾಡಿದ ಬಳಿಕ ವಿಕೆ ಹಳೆ ಪೌಂಡರ್ ಕೆಲಸಗಾರರನ್ನು ಸೇರ್ಪಡೆ ಗೊಳಿಸುವ ಪ್ರಯತ್ನ ನಡೆಯುತ್ತಿದೆ. ಮಂಗಳೂರಿಂದ ಹರಗಿ ಪ್ರಯತ್ನಿಸುತ್ತಿದ್ದರೆ, ಕು.ನಾಥ ವಿಕೆಯಲ್ಲಿ ಸಮಸ್ಯೆ ಆದರೆ ಹೋಗುತ್ತೇನೆ ಎಂದಿರುವ ಮಾಹಿತಿ ಇದೆ. ಆದರೆ ರಾಮಕೃಷ್ಣನ ಬಾಸ್ ಅರುಣ್ ಈಗಾಗಲೆ ನಿರ್ಧಾರ ಕೈಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನದ ಆಫರ್ ನೀಡಲಾಗಿದೆ. ಅರುಣ್ ಹಿಂದೆ ಬಾಲದಂತೆ ಕಪಿ ಸೇನೆ ಸಾಗಲಿದೆ ಎನ್ನುವ ಗುಮಾನಿ ಇದೆ. ಪ್ರಿಂಟಿಂಗ್ ತಜ್ಞ ಜಿ.ಎಸ್. ಕುಲಕರ್ಣಿ ತನ್ನ ಸಂಬಂಧಿಕರನ್ನು ವಿಕೆ ಯಲ್ಲಿರುವ ಆಯಕಟ್ಟಿನ ಮುಖ್ಯಸ್ಥರನ್ನು ವಿಜಯವಾಣಿಗೆ ಕರೆಸಿಕೊಳ್ಳಲು ಮಾತುಕತೆ ನಡೆಸಿದ್ದಾರೆ.

ಜಿತೇಂದ್ರ ಕುಂದೇಶ್ವರ ರಾಜೀನಾಮೆ ಪತ್ರವನ್ನು ಬ್ಲಾಗ್ ಗೆ ಪೋಸ್ಟ್ ಮಾಡಿದ್ದು ಅದನ್ನು ಯಥಾವತ್ ಪ್ರಕಟಿಸುತ್ತಿದ್ದೇವೆ. ಓದುಗರ ನೋವು, ಸೀನಿಯರ್ ಗಳ ದಬ್ಬಾಳಿಕೆ, ಲೈಂಗಿಕ ಕಿರುಕುಳಗಳ ಬಗ್ಗೆ ನೀವು ಪೋಸ್ಟ್ ಮಾಡಬಹುದು.ವಿ

ವಿಕೆ ಗೆ ಕುಂದೇಶ್ವರ ಡೈವೋರ್ಸ್ !

ಸುಮಾರು 11 ವರ್ಷಗಳ ಕಾಲ ದುಡಿದ ವಿಜಯ ಕರ್ನಾಟಕದಿಂದ ದೂರವಾಗುತ್ತಿದ್ದೇನೆ. ಕಂಪನಿ ನನ್ನಿಂದ ಬಲವಂತದ ಡೈವೋರ್ಸ್ ಕೇಳಿದೆ.ನಕ್ಸಲ್, ಮಂಗಳೂರು ಟೆರರ್, ಅಂಡರ್ ವಲ್ಡ್, ಸರಣಿ ಹಂತಕ ಮೋಹನ, ಬೀದಿ ಮಕ್ಕಳ ಕುರಿತ ಸಾಮಾಜಿಕ ಕಳಕಳಿ, ಬುಡಕಟ್ಟು ಜನಾಂಗ ಕೊರಗರ ಬಗ್ಗೆ ಸರಣಿ ಲೇಖಗಳಿಗೆ ವಡ್ಡರ್ಸೆ, ಗ್ರಾಮೀಣ ವರದಿಗಾರಿಕೆಗೆ .ಗೋ. ಇತ್ತೀಚೆಗೆ ಮಾನವೀಯ ವರದಿಗಳಿಗೆ ಗವರ್ನರ್ ಕೈಯಲ್ಲಿ ಚರಕ ಅವಾರ್ಡ್ ಕೂಡಾ ಪಡೆದಿದ್ದೆ. ವಿಮಾನ ದುರಂತ ವರದಿಗಾಗಿ ಸಂಪಾದಕರಿಂದ ಶಹಬ್ಬಾಸ್ ಪತ್ರ, ಸಿಇಒ ರಿಂದ ವಿಶೇಷ ಪ್ರಶಂಸಾಪತ್ರ ಬಂದ ಆರೇ ತಿಂಗಳಲ್ಲಿ ಗಂಗಾವತಿಗೆ ವರ್ಗಾವಣೆ ಮಾಡಿಸಿದರು.ಿಸಂಪಾದಕರಿಂದ ಶಿಫಾರಸು, ಸಿ ನಿಂದ ಮೆಚ್ಚುಗೆ ಪತ್ರ ನೀಡಿದ್ದರು, ವಿಶ್ವೇಶ್ವರ ಭಟ್ಟರು ವಿಕೆ ಬಿಟ್ಟ ಬಳಿಕ ನನಗೆ ವರ್ಗಾವಣೆ ಪತ್ರ ಕೊಟ್ಟರು. ಇದರ ಹಿಂದೆ ಕು.ನಾಥನ ಕುಮ್ಮಕ್ಕಿತ್ತು. ಗಂಗಾವತಿಯಲ್ಲಿ ಕೆಟ್ಟ ಬಾಸ್ ಅನರ್ಹ ತುಲ್ಲುಹಾಳ ಚಂದ್ರ ನನಗೆ ಆಫೀಸ್ ಅಸಿಸ್ಟೆಂಟ್ ಕೆಲಸ ನೀಡಿ ಅವಮಾನಿಸಿದರು. ಬಳಿಕ ರಾಜೀನಾಮೆ ಪತ್ರ ಕೇಳಿದರು. ಕಿರುಕುಳಕ್ಕೆ ನೊಂದು ರಾಜೀನಾಮೆ ನೀಡಿದ್ದೇನೆ. ಹಣತಿನ್ನುವ ಭ್ರಷ್ಟರೇ ನನ್ನ ಮೇಲೆ ಸವಾರಿ ಮಾಡಿದರು ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಇದೆಂಥ ಅನ್ಯಾಯ?

-ಜಿತೇಂದ್ರ ಕುಂದೇಶ್ವರ ಮಾಜಿ ಪ್ರಧಾನ ವರದಿಗಾರ ವಿಕೆ.

Friday

ಗೂಗಲ್ ಸರ್ಚ್ ನಲ್ಲಿ ವಿ ಭಟ್ಟರು ನಂ.1 (ಮನೆ ವಿಳಾಸ)


ಸುವರ್ಣ ಚಾನೆಲ್ ಬ್ರೇಕಿಂಗ್ ಸುದ್ದಿ. ಅಚ್ಚರಿಯ ಬೆಳವಣಿಗೆಯಲ್ಲಿ ಗೂಗಲ್ ಸರ್ಚ್ ನಲ್ಲಿ ಅಗ್ರ ಸ್ಥಾನದಲ್ಲಿದ್ದ ಬ್ರಿಟ್ನಿ ಸ್ಪಿಯರ್ಸ್ ಈಗ ಎರಡನೇ ಸ್ಥಾನಕ್ಕೆ ಇಳಿದಿದ್ದಾಳೆ. ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟವರು ಭಾರತೀಯರು ಎನ್ನುವುದು ವಿಶೇಷ. ಯಾರೆಂದು ಬಲ್ಲಿರಾ ? ವಿ ಭಟ್ಟರು ! ಕರ್ನಾಟಕದ ಸುವರ್ಣ ಪ್ರಭೆಯ ಪೀಠಾರೋಹಣ ಬಳಿಕ ಮೊದಲನೇ ದಿನ ವಿಭಟ್ಟರ ಹೊಸ ಮನೆ ವಿಳಾಸವನ್ನು ಗೂಗಲ್ಹು ಸರ್ಚ್ ನಲ್ಲಿ ಹುಡುಕುವವರ ಸಂಖ್ಯೆ ಮಿಲಿಯಕ್ಕೇರಿದೆ !
ಮನೆ ಮುಂದೆ ಜೋಳಿಗೆ ಹಿಡಿದುಕೊಂಡು ಬಂದವರ ಸಂಖ್ಯೆ ಮಾಭ್ ನಲ್ಲಿದ್ದ ಕಾರಣ ಕೆಂಗೇರಿಯಿಂದಲೇ ಟ್ರಾಪಿಕ್ ಜಾಮ್ ಉಂಟಾಗಿದೆ. ಪೊಲೀಸರು ಕೊನೆಗೆ ಆಶ್ರು ವಾಯು ಸಿಡಿಸಬೇಕಾಯಿತು. ಭಟ್ಟರ ಮೊಬೈಲ್ ಕರೆಗಳ ಹಾವಳಿ ಎಷ್ಟಿತ್ತೆಂದರೆ ಮೊಬೈಲ್ ಚಾರ್ಜ್ ಮಾಡಿಸಲೆಂದೇ ಸಿಬ್ಬಂದಿ ನೇಮಿಸಿದ್ದಾರಂತೆ. ಅಂದ ಹಾಗೆ ಈ ಸುದ್ದಿ ಯಾವ ಮಾಧ್ಯಮದಲ್ಲಿಯೂ ಬಂದಿಲ್ಲ, ಏಕೆಂದರೆ ಬಂದವರೆಲ್ಲ ಪತ್ರಕರ್ತರೇ ಆಗಿದ್ದರಂತೆ.. !
ದೈತ್ಯ ಸಂಸ್ಥೆಯಲ್ಲಿ ಸಿಕ್ಕಿದ ಚಿಲ್ಲರೆ ಇನ್ ಕ್ರಿಮಿ ನೆಂಟ್ ಕಂಡು ಕೆಂಡವಾದ ಮಂದಿ ಕಂಡ ಕಂಡವರಲ್ಲಿ ಅವಲತ್ತುಕೊಂಡರಂತೆ. ದೊಡ್ಡ ದೊಡ್ಡ ಬಕಿಟ್ ಇಟ್ಟುಕೊಂಡವರ ಹುಂಡಿಯೂ ಭರ್ತಿಯಾಗಿಲ್ಲ ವಂತೆ. ಹೀಗಾಗಿ ಹೆಚ್ಚಿನ ದಕ್ಷಿಣೆ ಆಸೆಯಿಂದ ವಿ ಭಟ್ಟರ ಮನೆ ಮುಂದೆ ಮೈಲುದ್ದ ಕ್ಯೂ ನಿಂತಿದೆ. ಶತ್ರುಗಳನ್ನೂ ಪ್ರೀತಿಸುವ ಭಟ್ಟರು ನಮ್ಮನ್ನು ತೆಗೆದು ಹಾಕರು ಎಂಬ ನಂಬಿಕೆ.
ಕೆಪಿ ಟಿಕೆಟ್ ಆಕಾಂಕ್ಷಿಕಗಳ (ಸಂಭಾವ್ಯರ) ಮೂರನೇ ಪಟ್ಟಿ
1.ಎಚ್ ಕೆ... (ಲವಲವಿಕೆ ಮನುಷ್ಯ
2.. ಜೆ.ಕೆ.ಎಸ್. (ಗಂಡೆದೆ ಮನುಷ್ಯ)
3ಜೆ.ಕೆ. (ಕಂಡದ್ದು ಕೆಂಡದ ಹಾಗೆ ! )
4.ಜೀಕೆ (ಬದುಕಿದರೆ ಬೇಡಿ ತಿಂದೇನು )
4. ಸಿ ಕೆ (ಬದುಕಿದರೆ ಸಾಕು)
5. ಆರ್ ಎಂಡಿ (ಮುಂಡಿಗೆ ಹೂವಿನಂಥವರು )
6 ಎಚ್ ಆರ್ (ಮಾನವ ಸಂಪನ್ಮೂಲ ಅಲ್ಲ. ಎಲ್ಲದಕ್ಕೂ ಸೈ)
7 ಎಸ್ ಆರ್ ( ಯಾರಿಗೂ ರೇಗುವುದಿಲ್ಲ !)
8. ಆರ್ ಎನ್ ಕೆ.. (ಲವಲವಿಕೆ ಹುಡುಗ)


9.ವೈ ಕೆ (ಕಮರ್ಷಿಯಲ್ ಮನುಷ್ಯ)
10.ಎಂಬಿ. ಬಿಎಸ್
ಇತರ
ಆರ್್ ಕೆ..
ಕೆ.ಬಿ
ಎಸ್.ಕೆ.
ವಯ್ಟಿಂಗ್ ಲೀಸ್ಟ್
>ಎಲ್ ಕೆ
>ಕೆಕೆ
....
ಇನ್ನು ಎಸ್ ಕೆ ಅಂದರೆ ಸಂಕೇಶ್ವರ ಬಸ್ ಟಿಕೆಟ್ ಕಾಯ್ದಿರಿಸಿದವರು
ಎಲ್ಲ ಬ್ಯೂರೊಗಳಿಂದಲೂ ಅರ್ಜಿಗಳ ಮಹಾಪೂರ... ಬಂದಿದ್ದು ಪ್ರಮುಖರ ಮಾಹಿತಿ ಮಾತ್ರ ನೀಡಲಾಗಿದೆ.
ಯುಕೆ ಬಾಬಾ ಮತ್ತು 20 ಮಂದಿ .....ರು
ಆರ್ ಕೆ ಮತ್ತು ತಂಡ (ರೆಸ್ಪಾನ್ಸ್)
ಎ ಕೆ (ಬಿಎನ್ ಜಿ)
ಎಲ್ ಕೆ (ಬಿಎನ್ ಜಿ)
ಕೆಕೆ (ಬಿಎನ್ ಜಿ)

ವೆಯ್ಟಿಂಗ್ ಲೀಸ್ಟ್ ನ ಲ್ಲಿರುವನ್ನು ಮತ್ತು ಎರಡೂ ಕಡೆ ಆಕಾಂಕ್ಷಿಗಳನ್ನು ಪರಿಗಣಿಸುವ ಸಾಧ್ಯತೆ ಗಳು ಇಲ್ಲ ಎಂದು ಭಟ್ಟರ ಉನ್ನತ ಮೂಲಗಳು ತಿಳಿಸಿವೆ.10

Wednesday

ಹೊಸ ಪತ್ರಿಕೆಗೆ ಡಿ ಎನ್ ಎ ಟೆಸ್ಟ್ !

ವಿಜಯ ಸಂಕೇಶ್ವರ ಅವರು ಹೊಸ ಸಿ ಇ ಒ ನಿರೀಕ್ಷೆಯಲ್ಲಿದ್ದಾರೆ, ಒಂದು ವರ್ಷ ಪತ್ರಿಕೆ ಚೆನ್ನಾಗಿ ರೂಪಿಸಿದ ಬಳಿಕ ಎಂದಿನಂತೆ ಇಂಗ್ಲೀಷ್ ಪೇಪರ್ ಗೆ ಮಾರಾಟ ಮಾಡಲಿದ್ದಾರೆ. ಈ ಬಾರಿ ಡಿ ಎನ್ ಎ ಜತೆ ವ್ಯವಹಾರ ಕುದುರಿದೆ. ಹೀಗಾಗಿ ಎಷ್ಟೆ ಖರ್ಚಾದರೂ ತಲೆ ಬಿಸಿ ಮಾಡುವ ದರ್ದು ಇಲ್ಲ, ಏಕೆಂದರೆ ಅಡ್ವಾನ್ಸ್ ಸಿಕ್ಕಿಯಾಗಿದೆ, ಪತ್ರಕರ್ತರ ವಲಸೆಯೂ ಜೋರಾಗಿ ನಡಿಯುವ ಸಾದ್ಯತೆ ಇದೆ, ಈಗ ಹಳೆ ಉಷಾ ಕಿರಣ ಟೀಮ್ ಸೆಟ್ ಮಾಡುತ್ತಿರುವ ಸಂಕೇಶ್ವರ ಬಳಿಕ ಸ್ಟಾರ್ ಗಳನ್ನು ಬಳಗಕ್ಕೆ ಸೇರಿಸಲಿದ್ದಾರೆ. ನಂ. ವನ್ ಪತ್ರಿಕೆ ವಿಕೆಯಿಂದ ಬರುವ ಸ್ಟಾರ್ ಗಳಿಗೆ ಹೆಚ್ಚಿನ ಆಮಿಷ. ಆದರೆ ಬರುವವರ ಹಿನ್ನೆಲೆ ಬಗ್ಗೆ ಸಂಕೇಶ್ವರ ಬಹಳ ುಮೇದ ತೋರಿಸುತ್ತಿದ್ದಾರೆ.

ವಿಜಯಕ್ಕೆ ಇನ್ನು ಎರಡೇ ಮೆಟ್ಟಿಲು !

(ಮೀಡಿಯಾ ಮನ ಕೃಪೆ)ಎಡಿಶನ್, ೧೦ ಪ್ರಿಂಟಿಂಗ್ ಮೆಷಿನ್, ಒಬ್ಬ ಪ್ರಿಂಟಿಂಗ್ ತಂತ್ರಜ್ಞ !

ಸಂಕೇಶ್ವರ ಅವರ ಹೊಸ ಪತ್ರಿಕೆ ಕಾರ್ಯ ಬಿರುಸಿನಿಂದ ಸಾಗಿದೆ.ಎಸ್. ಕುಲಕರ್ಣಿ ವಿಜಯ ಕರ್ನಾಟಕಕ್ಕೆ ರಾಜೀನಾಮೆ ನೀಡಿ, ಸಂಕೇಶ್ವರರ ಜೊತೆ ಸೇರಿದ್ದಾರೆ. ಇವರೊಬ್ಬ ಪ್ರಿಂಟಿಂಗ್ ಡಾನ್ ಎನ್ನಬಹುದು!
ಮೂಲಗಳ ಪ್ರಕಾರ ಸಂಕೇಶ್ವರ ಅವರು ಒಂದೇ ಏಟಿಗೆ ೧೦ ಆವೃತ್ತಿ ಆರಂಭಿಸುವ ಹುಮ್ಮಸ್ಸಿನಲ್ಲಿದ್ದಾರೆ. ೧೦ ಕಡೆಯೂ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸುವ ಉದ್ದೇಶ ಅವರದ್ದು. ಬಲು ಜೋರಿನಿಂದಲೇ ಮಾರುಕಟ್ಟೆ ಪ್ರವೇಶಿಸುವುದು ಸಂಕೇಶ್ವರರ ಉದ್ದೇಶ. ಪೂನಾ ಮೂಲದ ಮೊನೋಗ್ರಾಪ್ ಕಂಪನಿಯಾ ಅಶ್ವಥ ಆರಾಯಣ ಎಂಬವರ ಜೊತೆ ಶನಿವಾರ ಮಾತುಕತೆ ನಡೆಸಿದ್ದಾರೆ.ಉಳಿದ ಮಾಹಿತಿಗೆ ಮೀಡಿಯಾ ಮನ ನೋಡಿ/.

>ರಂಗ< ಸ್ಥಳಕ್ಕೆ ಕನ್ನಡ ಚಾನೆಲ್...

ರಂಗನಾಥರು ದಟ್ಸ್ ಕನ್ನಡಕ್ಕೆ ಕೊಟ್ಟ ಸಂದರ್ಶನ ಇದು...



ಕನ್ನಡ ಸುದ್ದಿ ಚಾನಲ್ಲುಗಳ ಸಾಲಿಗೆ ಸದ್ಯದಲ್ಲೇ ಹೊಸ ವಾಹಿನಿಯೊಂದು ಸೇರ್ಪಡೆಯಾಗಲಿದೆ. ಉದ್ದೇಶಿತ ವಾಹಿನಿಯು ಸುವರ್ಣ ಟಿವಿಯಲ್ಲಿ ಸಂಪಾದಕರಾಗಿದ್ದ ಎಚ್ ಆರ್ ರಂಗನಾಥ್ ಅವರ ಮುಂದಾಳತ್ವದಲ್ಲಿ ಜನ್ಮತಾಳಲಿದೆ.

ಇಂದಿನಿಂದ 80 ದಿನಗಳೊಳಗಾಗಿ ತಮ್ಮ ಚಾನಲ್ ಪ್ರಸಾರ ಆರಂಭಿಸಲಿದ್ದು. ಚಾನಲ್ ನಿರ್ಮಾಣ ಚಟುವಟಿಕೆಗಳು ಭರದಿಂದ ಸಾಗಿವೆ ಎಂದು ರಂಗನಾಥ್ ಇದೇ ಮೊದಲಬಾರಿಗೆ ಅಧಿಕೃತವಾಗಿ ಪ್ರಕಟಣೆ ಮಾಡಿದ್ದಾರೆ.

ಕನ್ನಡ ಟಿವಿ ವೀಕ್ಷಕರ ಆಶೋತ್ತರಗಳನ್ನು ಯಥಾವತ್ತಾಗಿ ಬಿಂಬಿಸುವ, ಮೊಟ್ಟ ಮೊದಲ ಜನಪರ ವಾಹಿನಿಯಾಗಿ ತಮ್ಮ ಚಾನಲ್ ರೂಪುಗೊಳ್ಳಲಿದೆ ಎಂದು ಅವರು ದಟ್ಸ್ ಕನ್ನಡಕ್ಕೆ ತಿಳಿಸಿದರು.

ಇಪ್ಪತ್ನಾಲ್ಕು ಗಂಟೆ ಕನ್ನಡದಲ್ಲಿ ಸುದ್ದಿ ನೀಡುವ ಟಿವಿ9, ಸುವರ್ಣ ನ್ಯೂಸ್, ಜನಶ್ರೀ ಮತ್ತು ಸಮಯ ಚಾನಲ್ಲುಗಳ ಸಾಲಿಗೆ ರಂಗ ಅವರ ಇನ್ನೂ ಹೆಸರಿಡದ ಚಾನಲ್, 5 ನೇ ವಾಹಿನಿಯಾಗಿ ಸೇರ್ಪಡೆಯಾಗುತ್ತದೆ.

ಇಪ್ಪತ್ತು ಸಾವಿರ ಚದರ ಅಡಿ ಜಾಗ ಇರುವ ಚಾನಲ್ ಕಚೇರಿ ಯಶವಂತಪುರದಲ್ಲಿ ತೆರೆಯಲಾಗಿದೆ. ಚಾನಲ್ ಸ್ಥಾಪನೆಗೆ ಅಗತ್ಯವಾಗ ತಾಂತ್ರಿಕ ಉಪಕರಣಗಳು, ಇಂಟೀರಿಯರ್ ಡೆಕೋರೇಷನ್ ಮತ್ತು ಅಗತ್ಯ ಸಿಬ್ಬಂದಿಯ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ರಂಗಾ ಹೇಳಿದರು.

ನಿಮ್ಮ ಹೊಸ ಸಾಹಸಕ್ಕೆ ಬಂಡವಾಳ ಹಾಕುವವರು ಯಾರು ಎಂಬ ಪ್ರಶ್ನೆಗೆ ಸೀದಾ ನೇರ ಉತ್ತರ ನೀಡಲು ನಿರಾಕರಿಸಿದ ರಂಗ, ಕಪ್ಪುಹಣ ಮತ್ತು ರಾಜಕೀಯ ವ್ಯಕ್ತಿಗಳ ಹಣದಿಂದ ತಮ್ಮ ಚಾನಲ್ ಮುಕ್ತವಾಗಿರುತ್ತದೆ ಎಂದಷ್ಟೇ ಹೇಳಿದರು.

ತಮ್ಮ ಹೊಸ ಸಾಹಸ ಪತ್ರಕರ್ತರ ಪಾಲುದಾರಿಕೆಯಿಂದ ನಡೆಯುವ ಚಾನಲ್ ಆಗಿರುತ್ತದೆ ಎಂದೂ ಅವರು ಒತ್ತಿ ಹೇಳಿದರು. ತಾವು 1 ರು. ಸಂಬಳ ಪಡೆಯುವ ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.

ತಮ್ಮ ಚಾನಲ್ ಲಾಭ ಮಾಡುವ ಉದ್ದೇಶ ಇಟ್ಟುಕೊಂಡಿಲ್ಲ. ಉದ್ಯಮ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವಷ್ಟು ಆದಾಯ ಮಾಡಿದರಷ್ಟೇ ಸಾಕು ಎಂದ ರಂಗ, ಯಾವುದೇ ರಾಜಕೀಯ, ಉದ್ಯಮದ ಲಾಬಿಗಳಿಗೆ ಮಣಿಯದ ತಮ್ಮ ಸಂಸ್ಥೆ, ಸ್ವಚ್ಛ, ಸೀದಾ, ಸಾದಾ, ಪತ್ರಿಕೋದ್ಯಮದಲ್ಲಿ ಬಲವಾದ ನಂಬಿಕೆ ಇಟ್ಟ ಒಂದು ವಿನೂತನ ಮಾಧ್ಯಮ ಸಂಸ್ಥೆ ಆಗಲಿದೆ ಎಂದರು.

ಚಾನಲ್ ಆರಂಭಿಸುವುದಕ್ಕೆ ಮೂಲ ಬಂಡವಾಳ 10 ಕೋಟಿ ರು. ಬೇಕು. ಪ್ರತೀ ತಿಂಗಳು 1 ಕೋಟಿ ರು. ಪುನರಾವರ್ತಿತ ವೆಚ್ಚದಂತೆ ವರ್ಷಕ್ಕೆ 25 ಕೋಟಿ ರು. ಬಂಡವಾಳ ಅಗತ್ಯ ಎಂದು ನುಡಿದರು.

Friday

ರಾಘವಾಂಕ ಚರಿತ, ಕುಮಾರ ಪತನ, ವಿಶ್ವೇಶ್ವರ ವಿಜಯ ತ್ರೀ ಶತಕಂ ಇದಂ


ವಿಕ ಚಕ್ರಾಧಿಪತ್ಯವ ಧಿಕ್ಕರಿಸಿ, ಹಾಲಾಹಲವ ಉಂಡು ಭಕ್ತರ ರಕ್ಷಿಸಿ ತಾ ನೀಲ ಕಂಠನೆನಿಸಿದ ತ್ಯಾಗಮೂರ್ತಿ ವಿಶ್ವೇಶ್ವರ ಕೈಲಾಸ ಸೇರಿ ಧನಲಕ್ಷ್ಮೀ ಸಹಿತಂ ಚಂದಂದಿಂ ಆಡಳಿತ ನಡೆಸುತ್ತಿರೆ, ವಿನಾಯಕ, ಮುರುಗ ಸರ್ವ ದೇವ, ಭೂತ ಗಣಂಗಳಿಗೆ ಚೈತನ್ಯ ಸಂಗಡಂ ಭಡ್ತಿಯ ನೀಡಿ ತನ್ನ ಪ್ರತಾಪವಂ ತೋರಿಸುತ ಅಭಯಂ ಗೈಯುತ್ತಿರಲಾಗಿ, ಇತ್ತ ಭರತ ಖಂಡದ ವಿಕ ಚಕ್ರಾಧಿಪತಿ ರಘುಕುಲ ತಿಲಕ ರಾಘವ ಲಂಡನಾ ನಗರಕ್ಕೆರಜಾ ಮಜಾ ಬಿಜಯಂ ಗೈಯುತ್ತಿರಲು..

ಇತ್ತ ಭೂಲೋಕದ ಪಂಪಾಮಾರ್ಗದೊಳು ವೈಕುಂಠ ದ್ವಾರದಲ್ಲಿ ನಿಂತಿರ್ಪ ಅಶೋಕಿಲಾಲ ಮತ್ತು ಕರಿ ಮುಖದ ಗಣಪ ತಾನೇ ದ್ವಾರಪಾಲಕರೆಂದಿನಿಪ ಜಯ ವಿಜಯರೆಂಬ ಗರ್ವದೊಳು ಪ್ರಕಾಶಮಾನ ಆಡಳಿತ ನಡೆಸುತಿರೆ, ಕೆಂಚಣ್ಣ, ಕರಿಯಣ್ಣ ನನಗೆ ಎನೂ ಗೊತ್ತಿಲ್ಲಣ್ಣ ಎಂದುಸಿರದನೂ....

ಅರರೇ...ಇದೇನಿದು... ಮಂಗನೂರಿನ ಸಾಮ್ರಾಜ್ಯದೊಳು ಬಂಡಾಯ ಭುಗಿಲೇಳುತಿರೆ.. ಕುಮಾರ ತನ್ನ ಕಪಿ ಸೇನೆ ಜಾಗೃತಗೊಳಿಸುತ್ತಿರಲು... ಇವರ ಮಂಗಾಟವ ಕಂಡು ಬೆದರದ ಮೈಸೂರಿನ ಝೂ ನಾಡ ಅಧಿಪತಿಯಾಗಿ ಈ ಪರಿಯ ಅಸಂಖ್ಯ ಕಂಡಿರ್ಪ ನಾವಡ, ತನ್ನ ಚೆಂಡೆ ಮದ್ದಳೆ ಬಾರಿಸುತಿರಲು, ಈ ಚರ್ಮ ವಾದ್ಯಕೆ ಕಪಿಸೇನೆ ವಿಲ ವಿಲನೆ ಒದರಾಡಿ ಹಾ ರಾಮಾ, ಹಾ ಕೃಷ್ಣ ಪ್ರಲಾಪಿಸುತಿರಲಾಗಿ..

ಸೀರೆ ಪ್ರಸಂಗವಾದರೆ ಕೃಷ್ಣ ನೆನೆಸು ಬಾ, ಯಾರಿಗಾದರೂ ಕಾಡಿಗೋ, ನೀರಿಲ್ಲದ ನಾಡಿಗೋ ಅಟ್ಟಬೇಕಾದರೆ ವನವಾಸಿ ಕುಮಾರ-ರಾಮನ ನೆನೆಯೋ,

ಅಯ್ಯೋ ಇದೇನಿದು ನಾ ಕಾಣುತಿರೆ.. ಇದು ನಾವಡನ ಬಸಿರು, ಕುಮಾರನ ಹೆಸರಾಯ್ತು, ಇದು ಎಂಚಪೊರ್ಲಾಂಡು, ಇದಂ ಎತ್ತಣಿಂದೆತ್ತ ಸಂಬಂಧವಯ್ಯಾ

ಎಂದು ದಾಸ ವರೇಣ್ಯ ಚಾಡಿ ದಾಸ, ಹೊನ್ನು, ಕ್ವಾಟರ್ ದಾಸ, ಹರ ಹರಾ ಹರಾಮಿ ಕೊಳಕು ಬಾಯಿಯಿಂದಂ ಕುವಚನಗಳನ್ನು ಉದುರಿಸಿ, ಹಲುಬಿದ ಎಂಬಲ್ಲಿಗೆ ಒಂದು ಷಟ್ಪದಿ ಮುಕ್ತಾಯಂ.

ಇತ್ತ ಇದ್ದಲ್ಲಿಯೇ ಚರಂಡಿ ಹೂಳೊಳು ನಲುಗುತ್ತಿರೆ ವ ರದ್ದಿಗಾರರು ಇನ್ ಕ್ರಿಮಿನೆಂಟ್ ಇಲ್ಲದೆ ನಾ ಕೆಲಸ ಮಾಡೆವು ಎಂದು ಕಂಪನಿಗಳಲ್ಲಿ ತಾ ಕ್ರಿಮಿಗಳೆಂಬ ಕೊಂಚಮೂ ಮಾಹಿತಿ ಇಲ್ಲದೆ ಒದರುತ್ತಿರಲು.. ನೆಟ್ ಗಳೇ ನೆಟ್ ವರ್ಕ ಆಗಿರ್ಪ ಬರಿದೇ ಕಾಸು ಹಾಸೆನ್ನುವ, ಹಳೆ ಫೈಲುಗಳನೇ ದೋಸೆಯಂತೆ ಮಗುಚಿ ಹಾಕುತ್ತ ಬರಿದೇ ತಮ್ಮ ನಾಮಕರಣವ ಮಾಡತಿರ್ಪ ಪರ್ತಕರ್ತರ ಕಂಡು ವಿಹ್ವಲನಾದ ಕೆಲಸ ಖೋರ ನಾವಡ, ಮುದಿ ಹುಲಿಗಳಿಗೆ ರಾಘವ ಕೊಡಮಾಡಿದ ರಿಂಗ್ ಹಿಡಿದು ಚೆಂದದಿಂ ಆಡಿಸುತ್ತಿರಲು, ಕಪಿಸೇನೆ ಬಾಲ ಮುದುರಿ ರೋದಿಸುತ್ತಿರಲು... ಇಲ್ಲಿಗೆ ಪಂಚಪದಿ ಮುಕ್ತಾಯಂ

(ಕೃಪೆ: ರಾಘಾವಂಕ ಚರಿತ ಮತ್ತು ವಿಶ್ವೇಶ್ವರ ವಿಜಯ)

Saturday

ಮೂವರು ರೋಲ್ ಕಾಲ್ ಪತ್ರಕರ್ತರೂ ಮಾಧ್ಯಮಗಳೂ



ಪತ್ರಿಕೋದ್ಯಮಿಗಳು ಹೇಗೆ ಬೆಳೆಯುತ್ತಾರೆ ಎಂಬುದು ಬಟಾ ಬಯಲಾಗುತ್ತಿದೆ. ನಮ್ಮ ಬೆಂಗಳೂರಿನ ಮೂರು ಖತರ್ನಾಕ್ ವರದಿಗಾರರು ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿ ದೋಚಲು ಹೊಂಚು ಹಾಕಲು ಹೋಗಿ ಇಂಗು ತಿಂದ ಮಂಗನಂತಾಗಿದ್ದಾರೆ.



ಈ ಬ್ಲ್ಯಾಕ್ ಮೇಲ್ ಪತ್ರಕರ್ತರನ್ನು ಬೆಂಗಳೂರಿನ ಕಳ್ಳ ಪೊಲೀಸರು ಬಂಧಿಸಿಲ್ಲ. ಈ ಸುದ್ದಿಯನ್ನು ಎಲ್ಲ ಪತ್ರಿಕೆಗಳು ಪ್ರಕಟಿಸಿಲ್ಲ. ಪ್ರಕಟಿಸಿದವರು ವರದಿಗಾರರ ಹೆಸರು ಹಾಕಿಲ್ಲ. ಒಬ್ಬಾತ ಅಹಿಂದೂ ಪತ್ರಿಕೆಯ ತುಂಬಾ ಹಳೆಯ ವರದಿಗಾರ ಮತ್ತು ಕಸುಬಿನಲ್ಲಿ ಪಳಗಿದ ಹಳೇ ಗಿರಾಕಿ. ಇನ್ನಿಬ್ಬರು ಪತ್ರಿಕೋದ್ಯಮದಲ್ಲಿ ಇರದ ಉ ಟಿವಿ ವಂಚಕರು. ಯಾವ ಟಿವಿ ಚಾನಲುಗಳು ಎಫ್ ಐ ಆರ್, ಪೋಲೀಸ್, ಕ್ರೈಮ್ ಸ್ಟೋರಿಗಾಗಿ ಅರ್ಧ ಗಂಟೆ ಕಾರ್ಯಕ್ರಮ ಮಾಡುವ ಮನಸ್ಸು ಮಾಡಿಲ್ಲ.



ಕುಲ ಬಾಂಧವರ ಬಗ್ಗೆ ಅಸ್ಟೊಂದು ಕನಿಕರ. ಖದೀಮರು ಸಚಿವೆ ಶೋಭಾ ಕರಂದ್ಲಾಜೆ ಹೆಸರು ಹೇಳಿಕೊಂಡು ಡೀಲ್ ಮಾಡಲು ಹೋಗಿದ್ದರು. ಆಂಧ್ರ ಕರೆಂಟು ಕಂಪೆನಿಗೆ ಸರಕಾರ ೧೭ ಕೋಟಿ ಹಣಕೊಡಲು ಇತ್ತು. ಅದನ್ನು ವಸೂಲು ಮಾಡಲು ಕಂಪನಿಯಿಂದ ಹತ್ತು ಪೆರ್ಸೆಂಟ್ ಕೇಳಲಾಗಿತ್ತು. ಇದರ ಹಿಂದಿರುವ ಸೂತ್ರದಾರ ಒಬ್ಬ ಬಿಜೆಪಿ ಎಮೆಲ್ಸಿ ಇದ್ದಾನೆ.ಯಡ್ಡಿ ಸರಕಾರ ಬಂದ ಮೇಲೆ ಪತ್ರಿಕೋದ್ಯಮದ ಭ್ರಷ್ಟಚಾರ ಪರಕಾಷ್ಟೆ. ತಲುಪಿದೆ. ವಿಧಾನಸೌಧ, ಎಂ ಎಸ್ ಕಟ್ಟಡ, ಸಿಟಿ ಕಾರ್ಪೊರೇಷನ್ ದೊಡ್ಡ ಅಡ್ಡಗಾಲು. ಮಿಡ್ಲು ಮ್ಯಾನ್ ಬೇಕಾಗಿಲ್ಲ. ಬಿಲ್ ಪಾಸು ಮಾಡುತ್ತಾರೆ, ಟೆಂಡರ್ ಫಿಕ್ಸ್ ಆಗುತ್ತೆ. ಹೀಗಿದೆ ಪತ್ರಿಕೋದ್ಯಮ.



ಕೃಪೆ: ನ್ಯೂ ಮೀಡಿಯಾ ಬ್ಲಾಗ್.....



ಪೇಪರ್ "ಖುಸಿತ" ವಿಸಯ ! ಇದು ವಿಕೆ ವಿಸ್ಮಯ



ವಿಶಿಷ್ಟ ರಂಗನಾಥ, ವಿಚಿತ್ರ ಅನಾಥರ ಬಗ್ಗೆ ಬರೆದಷ್ಟು ಮುಗಿಯದು. ಮಂಗಳೂರಿನ ವಿಕೆಯಲ್ಲಿ ಮೂಡಿ ಬರುತ್ತಿರುವ ಅಭಿಯಾನ ಪ್ರೆಸ್ ಕ್ಲಬ್ ಗಳಲ್ಲಿ ಸಕಾರಾತ್ಮಕವಾಗಿ ಚರ್ಚೆ ಆಗುತ್ತಿದ್ದರೆ ಒಳಗೊಳಗೆ ಚೇಳುಗಳು ಕೊತ ಕೊತ ಕುದಿಯುತ್ತಿವೆ. ನಾವಡ ಎಕ್ಸ್ ಪೆರಿಮೆಂಟ್ ಗಳಿಂದ ತಾನು ಎಕ್ಸ್ ಚೀಪ್ ಆಗಿಬಿಟ್ಟರೆ ಎಂಬ ಭಯ. ಕೊನೆಗೆ ಅನಾಥನಾಗಿಬಿಟ್ಟರೆ ಎಂಬ ಹೆದರಿಕೆ ಆಸ್ಥಾನ ಸಂಪಾದಕೆ.



ಪೇಪರ್ ಸಂಖ್ಯೆ ಇಳಿಯುತ್ತಿದೆ ಎಂಬ ದೂರು ನೀಡಿ ನಾವಡರನ್ನು ನೀವಾಳಿಸಬಹುದೋ ಎಂಬ ದುರಾಸೆ. ಕಳೆದ ಬಾರಿ ಜಾಹೀರಾತು ವಿಭಾಗ ಮೂಲಕ ಹಣಿಯಲು ಯತ್ನಿಸಿದ್ದರೂ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಹೀಗಾಗಿ ದೂರನ್ನು ಈ ಬಾರಿ ಸರ್ಕುಲೇಶನ್ ವಿಭಾಗ ಮೂಲಕ ಪ್ರಸರಣಕ್ಕೆ ಷಡ್ಯಂತ್ರ ನಡೆಯುತ್ತಿದೆ. ಅಭಿಯಾನದ ಪರಿಣಾಮ ಸರ್ಕುಲೇಶನ್ ಇಳಿದಿದೆ ಎಂಬ ವರಾತ ಎತ್ತಿರುವ ಅನಾಥ ಪಡೆ ದೂರು ಸಿ ಇ ಒಗೆ ನೀಡುವಂತೆ ಎಲ್ಲರ ಬಳಿ ದಂಬಾಲು ಬೀಳುತ್ತಿದೆ. ಏಕೆಂದರೆ ಸಂಪಾದಕರಿಗೆ ಹೇಳಿದರೆ ಕ್ಯಾರೆ ಅನ್ನದೆ ನಾವಡರಿಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬ ಹೆದರಿಕೆ, ಇದು ಹಿಂದಿನ ಅನುಭವ ಕುನಾಥಗೆ ಲಭಿಸಿದೆ.



ಹೀಗಾಗಿ ಸ್ಥಳೀಯ ಹೆಡ್ಡ್ ಗಳ ಬಳಿ " ಬೇರೆ ಯಾರಲ್ಲಿಯೂ ಹೇಳುವುದು ಬೇಡ ನೀವು ಸಿ ಇ ಒಗೆ ದೂರು ನೀಡಿ' ಎಂದು ಚಾಡಿ ಕೆಲಸ ಹೇಳಲು ಆರಂಭಿಸಿದ್ದಾನೆ.



ಈ ಬಾರಿ ಸರ್ಕುಲೇಶನ್ ಮೂಲಕ ಮಣಿಯದಿದ್ದರೆ ಇನ್ನು ಮಂಗಳೂರಿ ಗಣ್ಯರ ಮೂಲಕ ದೂರು ಕೊಡಿಸಬೇಕು ಎಂಬ ಸ್ಕೆಚ್ ರೆಡಿಯಾಗುತ್ತಿದೆ. ನಾವಡರು ಎಷ್ಟೇ ಚಾಣಾಕ್ಷ ನಾದರೂ ಕುನಾಥ ಕೌಟಿಲ್ಯದ ಮುಂದೆ ಯಶಸ್ವಿಯಾಗುವುದೇ ಎಂಬ ಬಗ್ಗೆ ಪ್ರೆಸ್ ಕ್ಲಬ್ ನಲ್ಲಿ ಚರ್ಚೆ ನಡೆಯುತ್ತಿದೆ.



ಅಲ್ಲ ಸ್ವಾಮಿ ಕುನಾಥನ ಹಿಂದೆ ಮಾಡಿದ ಎಡವಟ್ಟಿನಿಂದ ಪತ್ರಿಕೆ ಸಂಖ್ಯೆ ಇಳಿದಿರಬಹುದು, ಒಂದು ತಿಂಗಳ ಅಭಿಯಾನದಿಂದ ಪತ್ರಿಕೆ ಇಳಿಯುವುದಾದರೂ ಹೇಗೆ ? ಕೃಷ್ಣ ಪರಮಾತ್ಮನೇ ಬಲ್ಲ. ಇದರ ಪ್ರಭಾವ ಏನಿದ್ದರೂ ಮುಂದಿನ ೩ ತಿಂಗಳ ಬಳಿಕ ಗೊತ್ತಾಗಬಹುದು. ಮಿಂಚು ಹೊಡೆದ ಬಳಿಕ ಸಿಡಿಲು ಬರುತ್ತದೆ. ಆದರೆ ಭೂಕಂಪ ಆದ ಬಳಿಕ ಸುನಾಮಿ ಬರಲು ಅನೇಕ ಗಂಟೆಗಳು ಹಿಡಿಯುತ್ತವೆ. ಇದೇ ರೀತಿ ವ್ಯತ್ಯಾಸ ತಿಳಿಯದ ದಡ್ಡರು ಕತ್ತೆಗೆ ಮೂರೇ ಕಾಲು ಎನ್ನುತ್ತಾರೆ.

Tuesday

ರಂಗಾಯಣ -ಟೀವಿ ೫


ಹೌದು ರಂಗಾಯಣ ಎಲ್ಲೀವರೆಗೆ ಬಂತು ಎಂದು ಓದುಗರು ಕೇಳಿದ್ದಾರೆ. ಪ್ರಪಂಚವೇ ಹಾಗೆ. ಚಲಾವಣೆಯಲ್ಲಿದ್ದರೆ ಮಾತ್ರ ನೆನಪು, ಇಲ್ಲಾಂದ್ರೆ ಮರೆತೇ ಹೋಗುತ್ತೆ, ಇದು ಮನಸ್ಸಿನ ಹುಟ್ಟುಗುಣ. ಹಾಗೇನೇ ಕಿರು ತೆರೆ ಪರದೆಯಿಂದ ರಂಗ ಮರೆಯಾದ ಬಗ್ಗೆ ಮರೆತೇ ಹೋಗಿತ್ತು. ವಿಷಯ ಏನಪ್ಪಾ ಅಂದ್ರೆ ಮತ್ತೆ ಆಂಧ್ರ ಟೀವಿ ೫ ಹಿಡಿದುಕೊಂಡು ಕರ್ನಾಟಕಕ್ಕೆ ದಾಂಗುಡಿ ಇಡುತ್ತಿದ್ದಾರೆ ನಮ್ಮ ರಂಗನಾಥರು. ಟೀವಿ ೫ ಹೆಸರು ಮಾತ್ರ ಖರೀದಿ ಮಾಡಿದ್ದಾರೆ. ಉಳಿದೆಲ್ಲ ಸಂಪನ್ಮೂಲ ರಂಗಣ್ಣನೇ ವಹಿಸ್ಕೋಬೇಕು. ಈಗ ಹಣ ಹೇಗೆ ಹೊಂದಿಸೋದು ಎಂಬ ಬಗ್ಗೆ ಮಾತ್ರ ಚಿಂತೆ. ಹಿಂದೆ ಮಾಡಿಟ್ಟ ಹಣ ಸ್ವಲ್ಪ ಇದೆ, ಸುವರ್ಣ ಚಾನೆಲ್ ಶೇರ್ ಹಣ. ದೊಡ್ಡದಾಗಿ ರಂಗಕ್ಕೆ ಇಳಿಯಲು ಹಣ ಇಷ್ಟು ಸಾಲದು. ವಂತಿಗೆ ಎತ್ತಿ ಅಭ್ಯಾಸ ಇದ್ದರೂ ಅಷ್ಟೂ ಸಂಗ್ರಹವಾಗುವುದು ಡೌಟ್. ರಾಜಕೀಯ ನಾಯಕರ ಸಹವಾಸ ಕಷ್ಟ. ಧನಿಕರ ಬಳಿ ಹೋಗಬಹುದು ಆದರೆ ಕೊನೆಗೆ ಕನಿಕರ ತೋರದೆ ಕಿತ್ತು ಹಾಕುತ್ತಾರೆ. ಹೀಗಾಗಿ ಸಹಾಯ ಧನ ಸಂಗ್ರಹ ಚಿಂತೆಯಿಂದ ಸ್ವಲ್ಪ ವಿಳಂಬ ಆಗುತ್ತಿದೆ. ಆದರೂ ಶೀಘ್ರದಲ್ಲಿಯೇ ಹೊಸ ಕನ್ನಡ ಚಾನೆಲ್ ಮೂಲಕ ರಂಗಾಯಣ, ರಾಮಾಯಣ ಕದನ ನೋಡಬಹುದು.
ಸುವರ್ಣ ಪ್ರಭೆ
ಇಷ್ಟರಲ್ಲಿಯೇ ಸುವರ್ಣ-ಕೆಪಿ ಒಟ್ಟಾಗಿ ಬೆಂಗಳೂರಿನ ಎಂಜಿ ರೋಡ್ ನಲ್ಲಿ ಭವ್ಯ ಕಟ್ಟೋಣದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಒಳ್ಳೆ ಕ್ಯಾಫ್ಟನ್ ನಿರೀಕ್ಷೆಯಲ್ಲಿದ್ದಾರೆ ರಾಜೀವ್ ಚಂದ್ರ ಶೇಖರ್. ವಿ ಭಟ್ಟರು ಸಮರ್ಥರು ಆದರೆ ಅವರಿನ್ನೂ ವಿಕೆ ಹ್ಯಾಂಗ್ ಓವರ್ ನಿಂದ ಹೊರ ಬಂದಿಲ್ಲ ಅಂಥಾ ಕಾಣುತ್ತೆ. ಇದಕ್ಕೆ ಕೆಪಿಯ ಭಾನುವಾರದ ಅಂಕಣವೇ ಸಾಕ್ಷಿ. (ಆದರೆ ಅದರಲ್ಲಿಯೂ ಓದುಗರಿಗೆ ಕಚಗುಳಿ ಇಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ವಿಶೇಷ). ಹಳೆಯ ಶಿಲಾಯುಗದ ನೆನಪು ಮಾಸಿದ ಬಳಿಕ ಹೊಸ ಪ್ರಭೆಯಿಂದ ಸುವರ್ಣ ಯುಗಕ್ಕೆ ಚಾಲನೆ ಸಿಗಬಹುದು. ಅಲ್ಲೀವರೆಗೆ ಏನ್ ಮಾಡ್ತಾರೆ ಅನ್ನೋದನ್ನು ನಾವೂ ನೋಡ್ತಾ ಇರ್ತೀವಿ.

Sunday

ನೋ-ಎಡಿಟರ್ ೫ ಸಾವಿರ ಓದುಗರು !


ಮಾಧ್ಯಮಗಳಲ್ಲಿನ ಒಳ ಸುಳಿಗಳ ಕುರಿತು, ಅನ್ಯಾಯ, ದೌರ್ಜನ್ಯಗಳ ವಿರುದ್ಧ ರೂಪುಗೊಂಡಿರುವ ಬ್ಲಾಗ್ ಕಳೆದ ಎರಡು ತಿಂಗಳಲ್ಲಿ ೫ ಸಾವಿರ ಓದುಗರನ್ನು ಸಂಪಾದಿಸಿ ದಾಖಲೆ ಮಾಡಿದೆ. ೪ ವರ್ಷಗಳ ಹಿಂದೆ ಬ್ಲಾಗ್ ಆರಂಭಗೊಂಡಿದ್ದರೂ. ಹೊಸ ಖದರ್ ನಲ್ಲಿ ಮಾರ್ಚ್ ಅಂತ್ಯದಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಪೇಸ್ ಬುಕ್ ಗೆಳೆಯರ ಸಹಕಾರದಿಂದ ಪತ್ರಕರ್ತರ ಒಳ್ಳೆ ಗುಣ ಮತ್ತು ಅವಗುಣಗಳ ಬಗ್ಗೆ ಬರೆಯಲು ಸಾಧ್ಯವಾಯಿತು. ಇದೆಲ್ಲ ಶ್ರೇಯ ಎಂದಿನಂತೆ ಸುದ್ದಿಮನೆಯ ಬಾಣಸಿಗರಿಗೆ ಸಲ್ಲುತ್ತದೆ. ಅವಸರದ ಕೆಲಸದ ನಡುವೆಯೂ ಸ್ವಲ್ಪ ಹೊತ್ತು ನೋ ಎಡಿಟರ್ ನೋಡುವ ಪರಿಪಾಠ ಬೆಳೆಸಿಕೊಂಡಿರುವುದು ಒಳ್ಳೆ ಬೆಳವಣಿಗೆ. ಕನಿಷ್ಠ ವಾರಕ್ಕೆ ಎರಡು ಬಾರಿ ಒಳ್ಳೆ ಸುದ್ದಿ (ಕೆಟ್ಟದ್ದು-ಒಳ್ಳೆಯದು ನಿಮ್ಮ ವಿವೇಚನೆಗೆ ಬಿಟ್ಟಿದ್ದು) ಕೊಡಲು ಪ್ರಯತ್ನಿಸುತ್ತೇನೆ-
ನೊ- ಎಡಿಟರ್ ಸಂಪಾದಕಿ!

ನೊ -ಎಡಿಟರ್ ಪರಿಣಾಮ.. ಕೀಚಕರ ನಿರ್ನಾಮ !


ಲೈಂಗಿಕವಾಗಿ ಪೀಡಿಸುವ ಚೀಪ್ ಬ್ಯೂರೊಗಳಿಗೆ ತಕ್ಕ ಪಾಠ. ಈ ಬಗ್ಗೆ ನೋ-ಎಡಿಟರ್ ಮೊದಲೇ ಎಚ್ಚರಿಕೆ ನೀಡಿತ್ತು. ಒಂದು ವಿಕೆಟ್ ಉರುಳಿದೆ.. ಇದು ಬ್ಲಾಗ್ ಸದಾಶಯ ಪರಿಣಾಮ. ಕೀಚಕರ ಬಗ್ಗೆ ಈ ಗಾಗಲೇ ಎರಡು ಇಮೇಲ್ ಗಳು ಬಂದಿವೆ. ಒಂದು ತನಿಖೆ ಹಂತದಲ್ಲಿದ್ದು, ಇನ್ನೊಂದನ್ನು ಪರಿಶೀಲಿಸಬೇಕಾಗಿದೆ. ಹೈದರಾಬಾದ್ ಮೂಲದ ಟಿವಿ ಚಾನೆಲ್ ಒಂದರಲ್ಲಿರುವ ಕೀಚಕ ನಿಗೆ ಸದ್ಯದಲ್ಲಿಯೇ ಶಾಸ್ತಿ ಆಗುವ ಸಾಧ್ಯತೆ ಇದೆ.
ಕಚೇರಿಗಳಲ್ಲಿ ದುಡಿಯುವ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುವ ಕೀಚಕರು ಇನ್ನಾದರೂ ಎಚ್ಚೆತ್ತುಕೊಂಡು ತಪ್ಪು ತಿದ್ದಿಕೊಂಡರೆ ಬಚಾವ್ ಆಗುತ್ತೀರಿ ಇಲ್ಲವಾದರೆ ಎಚ್ಚರಿಕೆ ಬಗ್ಗೆ "ವಿಸಿಲ್'" ಊದುವ ಕೆಲಸ ಬ್ಲಾಗ್ ಮಾಡಬೇಕಾಗುತ್ತದೆ.

Tuesday

ಲೈಂಗಿಕ ಪೀಡಕ ಬ್ಯೂರೊ ಚೀಪ್ ಗಳೇ ಎಚ್ಚರ..

(ಸಂಪಾದಕೀಯಬ್ಲಾಗ್ ಕೃಪೆ) ಪ್ರಮುಖ ಪತ್ರಿಕೆಯೊಂದರ ಬ್ಯೂರೋ ಮುಖ್ಯಸ್ಥರಿಂದ ನಿನ್ನೆ ರಾಜೀನಾಮೆ ಪಡೆದು ಹೊರಹಾಕಲಾಗಿದೆ. ಆತ ತನ್ನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅಶ್ಲೀಲ ಇ-ಮೇಲ್ ಕಳುಹಿಸಿದ್ದು ಇದಕ್ಕೆ ಕಾರಣ. ಈ ಇ-ಮೇಲ್ ಅನ್ನು ನೇರವಾಗಿ ಪತ್ರಿಕೆಯ ಸಂಪಾದಕರಿಗೆ ರವಾನಿಸಿದ ದಿಟ್ಟ ಮಹಿಳೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಸಂಪಾದಕರೂ ಹಿಂದೆಮುಂದೆ ನೋಡದೆ ಬ್ಯೂರೋ ಮುಖ್ಯಸ್ಥರನ್ನು ಸೇವೆಯಿಂದ ಕಿತ್ತು ಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕಡೆಗೆ ಬ್ಯೂರೋ ಮುಖ್ಯಸ್ಥನ ಮನವಿಯ ಮೇರೆಗೆ ಆತನಿಂದ ರಾಜೀನಾಮೆ ಪಡೆದು ಸಾಗಹಾಕಲಾಗಿದೆ.ಈ ಬ್ಯೂರೋ ಮುಖ್ಯಸ್ಥರ ಮೇಲೆ ಆರೋಪಗಳ ಮಹಾಪೂರವೇ ಹಿಂದಿನಿಂದಲೇ ಇದ್ದವು. ಆದರೂ ಆತನನ್ನು ಕಾಣದ ಕೈಗಳು ರಕ್ಷಿಸುತ್ತಲೇ ಬಂದಿದ್ದವು. ಈತನ ವಿರುದ್ಧದ ಆರೋಪಗಳ ಕುರಿತು ಹಿಂದೆ ಸಂಪಾದಕೀಯದಲ್ಲೂ ತಾವು ಓದಿರುತ್ತೀರಿ. ದೂರು ಕೊಟ್ಟ ಮಹಿಳೆಯ ಹೆಸರು ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಇಡೀ ಘಟನೆಯ ಸಂಸ್ಥೆ, ವ್ಯಕ್ತಿಗಳ ಹೆಸರನ್ನು ನಾವು ಇಲ್ಲಿ ಕಾಣಿಸುತ್ತಿಲ್ಲ.ಇದು ಕೇವಲ ಒಂದು ಅಶ್ಲೀಲ ಇ-ಮೇಲ್‌ನಿಂದ ಆಗಿರುವ ರಾದ್ಧಾಂತದಂತೆ ಕಾಣುತ್ತಿಲ್ಲ. ನೊಂದ ಮಹಿಳೆ ಲೈಂಗಿಕ ಕಿರುಕುಳದ ದೂರನ್ನೂ ನೀಡಿದ್ದಾರೆ ಎಂಬ ಮಾಹಿತಿಯಿದೆ. ಇದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಎಲ್ಲ ಸಾಧ್ಯತೆಗಳೂ ಇದ್ದಿದ್ದರಿಂದಾಗಿ ಪತ್ರಿಕಾ ಸಂಸ್ಥೆ ಆತುರಾತುರವಾಗಿ ಕ್ರಮ ಕೈಗೊಂಡಿದೆ. ಪತ್ರಕರ್ತ ದೊಡ್ಡ ಶಿಕ್ಷೆಯಿಂದ ಪಾರಾಗಿ ಚಿಕ್ಕ ಶಿಕ್ಷೆ ಅನುಭವಿಸಿದ್ದಾನೆ.ಇದು ಒಂದು ಘಟನೆ ಮಾತ್ರವಲ್ಲ. ಇಂಥದ್ದು ಅಲ್ಲಲ್ಲಿ, ಆಗಾಗ ನಡೆಯುತ್ತಲೇ ಇವೆ. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಸುದ್ದಿಸಂಪಾದಕರೊಬ್ಬರು ತಮ್ಮ ಅಧೀನ ಮಹಿಳಾ ಸಿಬ್ಬಂದಿಗೆ ಮದುವೆಯಾಗು ಎಂದು ಪೀಡಿಸಿದ ಪರಿಣಾಮ ಇತ್ತೀಚಿಗೆ ಆಕೆ ಪತ್ರಿಕೆಯನ್ನೇ ತೊರೆದುಹೋದರು. ದೊಡ್ಡ ಸ್ಥಾನದಲ್ಲಿ ಕುಳಿತ ಕೆಲ ಕೀಚಕ ಪತ್ರಕರ್ತರು ತಮ್ಮ ಕೈಕೆಳಗಿನ ಮಹಿಳೆಯರನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಆದರೆ ಇದ್ಯಾವುದೂ ಸುದ್ದಿಯಾಗುವುದಿಲ್ಲ. ಯಾಕೆಂದರೆ ಸುದ್ದಿ ಮಾಡುವವರೇ ಇಲ್ಲಿ ಆರೋಪಿಗಳು.ನಿಜ, ಇದು ಕೇವಲ ಮಾಧ್ಯಮರಂಗದ ಸಮಸ್ಯೆ ಮಾತ್ರವಲ್ಲ. ಉದ್ಯೋಗಸ್ಥ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಇಂಥ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ಇಂಥ ಕೀಚಕರನ್ನು ಎದುರಿಸುವ ಧೈರ್ಯ, ಸಾಮರ್ಥ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಲೇಬೇಕು. ಈ ಪ್ರಕರಣದಲ್ಲಿ ಆದಂತೆ ಇಂಥವರನ್ನು ಮನೆಗೆ, ಜೈಲಿಗೆ ಅಟ್ಟುವ ಸಾಹಸವನ್ನು ತೋರಬೇಕಿದೆ.

ಬಿಸಿಲ ನಾಡಿನ ಪಜೆವಾಣಿಯಿಂದ ಉದಯ ಅಸ್ತ

ಶಂಕರ ಭಟ್ಟರ ಉದಯ ಆಗದೆ ಅಸ್ತವಾಗಿದೆ ಶಂಕರ ಭಟ್ಟರನ್ನು ಪಜೆವಾಣಿಯಿಂದ ಮೇ ೩೧ ರಂದು ಅವರನ್ನು ಗುಲ್ಬರ್ಗಆಫೀಸಿನಿಂದ ರಾಜಿನಾಮೆ ಪಡೆದು ಕಳುಹಿಸಲಾಗಿದೆ. ಭಟ್ಟರು ಗುಲ್ಬರ್ಗ ಕಚೇರಿಯ ಪ್ರಧಾನ ವರದಿಗಾರರು. ಬ್ಯೂರೊ ಮುಖ್ಯಸ್ಥರು. ಕಳೆದ ವರ್ಷ ಹುಬ್ಬಳ್ಳಿಯಿಂದ ವರ್ಗಾವಣೆ ಆಗಿತ್ತು.
ಕೆಲವು ಅವ್ಯವಹಾರದಲ್ಲಿ ಅವರ ಹೆಸರು ಬಂದಿತ್ತು ಎನ್ನುವುದು ವಿರೋಧಿಗಳ ಆರೋಪ. ಅದಕ್ಕಾಗಿ ಕೆಲಸದಿಂದ ತೆಗೆದು ಹಾಕಿಲ್ಲ. ಬದಲಾಗಿ ಹುಬ್ಬಳ್ಳಿ ಇರುವಾಗ ಮಾಡಿದ ಸಮಾಜ ಸೇವಾ ಕೆಲಸಕ್ಕಾಗಿ ಕೂಡ ಅಲ್ಲ. ಹುಬ್ಬಳಿಯಿಂದ ಗುಲ್ಬರ್ಗಕ್ಕೆ ಹೋದ ಅನಂತರ ಅವರು ಬರೆದ ಒಂದು ಪತ್ರ ಅವರನ್ನು ಬಳಿ ತೆಗೆದುಕೊಂಡಿದೆ. ಅದು ಒಂದು ಹೆಣ್ಣು ಮಗಳಿಗೆ ಸಂಬಂದಿಸಿದ್ದು. ಆಕೆ ಇವರ ಮಗಳಂತೆ ಇದ್ದವಳು. ಅದೇಕೋ ಸ್ವಲ್ಪ ಹಳಸಿತ್ತು.
ಪಜೆವಾಣಿ ಇತಿಹಾಸದಲ್ಲೇ ಒಂದು ಅಪೂರ್ವ ಘಟನೆ.
(ನ್ಯೂಮೀಡಿಯಾಬ್ಲಾಗ್ ಬ್ಲಾಗ್ ಸ್ಪಾಟ್ ಡಾಟ್ ಕಾಮ್ ಕೃಪೆ)

ಸಂಕೇಶ್ವರ ಇನ್ನೊಂದುವಿಜಯ ಪತಾಕೆ (ಪತ್ರಿಕೆ)

(ಸಂಪಾದಕೀಯ ಕೃಪೆ)
ಮಾಧ್ಯಮ ಕ್ಷೇತ್ರದಲ್ಲಿ ವಿಜಯ ಸಂಕೇಶ್ವರರ ಎರಡನೇ ಇನ್ನಿಂಗ್ಸ್ ಇದು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಗಳಿಸಿದ ಭರ್ಜರಿ ಯಶಸ್ಸು ಈಗ ಇತಿಹಾಸ. ವಿಜಯ ಕರ್ನಾಟಕದ ಮೂಲಕ ಸಂಕೇಶ್ವರರು ಎಬ್ಬಿಸಿದ ಬಿರುಗಾಳಿ ಕರ್ನಾಟಕದ ಪತ್ರಿಕಾಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು. ಸಂಕೇಶ್ವರರು ತಮ್ಮ ವ್ಯಾವಹಾರಿಕ ಜಾಣ್ಮೆಯನ್ನು ಪ್ರಯೋಗಿಸಿ ವಿಜಯ ಕರ್ನಾಟಕವನ್ನು ನಂ.೧ ಮಾಡುವಲ್ಲಿ ಯಶಸ್ವಿಯಾಗಿದ್ದರು. ವಿಶ್ವೇಶ್ವರ ಭಟ್ಟರಂಥ ಪ್ರಯೋಗಶೀಲ ಸಂಪಾದಕರು ಲಭಿಸಿದ್ದೂ ಸಹ ಅವರಿಗೆ ಅನುಕೂಲಕರವಾಗಿತ್ತು. ಕನ್ನಡ ಪತ್ರಿಕಾರಂಗದಲ್ಲಿ ಹಿಂದೆಂದೂ ಕಾಣದಂಥ ಬೆಲೆಸಮರವನ್ನು ಆರಂಭಿಸಿ, ಇತರ ಎಲ್ಲ ಪತ್ರಿಕೆಗಳಿಗೆ ಹೊಡೆತ ಕೊಡುವಲ್ಲಿ ಸಂಕೇಶ್ವರರು ಯಶಸ್ವಿಯಾಗಿದ್ದರು. ಇವತ್ತಿನ ಪತ್ರಿಕೆಯನ್ನು ನಾಳೆ ಓದುವಂಥ ವ್ಯವಸ್ಥೆಯಿದ್ದ ರಾಜ್ಯದ ಮೂಲೆಮೂಲೆಯ ಹಳ್ಳಿಗಳಿಗೆ ಬೆಳಿಗ್ಗೆ ೬ ಗಂಟೆಗೆಲ್ಲ ತಮ್ಮ ವಿಶಾಲ ನೆಟ್‌ವರ್ಕ್‌ನ ಮೂಲಕ ತಲುಪಿಸಿದ್ದು ಸಂಕೇಶ್ವರರ ಮಹತ್ವಪೂರ್ಣ ಸಾಧನೆ. ಇತರ ಪತ್ರಿಕೆಗಳ ಓದುಗರನ್ನು ಕಿತ್ತುಕೊಳ್ಳುವುದರ ಜತೆಜತೆಗೆ ಹೊಸ ಓದುಗರನ್ನು ಸೃಷ್ಟಿಸಿದ್ದು ವಿಜಯ ಕರ್ನಾಟಕದ ಹೆಮ್ಮೆ. ಆದರೆ ವಿಜಯ ಕರ್ನಾಟಕ ತನ್ನ ಬೆಲೆ ಸಮರದ ಮೂಲಕ ಸಣ್ಣ ಪತ್ರಿಕೆಗಳ ಬೇರುಗಳನ್ನೇ ಅಲ್ಲಾಡಿಸಿಬಿಟ್ಟಿತು. ಹಲವಾರು ಪತ್ರಿಕೆಗಳು ಮುಚ್ಚಿಹೋಗುವಂಥ ಪರಿಸ್ಥಿತಿ ನಿರ್ಮಾಣವಾಯಿತು.

ಸಂಕೇಶ್ವರರು ತಮ್ಮ ವಿಜಯ ಕರ್ನಾಟಕವನ್ನು ಅದರ ಜತೆಗೆ ಉಷಾಕಿರಣ ಎಂಬ ತಮ್ಮದೇ ಪರ್ಯಾಯ ಪತ್ರಿಕೆಯನ್ನು, ವಿಜಯ ಟೈಮ್ಸ್ ಎಂಬ ಇಂಗ್ಲಿಷ್ ಪತ್ರಿಕೆಯನ್ನು ಟೈಮ್ಸ್ ದೊರೆಗಳಿಗೆ ಮಾರುವುದರ ಮೂಲಕ ತಮ್ಮ ಮೊದಲ ಇನ್ನಿಂಗ್ಸ್ ಮುಗಿಸಿದ್ದರು. ಹೀಗೆ ಪತ್ರಿಕೆಗಳನ್ನು ಮಾರುವಂತಾಗಲು ನಿರ್ಮಾಣಗೊಂಡ ಸನ್ನಿವೇಶಗಳಿಗೆ ಹಲವು ಆಯಾಮಗಳಿವೆ. ಕಾರಣಗಳು ಮಾತ್ರ ಇನ್ನೂ ನಿಗೂಢ.

ಈಗ ಮತ್ತೊಂದು ಇನ್ನಿಂಗ್ಸ್ ಆಡಲು ಸಂಕೇಶ್ವರರು ಪ್ಯಾಡು ಕಟ್ಟಿ ಇಳಿಯುತ್ತಿದ್ದಾರೆ. ಹೇಳಿಕೇಳಿ ಅವರು ಅಪ್ಪಟ ವ್ಯವಹಾರಸ್ಥರು. ರಾಜಕೀಯ ಜಾಣ್ಮೆಯಿಲ್ಲದೆ ಆ ಕ್ಷೇತ್ರದಲ್ಲಿ ಏಟು ತಿಂದಿದ್ದೇನೋ ನಿಜ. ಆದರೆ ವ್ಯವಹಾರದಲ್ಲಿ ಅವರು ನಿಸ್ಸೀಮರೆಂದು ಎಲ್ಲರಿಗೂ ಗೊತ್ತಿರುವುದರಿಂದಲೇ ಹೊಸ ಪತ್ರಿಕೆಯ ಸ್ವರೂಪ, ಉದ್ದೇಶ, ಗುರಿ ಇತ್ಯಾದಿಗಳ ಕುರಿತು ಮಾಧ್ಯಮ ಪಂಡಿತರಲ್ಲಿ ಸಾಕಷ್ಟು ಕುತೂಹಲವಿದೆ.

ಅದೆಲ್ಲ ಸರಿ, ಸಂಕೇಶ್ವರರ ಹೊಸ ಪತ್ರಿಕೆಗೆ ಸಾರಥಿಗಳು ಯಾರು? ನಮಗೆ ಗೊತ್ತಾಗಿರುವ ಮಾಹಿತಿ ಪ್ರಕಾರ ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ ಹಾಗು ತಿಮ್ಮಪ್ಪ ಭಟ್ಟರ ಹೆಸರು ಮುಂಚೂಣಿಯಲ್ಲಿದೆ. ಇಬ್ಬರೂ ಸಜ್ಜನರು, ಸಂಭಾವಿತರು. ಇಬ್ಬರಿಗೂ ಹೊಸ ಪತ್ರಿಕೆಯನ್ನು ನಿರ್ವಹಿಸಲು ಬೇಕಾದ ಅನುಭವವಿದೆ. ಈ ಪೈಕಿ ಉದಯವಾಣಿ ಮಾಜಿ ಸಂಪಾದಕರಾದ ತಿಮ್ಮಪ್ಪ ಭಟ್ಟರು ಸಂಕೇಶ್ವರರ ಹೊಸ ಪತ್ರಿಕೆಯಲ್ಲಿ ಇದ್ದೇ ಇರುತ್ತಾರೆ ಎಂಬುದು ನಮಗೆ ಗೊತ್ತಾದ ಖಚಿತ ಮಾಹಿತಿ.

ಶರ್ಮಾಜಿ" ಠೀವಿ ಹೋಯ್ತು ! ಜೋತಿಶಿಗೆಶನಿಗ್ರಹ ಪೀಡೆ

ಮತ್ತೊಂದು ಸಂತಸದ ವಿಷಯ. ಜೀ ಟಿವಿಯ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದಿಂದ ನರೇಂದ್ರ ಶರ್ಮ ಅವರನ್ನು ತೊಲಗಿಸಲಾಗಿದೆ. ಇದು ನಮಗೆ ಗೊತ್ತಾಗಿರುವ ಮಾಹಿತಿ. ಜೀ ಟಿವಿಗೆ ಒಂದು ಥ್ಯಾಂಕ್ಸ್ ಹಾಗು ಜಗನ್ಮಾತೆಗೆ ಕೋಟಿ ವಂದನೆ. ಬಾಯಿಬಡುಕ ನರೇಂದ್ರ ಶರ್ಮನನ್ನು ತೊಲಗಿಸಿ ಎಂದು ನಾವೆಲ್ಲರೂ ಆರಂಭಿಸಿದ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನ ಕಡೆಗೂ ಯಶಸ್ವಿಯಾಗಿದೆ. ಜೀ ಟಿವಿ ಮುಖ್ಯಸ್ಥರಿಗೆ ಸಾವಿರಾರು ಪತ್ರಗಳನ್ನು ಬರೆದು ಈ ಕೊಳಕು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕೋರಿದ ಎಲ್ಲರ ಶ್ರಮವೂ ಸಾರ್ಥಕಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು.

ನರೇಂದ್ರ ಶರ್ಮ ಅನಾಮತ್ತಾಗಿ ಮೂರು ಚಾನಲ್‌ಗಳನ್ನು ಸುತ್ತಾಡಿ ಮುಗಿಸಿಯಾಗಿದೆ. ಕಸ್ತೂರಿ, ಸುವರ್ಣ ಹಾಗು ಜೀ ಟಿವಿಗಳ ಪ್ರಯಾಣ ಮುಗಿದಾಗಿದೆ. ಮುಂದೆ ಆತ ಇನ್ನ್ಯಾವ ಚಾನಲ್ ಹಿಡಿಯುತ್ತಾರೋ ಕಾದು ನೋಡಬೇಕು. ಆದರೆ ಈತನ ವಿರುದ್ಧ ಎದ್ದಿರುವ ಆಕ್ರೋಶವನ್ನು ಗಮನಿಸಿರುವ ಇತರ ಚಾನಲ್‌ಗಳು ಈ ಸೆರಗಿನ ಕೆಂಡವನ್ನು ಕಟ್ಟಿಕೊಂಡರೆ ಎದುರಿಸುವ ಅಪಾಯಗಳನ್ನು ಈಗಾಗಲೇ ಊಹಿಸಿರಬಹುದು. ಇನ್ನುಳಿದದ್ದು ಅವರಿಗೆ ಸೇರಿದ್ದು. (ಸಂಪಾದಕೀಯ)

ಅನಾಥಗೆ ಸ್ವಾಮೀಜಿ ರಕ್ಷೆ !


ಭಜರಂಗ ದಳದ ಪ್ರಧಾನ ಮಾರ್ಗದರ್ಶಕ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ ಕಾಲಿಗೆ ರೆಸಿಡೆಂಟ್ ಎಡಿಟರ್ರ್ ವಿಕೆ ಅನಾಥ ಬಿದ್ದಿರುವ ಲೇಟೆಸ್ಟ್ ಸುದ್ದಿ ಬಂದಿದೆ. ಶ್ರೀರಾಮ ಸೇನೆ ಬಜರಂಗ ದಳದ ಕಂಟ್ರೋಲ್ ಹೊಂದಿರುವ ವಜ್ರದೇಹಿ ಮಠಕ್ಕೆ ಕುನಾಥ ಭೇಟಿ ಕೊಡುವುದು ಹೊಸತಲ್ಲ. ತನ್ನನ್ನು ಎಬ್ಬಿಸಲಾಗುತಿರುವ ಬಗ್ಗೆ ಕೇಳಿಕೊಂಡಿದ್ದಾನೆ. ...
ಹೆಚ್ಚಿನ ವಿವರಗಳಿಗೆ ನ್ಯೂವ್ ಮೀಡಿಯಾಬ್ಲಾಗ್ ಬ್ಲಾಗ್ ಸ್ಪಾಟ್ ಡಾಟ್ ಕಾಮ್ ನೋಡಿ

Monday

ರಾಮ -ರಾಘವ ಯುದ್ಧ.. ಕು. ಸನ್ನದ್ಧ



ರಾಘವನ ಮೇಲೆ ರಾಮನೇ ಕುಂಭಕರ್ಣನ ಜತೆ ಸೇರಿ ಯುದ್ಧ ಘೋಷಿಸಿದರೆ... ಹೌದು ಸ್ವಾಮಿ ಇದು ಕಲಿಕಾಲ. ವಿಕೆ ರಾಮ ಮತ್ತು ಕುಂಭಕರ್ಣ (ಕುನಾಥ) ಮಂಗ ಳೂರಿನ ಕಪಿಸೇನೆ ಬಳಸಿಕೊಂಡು ರಾಘವ ಮತ್ತು ಲಕ್ಷ್ಮಣ (ನಾವಡ)ರನ್ನು ಮಣಿಸಲು ಪಕ್ಕಾ ಸ್ಕೆಚ್ ರೂಪಿಸಿದ್ದಾರೆ.
ಪ್ರತಿಯೊಬ್ಬ ಎದುರಾಳಿಯನ್ನು ದಾಖಲೆಯ ಬಲೆಯಲ್ಲಿ ಕೆಡವಿ ಗೆದ್ದು ಬಿಡುವುದು ಇವರ ವೈಶಿಷ್ಟ್ಯ. ಈ ಬಾರಿ ಮಾತ್ರ ಸಂಪಾದಕರಿಗೇ ಕೆಡ್ಡಾ ತೋಡಿದ್ದಾರೆ ರಾಮನ ಬಂಟರು ! ವಿಶ್ವ ಈಶ್ವರನೇ ಇರಲಿ, ರಾಘವನೇ ಬರಲಿ ಅವರ ವಿರುದ್ಧ ಅಭಿಯಾನ ನಡೆಸುವುದೇ ಇವರ ಕೆಲಸ. ಈಗ ರಾಘವ, ನಾವಡರ ಸರದಿ.
ಪ್ರತಿ ದಿನ ಮರಣವಾಣಿಯಲ್ಲಿ ಬಂದ ಜಾಹೀರಾತುಗಳು ಮತ್ತು ಜಾಹೀರಾತು ಸುದ್ದಿಗಳ ಕಟ್ಟಿಂಗ್ ರೆಡಿ ಮಾಡುವುದಷ್ಟೇ ಜಾಹೀರಾತು ಸಿಬ್ಬಂದಿ ಕೆಲಸ ಆಗಿಬಿಟ್ಟಿದೆ. ಒಂಥರಾ ಮುಷ್ಕರ ಹೂಡಿದ್ದಾರೆ. ಕೆಲಸ ಮಾಡದಿದ್ದರೆ ಜಾಹೀರಾತು ಬರುವುದಾದರೂ ಹೇಗೆ.. ಶ್ರೀರಾಮಚಂದ್ರನೇ ಬಲ್ಲ.



" ಜಾಹೀರಾತು ಸುದ್ದಿ ಪ್ರಕಟವಾಗದೆ ಲಕ್ಷಗಟ್ಟಲೆ ಜಾಹೀರಾತು ಮಿಸ್ ಆಗುತ್ತಿದೆ. ಇದರಿಂದ ನನಗೆ, ಅದಕ್ಕಿಂತಲೂ ಕಂಪನಿಗೆ ಹೆಚ್ಚು ನಷ್ಟ ಆಗಿದೆ'



ಎಂಬ ಒಕ್ಕಣೆ ವಿವರಗಳನ್ನು ಗ್ರಾಮೀಣ ಅರೆಕಾಲಿಕ ವರದಿಗಾರಿಂದ ಪಡೆದು ಅದರ ದಾಖಲೆ ಮೂಟೆಗಳನ್ನು ಬೆಂಗಳೂರಿಗೆ ನೀಡಿದ್ದಾರೆ. ಜಾಹೀರಾತು ಸುದ್ದಿಗಳಿಗೆ ಕಠಿಣ ನಿಬಂಧನೆ ಹೇರಿದ್ದರಿಂದ ಒಂದು ತಿಂಗಳಲ್ಲಿ 20 ಲಕ್ಷ ರೂ. ಆದಾಯ ಖೋತಾ ಆಗಿದೆ ಎಂಬ ವಿಶೇಷ ನೋಟ್ ಕೂಡಾ ನೀಡಿದ್ದಾರೆ. ಕಮಲ ಪಕ್ಸದ ಭಟ್ಟರ ನೇತೃತ್ವದಲ್ಲಿ ಫೈಲ್ ರೆಡಿಯಾಗಿದೆ. ಇನ್ನೇನು ಸಿಇಒ ನೋಡಿ ಓಕೆ ಅಂದರೆ, ನಾವು ಗೆದ್ದೆವು ಎಂಬ ಭ್ರಮೆಯಲ್ಲಿ ಇದ್ದಾರೆ ಕಪಿ ಸೇನೆ ನಾಯಕರು.



ಆದರೆ ಬುಡಕ್ಕೆ ಬಂದು ಬಿಟ್ಟಿದೆ. ಆರಾಮನ 35 ಲಕ್ಷದ ವೈಭವೋಪೇತ ಅರಮನೆ, ಹೊಸ ಕಾರು, ಕುಂಭಕರ್ಣ (ನಾಥ)ನ ೨೮ಲಕ್ಷದ ಉರುವಮನೆ, ಕಾರು, ಇದಕ್ಕೆ ಒಟ್ಟಾದ ವಂತಿಗೆ, ದುಬೈ ಹಣದ ಬಗ್ಗೆ ಕಂಪನಿ ತನಿಖೆ ನಡೆಸಿದರೆ... ! ಘನ ಘೋರ ಯುದ್ಧದಲ್ಲಿ ಭಸ್ಮಾಸುರನಂತೆ ಸ್ವತಃ ತಲೆ ಮೇಲೆ ಕೈ ಇಟ್ಟು ಸಾಯಬೇಕು ಇದೆಲ್ಲಾ ಬೇಕಾ ?

ಶಶಿ ಜಾರಿದಾ.. ಬಾ..ರವಿ ಮೂಡಿದ..

ಸಮಯ ಜಂಪ್ ಟಿ ಆರ್ ಪಿ ಜಂಪ್ ಆಗಿದೆ. ಸುವರ್ಣ ಹಾಗೂ ಹೀಗೂ ಕುಂಟುತ್ತಾ ನಡೆಯುತ್ತಿದ್ದು, ಮುಂದಿನ ನಾಯಕನನ್ನು ಎದಿರು ನೋಡುತ್ತಾ ಸುವರ್ಣ ಯುಗಕ್ಕಾಗಿ ಕಾಯುತ್ತಿದೆ. ಸುವರ್ಣದಲ್ಲಿ ರಾಜಕೀಯ ಹಿರಿಯ ವರದಿಗಾರ ಸುಭಾಷ್ ಹೂಗಾರ ಮತ್ತು ರವಿರಾಜ ವಳಂಬೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ವಿಚಿತ್ರ ವರದಿಗಾರರಾದ ಶಂಕರ ಘಟ್ಟ ಚಂದ್ರೇಗೌಡ ನನ್ನು ನಿವಾಳಿಸಿ ಕಳುಹಿಸಿದ್ದಾರೆ. ಚಂದ್ರೇಗೌಡ ಎಂಬ ಗಿರಾಕಿ ಸಂಸ್ಥೆಯ ಎಲ್ಲ ಸೊತ್ತುಗಳನ್ನೂ ಸಂಪೂರ್ಣ ಻ನುಭವಿಸಿದ ಸುಖ ಲೋಲುಪ. ಇಂಥ ಭಟ್ಟಂಗಿಗಳಿಂದಲೇ ಶಶಿಧರ ಭಟ್ಟರು ಮೈ ಸುಟ್ಟುಕೊಂಡರು. ಪರಮೇಶ್ವರ, ಚಂದ್ರ ಮೊದಲಾದವರ ಸಂಪಾದನೆ ನೋಡಿದ ಭಟ್ಟರು ಸುಮ್ಮನೆ ಯಾಕೆ ಉಳಿದು ಬಿಟ್ಟರು ಎಂಬ ಸಂಶಯ ಸಿಬ್ಬಂದಿ ವರ್ಗಕ್ಕೆ ಇತ್ತು. ಅಷ್ಟರಲ್ಲಿ ಭಟ್ಟರನ್ನು ಕಳುಹಿಸಿದ ಚಾನೆಲ್ ರಂಗನನ್ನು ಸೇರಿಸಿದ್ದರು. ಈಗ ಜಯಪ್ರಕಾಶ್ ಶೆಟ್ಟರು ಸುವರ್ಣದ ರಾಜಕೀಯ ಬ್ಯೂರೊ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೂಲತಃ ಈಟಿವಿ ಆಂಕರ್ ರಾಜಕೀಯದಲ್ಲಿ ಅಷ್ಟೇನೂ ಪಳಗಿಲ್ಲ. ರಂಗ ಇರುವವರೆಗೂ ಮೂಲೆ ಸೇರಿದ್ದರು. ಆದರೆ ಹಿರಿಯರೆಲ್ಲ ಬಿಟ್ಟು ಹೋದ ಬಳಿಕ ಸ್ಥಾನಕ್ಕೆ ಏರಿದ್ದಾರೆ.
ಶಶಿ ಅಸ್ತ :
ಶಶಿಧರ ಭಟ್ಟರು ಸಮಯ ನೋಡಿ ಸಮಯಕ್ಕೆ ಸೇರಿದ್ದರು. ಶಶಿ ಮೂಡಿದ ಎನ್ನುವಷ್ಟರಲ್ಲಿ ಮತ್ತೆ ಅಸ್ತಮಿಸುತ್ತಿರುವ ಲಕ್ಷಣ ಕಂಡು ಬಂದಿದೆ. ಸಮಯ ಸೇಲ್ ಆದರೆ ಭಟ್ಟರಿಗೆ ಮತ್ತೆ ಟೆಂಡರು ಕರೆಯುವವರು ಯಾರು ? ಎಂಬ ಪ್ರಶ್ನೆ ಮೂಡಿದೆ. ಸಮಯ ಆಧ್ಯಾತ್ಮಿಕದತ್ತ ವಾಲುವ ಎಲ್ಲ ಲಕ್ಷಣ ಕಾಣಿಸಿದೆ. ನಮ್ಮ ಸಂಸ್ಕೃತಿಯ ಅಂದರೆ ಋಷಿ ! , ಮಠ, ಮಂದಿರಗಳಿಗೆ ಹೆಚ್ಚಿನ "ಸಮಯ" ಮೀಸಲಿಡುವ ಸಾಧ್ಯತೆ ಗಳಿವೆ.
ರಂಗನಾಥನ ಗುಣ ...
ರಂಗ ಸುವರ್ಣ ದಲ್ಲಿ ಕ್ಯಾಪ್ಟನ್ ಆಗಿ ಬದಲಾದ ಮೇಲೆ ಪರ ವಿರೋಧ ಅಭಿಪ್ರಾಯಗಳು ಮೂಡಿದವು. ಏನೇ ಹೇಳಲಿ ಸಪ್ಪೆಗಿಂತ ವಿಚಿತ್ರ, ವಿಕ್ಷಿಪ್ತ ವ್ಯಕ್ತಿತ್ವ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬುವುದಕ್ಕೆ ರಂಗ ಸಾಕ್ಷಿ. ಎಷ್ಟೇ ದೂಷಿಸಿದರೂ ಅವರು ಹೋದ ಬಳಿಕ ಏನೋ ಕಳೆದುಕೊಂಡ ಅನುಭವ. ಮರೆತರೂ ಮರೆಯದ ಮಾಯೆ ರಂಗನಾಥರದ್ದು.
ಸುವರ್ಣದಲ್ಲಿ ಲಾದೆನ್ ಕುರಿತು ಅನುಭವ ! ಹೇಳಿಕೊಂಡ ಬೆಳಗರೆ ಜನಶ್ರೀಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಅವಕಾಶವಾದಿಗಳೆಂದರೆ ಹೀಗೆ.. ಎಲ್ಲೂ ಗಿಟ್ಟಿಸಿಕೊಳ್ಳುತ್ತಾರೆ, ಅವಶ್ಯಕತೆ ಇಲ್ಲಾ ಅಂದರೆ ಒದ್ದು ಹೊರಕಳುಹಿಸುತ್ತಾರೆ... ಒಂದಲ್ಲಾ ಒಂದು ದಿನ ಒದೆಸಿಕೊಂಡವರೆಲ್ಲಾ ಒಟ್ಟಾಗಿ ಒದೆಯುವ ದಿನ ದೂರ ಇಲ್ಲ.

Sunday

ಪಜೆವಾಣಿ ಮಹೀ ಪಡೆ ಹಿಟ್ 'ವಿಕೆ' ಟ್


ವಿಕೆಯನ್ನು ಮಣ್ಣು ಮುಕ್ಕಿಸುತ್ತೇನೆ, ತಿಂಗಳ ಒಳಗೆ ಸರ್ಕುಲೇಶನ್ ೨೫ ಸಾವಿರ ಮಾಡಿ ತೋರಿಸುತ್ತೇನೆ ಎಂದು ಮುನ್ನುಗ್ಗುತ್ತಿದ್ದ ಮಂಗಳೂರು ಪಜೆವಾಣಿ ಚೀಪ್ ಬ್ಯೂರೊ ಈಗ ಪಜೆ ಹಾಕಿ ಮಲಗಿದ್ದಾರೆ ! ವಿಕೆಗಿಂತ ಮೊದಲು ಎಡಿಶನ್ ಆರಂಭಿಸಿದರೂ ಅದರ ಹತ್ತನೇ ಒಂದು ಅಂಶ ಮಾತ್ರ ಪ್ರಸರಣ ಇರುವ ಬಗ್ಗೆ ಚಿಂತಿತರಾಗಿದ್ದ ಆಡಳಿತ ಮಂಡಳಿಗೆ ಭರವಸೆ ಮಹಾಪೂರ ನೀಡಿದ್ದೇ ವಿಕೆಯ ಮಾಜಿ ಉದ್ಯೋಗಿ ಮಹಿ. ಮಂಗಳೂರಿನ ವಿಕೆಯನ್ನು ಮಲಗಿಸಿ ಪಜೆವಾಣಿ ಪ್ರಸರಣವನ್ನು ಹೇಗಾದರೂ ಮಾಡಿ ಮೇಲೆತ್ತುತ್ತೇನೆ ಎಂದು ಮ್ಯಾನೇಜ್ ಮೆಂಟ್ ಗೆ ಭರವಸೆ ನೀಡಿದ್ದ ಮಹಿ ಪಡೆಯ ಸಾಮ್ರಾಜ್ಯ ಈಗ ಅವನತಿಯಲ್ಲಿದೆ.
ಪ್ರತಿ ದಿನ ವಿಕೆ ನೋಡಿ ಈ ಸುದ್ದಿ ಬಂದಿಲ್ಲ. ಆ ಸುದ್ದಿ ಬಂದಿಲ್ಲ ಎಂದು ಗ್ರಾಮೀಣ ಮತ್ತು ನಗರ ಸುದ್ದಿಗಾರರ ಬೆಂಡೆತ್ತುತ್ತಿದ್ದ ಪರಾಕ್ರಮ ಕಂಡೇ ಸಿಬ್ಬಂದಿ ಇವರಿಗೆ ಭಸ್ಮಾಸುರ ಎಂದು ಹೇಳಿ ತೃಪ್ತಿ ಪಟ್ಟುಕೊಳ್ಳುತ್ತಿದ್ದರು. ಒಂದಿಬ್ಬರು ಹೊಸ ಮುಖಗಳಿಗೆ ಮಣೆ ಹಾಕಿ ಸೀನಿಯರ್ ಗಳನ್ನು ದೂರ ಇಟ್ಟು ಎಲ್ಲ ಬ್ಯೂರೋ ಚೀಫ್ ಗಳ ಚೀಪ್ ಮೆಂಟಾಲಿಟಿ ತೋರಿಸಿ ಕೊನೆಗೆ ಸಾಧಿಸಿದ್ದು ಮಾತ್ರ ಶೂನ್ಯ. ತಳ ಹಿಡಿದ ಪಜೆವಾಣಿ ಮೇಲೆ ಬಂದಿಲ್ಲ. ಪತ್ರಿಕೆ ಗುಣಮಟ್ಟ ಸುಧಾರಿಸಿತೇ ಹೊರತು ಓದುಗರು ಹೆಚ್ಚಲಿಲ್ಲ. ಪ್ರತಿ ತಿಂಗಳು ಪತ್ರಿಕೆ ಸಂಖ್ಯೆ ಹೆಚ್ಚಾಯಿತೇ ಎಂದು ಆಸೆ ಕಣ್ಣುಗಳಿಂದ ನೋಡುತ್ತಿದ್ದದ್ದೇ ಬಂತು.
ಅನಂತಮೂರ್ತಿ ದೂರು !
ಸಂಗ್ರಾಹಕರನ್ನು ಪೀಡಿಸುವ ಈ ಧೋನಿ ವಿರುದ್ಧ ಅನಂತಮೂರ್ತಿ ಮಹಾಶಯರು ಶಾಂತ ಕುಮಾರ್ ಬಳಿ ದೂರು ನೀಡಿದ್ದರು. ಸುದ್ದಿ ಸಂಗ್ರಾಹಕರಿಗೂ ಜ್ಞಾನಪೀಠ ಅನಂತಮರ್ತಿಗೂ ಏನು ಸಂಬಂಧ ಎಂದು ಕೇಳಬೇಡಿ, ಯಾರೋ ಶಿಷ್ಯರ ಮೂಲಕ ಮಹಿ ಕಿತಾಪತಿಗಳನ್ನು ಮ್ಯಾನೇಜ್ ಮೆಂಟ್ ಗೆ ನೀಡಿದ್ದಾರೆ. ಶಾಂತಕುಮಾರ್ ಕರೆಸಿ ಮಾತನಾಡಿದ್ದಾರೆ.
ನನ್ನಿಂದ ಪತ್ರಿಕೆ ಪ್ರಸರಣ ಸಂಖ್ಯೆ ಹೆಚ್ಚಿಸಲು ಸಾಧ್ಯವಿಲ್ಲ ಎಂದ ಮಹಿ ವರ್ಗಾವಣೆ ಕೇಳಿದ್ದಾರೆ. ಆದರೆ ಇನ್ನೂ ಒಂದು ವರ್ಷ ಅಲ್ಲೇ ಮಣ್ಣು ಹೊರುವಂತೆ ಮ್ಯಾನೇಜ್ ಮೆಂಟ್ ಸೂಚಿಸಿದೆ. ಈಗ ಶಿಕ್ಷೆ ರೂಪದಲ್ಲಿ ಸೂರೆ ಹೋದ ಮಂಗಳೂರು ಕೋಟೆಯನ್ನು ಕಾವಲು ಕಾಯುತ್ತಿದ್ದಾರೆ ದೊರೆ ರಾಜಾಧಿರಾಜ ಪತ್ರಿಕಾ ಕುಲತಿಲಕ ಶ್ರೀ ಶ್ರೀ ಮಹೇಂದ್ರವರ್ಮ ಮಹಾರಾಜರು.
ಲಗೋರಿ, ತಿಲ್ಲಾನ ಬದಿಗಿಟ್ಟು ಈಗ
ಹಿಟ್ ವಿಕೆಟ್:
ಹೌದು ಈಗ ವಿಕೆ ಪ್ರಸರಣ ಹೆಚ್ಚಿಸುತ್ತೇನೆ ಎಂದು ಭರವಸೆ ನೀಡಿ ಬಂದ ನಾವಡರ ಕತೆಯೂ ಭಿನ್ನವಾಗಿಲ್ಲ. ಒಳಗೊಳಗೆ ಕತ್ತಿಮಸೆಯುತ್ತಿರುವ ಪೈಯ್ಡ್ ನ್ಯೂಸ್ ನ ಅನೈತಿಕ ಸಂಬಂಧದ ಆ ರಾಮ-ನಾಥ ಪಡೆ ನಾವಡರನ್ನು ಹಿಟ್ ವಿಕೆಟ್ ಮಾಡಿಸಲು ತಂತ್ರ ರೂಪಿಸಿದೆ. ಸುದ್ದಿಸಂಗ್ರಾಹಕರ ಮೂಲಕವೇ ದೂರುಗಳನ್ನು ರೆಡಿ ಮಾಡಿ ಮ್ಯಾನೇಜ್ ಮೆಂಟ್ ಗೆ ಒಪ್ಪಿಸಿದೆ. ಪಾಪ ನಾವಡ ಕತೆ ಗೋವಿಂದ.. ಒಡ್ಡೋಲಗ ಆರಂಭದಲ್ಲಿಯೇ ಅಕಟಕಟಾ.. ಮತ್ತು (ಅ)ಮಂಗಳ ಹಾಡು ಕೇಳಿಬರುತ್ತಿದೆ. ದ್ರೌಪದಿ ವಸ್ತ್ರಾಪಹರಣಕ್ಕೆ ಬಂದ ಕೃಷ್ಣ ಇಲ್ಲಿ (ರಾಘವ) ರಕ್ಷಣೆಗೆ ಬರುತ್ತಾನೆಯೋ ಕಾದು ನೋಡಬೇಕಿದೆ..

Wednesday

ನೆಟ್ವರ್ಕ್- ನಾಟ್ ವರ್ಕ್ !

ಸೋಶಿಯಲ್ ನೆಟ್‌ವರ್ಕಿಂಗ್‌ನ ಏಳು ಅಪಾಯಗಳ ಬಗ್ಗೆ ಇಲ್ಲೊಂದು ಲೇಖನವಿದೆ. ಸಮಯ ಮಾಡಿಕೊಂಡು ಓದಿ. ಆಮೇಲೆ ನಿಂಗ್, ಟ್ವಿಟರ್ ಇತ್ಯಾದಿಗಳಿಗೆ ಸದಸ್ಯರಾಗಬೇಕೋ ಅಂತ ನಿರ್ಧಾರ ಮಾಡಿ. ಗುಡ್ ಲಕ್….. ———————————————————–

7 Hazards of Social Networking

Most of the risks of social networking fall into one of the following categories, which I call the 7 Hazards of Social Networking:

1. Impersonation. Does the social networking account (e.g., Twitter Account) belong to the actual person or company it is representing? For example, if you look at the Twitter account@johnsileo, you will see that my name is used to send business to a gentleman who is also an identity theft speaker. My actual account is @john_sileo. Whether this is considered social networking squatting or social networking identity theft, it’s impersonation.

2. Ownership. Who owns the data on the social networking sites’ servers? Do you own what you post on Facebook, what you email through GoogleMail or the financials you backup off-site on someone else’s servers? The fact that you don’t know should trouble you as much as it does me.

3. Breach. How is your social networking site protecting your profile and posting data? Are they susceptible to bots like ZombieSmiles that allow hackers into your Facebook profile through Facebook’s own client interface? Is it easy for a hacker to post something or appeal to your friends as if the hacker is actually you (account takeover impersonation)?

4. Fraud. Social networking is based in relationships of trust. You trust the people you befriend. Unfortunately, some studies suggest that 25% of the users accept friend requests from total strangers. This, along with account takeover impersonation, opens you up to “friend in distress” scams, information gathering and other forms of social networking fraud.

5. Disclosure. We are far bolder and far less discretionary with what we share online versus what we share in person. This means we risk giving out information that, given a second thought, we didn’t want to. Think of the New York Times reporters who tweeted about a closed-door meeting where they discussed charging for online content.

6. Human Error. Have you ever hit the button on an email that was meant to go to someone else? The same phenomenon happens on social networking sites, but the damage is exponential because of the medium – you might have just sent it to hundreds or thousands of followers or friends. I call this phenomenon Tweet Breach.

7. Underestimation. Because social networking started out as a personal application and still has the flavor of being controlled by individuals (as opposed to corporations), we often underestimate the sheer destruction caused by mishandling this tool. I believe that this is what happened to the military. They originally underestimated the data leakage taking place in the social networking sphere and have since, wisely, begun to rethink their strategy.

Until we recognize that anything posted on the internet (especially if social networking is involved) is Public, Permanent and Admissible in court, we will continue to underestimate the hazards of social networking.

About the author: John Sileo became America’s leading Identity Theft Speaker & Expert after he lost his business and more than $300,000 to identity theft and data breach. His clients include the Department of Defense, Pfizer and the FDIC. To further bulletproof yourself and your business, visit John’s blog at Sileo.com and receive a free white-paper: Privacy Means Profit: Safe Data = Profitable Data.

Saturday

ಇಂದು ಪತ್ರಕರ್ತರ ಚಿತಾವಣೆ ! ಗೆಲ್ಲೋದ್ಯಾರು ?





ಪತ್ರಕರ್ತರಿಗೆ ಇದು ಚುನಾವಣೆ ಕಾಲ. ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಮುಗಿದ ಬೆನ್ನಲ್ಲೇ ಈಗ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ನಡೆಯುತ್ತಿದೆ. ನಾಳೆಯೇ ಚುನಾವಣೆ. ರಾಜ್ಯ ಹಾಗು ಜಿಲ್ಲಾ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆಗೆ ಇಂದು ಮತದಾನ ನಡೆಯುತ್ತಿದೆ. ಬಳಿಕ ತಾಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಗಳು ನಡೆಯುತ್ತವೆ.

ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಎಲ್ಲಡೆ ಒಳಜಗಳ, ಭಿನ್ನಮತ ಸಾಮಾನ್ಯ. ರಾಜಕಾರಣಿಗಳ, ಅಧಿಕಾರಿಗಳ ಭಿನ್ನಮತ ಬರೆಯುವ ಪತ್ರಕರ್ತರದ್ದು ಮಾತ್ರ ಬಗೆಹರಿಸಲಾಗದ ಭಿನ್ನಮತ, ಒಗ್ಗಟ್ಟೇ ಇಲ್ಲ, ಎಲ್ಲ ಬಿಕ್ಕಟ್ಟು. ಪೆಟ್ಟಿಗೆಯಲ್ಲಿ ಚೇಳು ಹಾಕಿ ಬಾಯಿ ಮುಚ್ಚದಿದ್ದರೂ ಹೊರ ಬರುವುದಿಲ್ಲವಂತೆ. ಹಾಗೆ ಪತ್ರಕರ್ತರ ಸ್ಥಿತಿ. ಗುಂಪುಗಾರಿಕೆ, ಜಾತೀಯತೆ, ಸ್ವಪ್ರತಿಷ್ಠೆ, ಇಸಮ್ ಗಳಿಗೆ ಸಿಕ್ಕಿ ನಲುಗಿ ಹೋಗಿದೆ. ಅಮೂಲ್ಯ ಆಸ್ತಿಯನ್ನು ಹೊಡೆಯುವ ಸೈಲೆಂಟ್ ಕಿಲ್ಲರ್ ಗಳು ಹುದ್ದೆಯಲ್ಲಿ ಭದ್ರವಾಗಿ ಬೇರೂರುತ್ತಿದ್ದಾರೆ. ವಿರೋಧಿಸಲು ಒಳ್ಳೆಯ ಪತ್ರಕರ್ತರಿಗೆ ಪುರುಸೊತ್ತು ಇಲ್ಲ,

ಕಾರ್ಯ ಮರೆತ ಪತ್ರಕರ್ತರೇ ಹೆಚ್ಚಾಗಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವುದು ರೂಢಿ ಮಾತು. ಸಂಘದಲ್ಲಿ ಕೆಟ್ಟವರ ಸಂಗವೇ ಹೆಚ್ಚಾಗಿದೆ ಎನ್ನುದು ಪತ್ರಕರ್ತರ ಬೋಂಗು. ಹೆಚ್ಚಿನವರು ಅಕ್ರಿಡಿಶನ್ ಕಾರ್ಡ್ ಮಾಡಿಕೊಳ್ಳುವುದು, ಸೈಟ್ ಹೊಡೆಯುವುದೇ ಕ್ರಿಯಾತ್ಮಕ ಕೆಲಸ ಎಂದುಕೊಂಡಿದದಾರೆ.
ಪತ್ರಕರ್ತರು ಗುತ್ತಿಗೆ ಕಾರ್ಮಿಕರಂತೆ ನೇಮಕಗೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಎಸೆಯಲಾಗುತ್ತದೆ, ಕಣ್ಣುಮುಚ್ಚುವುದರ ಒಳಗೆ ಕಿತ್ತು ಹಾಕುತ್ತಿದ್ದಾರೆ, ಜಾಣರೂ ಹೇಗೋ ಬಚಾವ್ ಆಗುತ್ತಾರೆ, ಸಾಮಾನ್ಯ ಪತ್ರಕರ್ತರ ಬಗ್ಗೆ ಸಂಘ ಕಿಂಚಿತ್ತಾದರೂ ಗಮನ ಹರಿಸಿದೆಯೇ ?
ಬುದ್ಧಿವಂತ ಎಂದು ಹೇಳಿಕೊಳ್ಳುವ ನಾಗರಿಕರು ಮತ ಚಲಾವಣೆಗೆ ಬರುವುದಿಲ್ಲವೋ ಹಾಗೆಯೇ ಪ್ರಮುಖ ಪತ್ರಿಕೆಗಳ, ಪ್ರಮಖ ಪತ್ರಕರ್ತರು ಚುನಾವಣೆಗೆ ಬರುವುದೇ ಇಲ್ಲ. ಪತ್ರಕರ್ತರ ಚುನಾವಣೆಯಲ್ಲಿ ಗುಂಡು, ತುಂಡು, ಹಣ, ಜಾತಿ ರಾಜಕೀಯ ನುಸುಳಿದೆ. ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಇದಕ್ಕೆ ಉದಾಹರಣೆ.
ರೈಗೆ ಜೈ
ಇನ್ನು ಮಂಗಳೂರಲ್ಲಿಯೂ ಚುನಾವಣೆ ನಡೆಯುತ್ತಿದೆ. ವಿ ಬಿ ಯ ಪುಷ್ಪರಾಜ್ ಮತ್ತು ವಿಕೆ ಹರೀಶ್ ರೈ ನಡುವೆ. ಇಬ್ಬರೂ ಸಭ್ಯರೇ. ಆದರೆ ಬಲಪಂಥೀಯ ಮತ್ತು ಎಡಪಂಥೀಯ ಎಂದು ವಿಭಾಗಆಗುವುದರಿಂದ ರೈಗೆ ಹೆಚ್ಚಿನವರು ಜೈ ಎನ್ನುತ್ತಾರೆ ಎಂಬುದು ಸತ್ಯ. ಈ ನಡುವೆ ಕೆಲ ಅವಕಾಶವಾದಿಗಳು ಎರಡೂ ತಂಡದಲ್ಲಿದ್ದೇವೆ ಎಂದು ಕನ್ನಿಂಗ್ ಬುದ್ಧಿ ಪ್ರದರ್ಶಿಸಿದ್ದಾರೆ. ಈ ಹಿಂದೆ ಅಧಿಕಾರ ಅನುಭವಿಸಿ ಹಾರಾಡಿದ ಇದೇ ಗೋಮುಖ ವ್ಯಾಘ್ರರು ಎಡಪಂಥೀಯರು ಎಂಬ ಕಾರಣಕ್ಕೆ ಹಿಂದೆ ಪುಷ್ಪರಾಜ್ ಗೂ, ಮುಂದುಗಡೆ ರೈಗೂ ಜೈ ಘೋಷ ಹಾಕಿದ್ದಾರೆ. ಒಟ್ಟಾರೆ ಚುನಾವಣೆಯಲ್ಲಿ ಅನೇಕ ಮಂದಿ ಹಳ್ಳಕ್ಕೆ ಬಿದ್ದಿದ್ದಾರೆ. ಪ್ರಜ್ಞಾವಂತ ಮಂಗಳೂರಿನ ಪತ್ರಕರ್ತರಿಗೆ ನರಿಗಳ ಬುದ್ಧಿ ತಿಳಿದುಬಿಟ್ಟಿದೆ.

ಸುವರ್ಣ ಯುಗ ಅಂತ್ಯವೋ ಆರಂಭವೋ ?




ಏನಾಯಿತು ಎಂದು ತಿಳಿಯುವಷ್ಟರಲ್ಲಿ ಬಂದು ಹೋಯಿತು. ಇದಕ್ಕೆ ಮಿಂಚಿನಂತೆ ಬಂದು ಹೋದ ಅಧಿಕಾರ ಎನ್ನಬಹುದು. ಹಮೀದ ಪಾಳ್ಯ ಸುವರ್ಣ ನ್ಯೂಸ್ ಮುಖ್ಯಾ ಎಂದೇ ಎಲ್ಲರೂ ಹೇಳಿದ್ದೇ ಹೇಳಿದ್ದು, ಬ್ಲಾಗ್ ಗಳು ಸರ್ವೆ ಮಾಡಿ ಅಟ್ಟಕ್ಕೆ ಏರಿಸಿದ್ದೇ ಏರಿಸಿದ್ದು. ತಪ್ಪಲ್ಲ, ಎಲ್ಲರ ಜತೆಯೂ ಚೆನ್ನಾಗಿರುವ ಪಾಳ್ಯ ಪಾಳೇಗಾರಿಕೆ ಮನುಷ್ಯನಲ್ಲ. ಆದರೆ ಹಣವಂತ, ಅಧಿಕಾರವಂತರ ಬಳಿ ಅತಿಯಾದ ಸ್ನೇಹವೇ ಶಂಕಿಸಲು ಕಾರಣ.
ರಂಗಣ್ಣ ಹೋದ ಮೇಲೆ ತಾನೇ ಮುಖ್ಯಸ್ಥ ಎಂದು ಪಾಳ್ಯ ಸಿಕ್ಕ ಸಿಕ್ಕವರಿಗೆ, ಮಂತ್ರಿ ಮಹೋದಯರಿಗೆ ಫೋನು ಮಾಡಿ ಹೇಳಿದ್ದೇ ಬಂತು. ಸುವರ್ಣ ನ್ಯೂಸ್ ಸ್ಟಾಫ್ ಕೂಡ ಪಾಳ್ಯನೇ ಪಾಳೇಗಾರ ಎಂದು ಕೊಂಡಿದ್ದರು. ಅವಕಾಶವಾದಿ ರವಿ ಬೆಳಗರೆ ಸ್ಟುಡಿಯೊಕ್ಕೆ ಬಂದು ಲಾದೆನ್ ಬಗ್ಗೆ ಬೊಗಳೆ ಬಿಟ್ಟದ್ದು, ಬಳಿಕ ಆಸ್ಥಾನ ಪತ್ರಿಕೆಯಲ್ಲಿ ಪಾಳ್ಯನ ಫೋಟೊ ಹಾಕಿ ರುಣ ತೀರಿಸಿದ್ದು ಎಲ್ಲ ಸುವರ್ಣ ಮ್ಯಾನೇಜ್್ ಮೆಂಟ್್ ಕಣ್ಣಿಗೆ ಬಿದ್ದಿದೆ. ಕ್ಲೈಮ್ಯಾಕ್ಸ್ ನಲ್ಲಿ ಕತೆ ಗೊತ್ತಾಗಿದೆ. ಪಾಳ್ಯನ ಡೆಸಿಗ್ನೇಶನ್ ಬದಲಾಗಿಲ್ಲ ಬದಲಾಗಿ ಮಂಡಳಿ ಕೆಲವು ಅದಿಕಾರಕ್ಕೆ ಕತ್ತರಿ ಹಾಕಿದೆ. ರಂಗಣ್ಣ ಹೋದಾಗ ನೋಡಿಕೋ ಅಂದದ್ದೇ ತಪ್ಪಾಯಿತು. ಬೆರಳು ತೋರಿಸಿದರೆ ದೇಹವನ್ನೇ ನುಂಗಲು ಹೋಗುವುದೇ ?
ಸುವರ್ಣ ನ್ಯೂಸ್ ಗೆ ಪ್ರಮೋಶನ್ ಪಡೆದ ಶ್ಯಾಮ್ ನೋಡಿಕೊಳ್ಳುತಿದ್ದಾರೆ. ಖಚಿತ ಮೂಲಗಳ ಪ್ರಕಾರ ಕೆ.ಪಿ. ಸ್ಟಾರ್ ವಿಶ್ವೇಶ್ವರ ಭಟ್ಟರು ಯಾವುದೇ ಸಮಯದಲ್ಲಿ ಸುವರ್ಣ ನ್ಯೂಸ್ ಮುಖ್ಯಸ್ಥರಾಗಬಹುದು. ಆದರೆ ಕೆಪಿಗೆ ಚಾರ್ಮ ನೀಡುವುದರಲ್ಲಿ ಸದ್ಯ ಬ್ಯುಸಿ ಆಗಿರುವ ಭಟ್ಟರು, ಕೆಲವು ಸಮಯದ ಬಳಿಕ ಒಡ್ಡೋಲಗ ನಡೆಸಲಿದ್ದಾರೆ. ಈಗಾಗಲೇ ಭಟ್ಟರ ಜಾಹೀರಾತು ಸುವರ್ಣ ನ್ಯೂಸ್ ನಲ್ಲಿ ಬರುತಿದೆ. ಜಾಹೀರಾತು ಗುಣಮಟ್ಟ (ಕ್ಯಾಮೆರಾ- ಐಡಿಯಾ) ಅಷ್ಟೇನು ಚೆನ್ನಾಗಿಲ್ಲವಾದರೂ ಅಭಿಮಾನಿಗಳು ಖುಷ್ ಆಗಿದ್ದಾರೆ, ವರ್ಕ್ ಔಟ್ ಆಗುತ್ತಿದೆ ಎಂಬ ವರ್ತಮಾನ ಸುದ್ದಿಮನೆಗಳಲ್ಲಿ ಕತೆಯಾಗಿ ಕೇಳಿ ಬರುತ್ತಿದೆ.
ಈ ವಿಷಯ ಒತ್ತಟ್ಟಿಗಿರಲಿ, ರಂಗ ಹೊರ ಹೋದ ಮೇಲೆ ಸುವರ್ಣ ಬೆಳ್ಳಿ ರೇಟ್ ನಂತೆ ಇಳಿದಿದೆ. ಸ್ಟಾರ್ ಬೇಕೆಂಬ ಕಾರಣಕ್ಕೆ ರವಿ ಬೆಳಗೆರಯನ್ನು ಕರೆದು ತರಲಾಯಿತು. ಎಲ್ಲೆಡೆ ಲಾಭ ಗಿಟ್ಟಿಸುವ ರವಿ ಇಲ್ಲೂ ಲಾಟರಿ ಹೊಡೆದಿದ್ದಾರೆ. ಜನಶ್ರೀ ಬೆಳಗೆರೆಯನ್ನು ಮರಳಿ ಕರೆದಿದೆ. ಆದರೆ ಪಾಳ್ಯ ಪಾಲಿಗೂ ರವಿ ವಕ್ರ ಶನಿಯಾಗಿ ಪರಿಣಮಿಸಿದ್ದಾರೆ. ಈ ಬಗ್ಗೆ ಗುರುಗಳಲ್ಲಿ ಕೇಳಿದಾಗ ಶುಕ್ರ ಮೌಢ್ಯ, ಗುರುಬಲ ಇಲ್ಲ, ಅಧಿಕಾರ ನಷ್ಟ ಯೋಗ ಇದೆ ಎಂದು ಹೇಳಿ ಶೂನ್ಯದಲ್ಲಿ ಚಿನ್ನದ ಉಂಗುರ ನೀಡಿ ಹರಸಿದ್ದಾರೆ. ಆದರೆ ಇದೇ ಉಂಗುರ ಉರುಳಾದೀತು ಎಂಬ ಹೆದರಿಕೆ ಪಾಳ್ಯರಿಗೆ.
ಇನ್ನು ನೇರ ನಿಷ್ಟುರ ರಂಗ ಭಾರದ್ವಾಜನ ಕಥೆ. ಪಾಳ್ಯನನ್ನು ಎಳೆತಂದ್ದದ್ದು ಭಾರದ್ವಾಜ. ಇಬ್ಬರು ಒಳ್ಳೆಯವರೇ. ಆದರೆ ಭಾರದ್ವಾಜ ರಂಗನಿಂದ ಹೊರ ದಬ್ಬಿಸಿಕೊಂಡಾಗ ಪಾಳ್ಯ ಕ್ಯಾಪ್ಟನ್ ರಂಗನಿಗೆ ಸಾಥ್ ನೀಡಿ, ಬಾರದ್ವಾಜನಮನಸ್ಸಿಗೆ ಶಾಕ್ ನೀಡಿದರು. ದೊಡ್ಡ ದೊಡ್ಡ ತಲೆಗಳೇ ಬೋಳಾಗುತ್ತಿರುವುದನ್ನು ನೋಡಿದ ಮೇಲೂ ಪಾಳ್ಯ ಅರ್ಥ ಮಾಡಿಕೊಂಡಿಲ್ಲ. ಲಕ್ಷ್ಮೀ ಚಂಚಲೆ ಎಂಬುದನ್ನು ಅರಿಯಬೇಕು. ಈ ಟಿವಿ ಮೋಣ, ಕ್ಯಾಪ್ಟನ್ ( ಗಡ್ಡ )ರಂಗ, ಬುದ್ಧಿ ಜೀವಿ ಶಶಿದರ ಭಟ್ಟ ಮಕಾಡೆ ಮಲಗಿ, ಈಗ ಹೊರಳುತ್ತಿರುವುದನ್ನು ನೋಡಿದ ಮೇಲೂ ಈ ರೀತಿ ಮಾಡುವುದು ಸರಿ ಅಲ್ಲ. ಇನ್ನೂ ಕಾಲ ಮಿಂಚಿಲ್ಲ. ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡ ಅಭಿಮನ್ಯು ಆಗಬೇಡಿ, ತೊಡೆ ಮುರಿದುಕೊಂಡ ಕೌರವನೂ ಬೇಡ, ದೃತರಾಷ್ಟನಂತೆ ಕಣ್ಣು ಮುಚ್ಚಿರುವುದು ಬೇಡ ಧರ್ಮರಾಯನಂತಿರಬೇಕು ಎಂಬ ನಿರೀಕ್ಷೆ ಇಲ್ಲ, ಕನಿಷ್ಠ ನಕುಲ-ಸಹದೇವರಂತೆರಗಳೆ ಮಾಡದೆ ಕೆಲಸ ಮಾಡಿಕೊಂಡಿದ್ದರೆ ನಮಗೂ ನಿಮ್ಮನ್ನು ಪರದೆಯಲ್ಲಿ ನೋಡಿ ಖುಷಿ ಪಡುತ್ತೇವೆ. ಜೈ ಭವಾನಿ

Friday

ಇದು ತೇಜೋ ವಧೆ ಪ್ರಯತ್ನ ಅಲ್ಲ..

ಬ್ಲಾಗ್ ಕುರಿತು ದೂರು ನೀಡಲು ಸಿದ್ಧತೆ ನಡೆದಿದೆ ಎಂದು ನನ್ನ ಹಿತೈಷಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರ ಎಚ್ಚರಿಕೆಗೆ ಥ್ಯಾಂಕ್ಸ್. ಇದರಲ್ಲಿಯೂ ಬೇಸರ ವಿಷಯ ಎಂದರೆ ಬಲಿತರೇ ದೂರು ಹಿಡಿದುಕೊಂಡು ಸಂತ್ರಸ್ತನ ಮುಖವಾಡ ಹಾಕಿಕೊಂಡಿರುವುದು.
ವಸ್ತು ವಿಷಯ ಎಂದರೆ ಇಲ್ಲಿ ಪ್ರಕಟವಾಗುವ ಪೋಸ್ಟ್ಗ್ ಗಳು ಕಾಲ್ಪನಿಕ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಕುರಿತಾಗಿ ಬರೆದದ್ದಲ್ಲ. ಯಾರ ತೇಜೋವಧೆ ಮಾಡುವ ಕೀಳು ಮಟ್ಟದ ಪ್ರಯತ್ನವೂ ಅಲ್ಲ. ಒಂದು ವೇಳೆ ಸನ್ನಿವೇಶ, ಪಾತ್ರ ಘಟನೆಗಳು ಹೋಲಿಕೆಯಾಗಿದ್ದಲ್ಲಿ ಅದಕ್ಕೆ ನಾನು ಹೊಣೆಯಲ್ಲ. ಭ್ರಷ್ಟಾಚಾರ, ದೌರ್ಜನ್ಯ , ಮೋಸ, ಹಲಾಲುಕೋರತನ ವಿರುದ್ಧ ಪ್ರಕಟವಾದ ಲೇಖನಗಳಲ್ಲಿ ಯಾರಿಗಾದರೂ ಇದು ತಮಗೆ ಬರೆದಿರಬಹುದು, ಅಥವಾ ಪಾತ್ರ ತಮ್ಮಂತೆಯೇ ಇರಬಹುದು ಎನಿಸಿದ್ದರೆ ಅದಕ್ಕೆ ಅವರೇ ಹೊಣೆ !ಈ ಮೂಲಕವಾದರೂ ಪ್ರಾಮಾಣಿಕರಾಗಲು ಪ್ರಯತ್ನಿಸಲಿ. -ಸಂಪಾದಕಿ

Monday

ಕು ನಾಥ ಮತ್ತು ಮೂರು ಮಿಕಕ್ಕೆ ಮಂಗಳಾರತಿ








"ವಿ ಕೆ ಮುಚ್ಚಿ ಮರಣ ವಾಣಿ ಸೇರಿ ಮರಣ ವಾರ್ತೆ ಪತ್ರಿಕೆ ಹೊರ ತನ್ನಿ"


ರಾಘವನ್ ಕು. ನಾಥ ಮತ್ತು ಕರಕಟ ದಮನಕ ಜೋಡಿಗೆ ಎಚ್ಚರಿಸಿದ ಸ್ಟೈಲ್.

ಚೆನ್ನಾಗಿ ಹೇಳಿದ್ರಿ.. ಹಿ ಹಿ ಹಿ..


  1. ಭಳಿರೆ ಶಹಬ್ಬಾಸ್ ಮೆಚ್ಚಿದೆ. ಇದು ಸಂಪಾದಕರೆ ಇಲ್ಲದ ಬ್ಲಾಗ್ ನ ಮೆಚ್ಚುಗೆ. ಯುವಕರೇ ನಾಚಿಸುವ ಗಂಡೆದೆಯ ಚುಚ್ಚುವ ಮಾತುಗಳಿಂದ ಬೆಚ್ಚಿಸಿದ್ದು, ಸಚಿನ್ ನಂತೆ ಬ್ಯಾಟ್ ಬೀಸಿ ಶೋಇಬ್ ಅಕ್ತರನಂತೆ ಕು ನಾಥ ದಾಖಲೆಗಳ ಬೌನ್ಸೆರ್ ಎಸೆಯುತ್ತಿದ್ದರೂ ಹುಕ್ ಶೋಟ್ನಂತೆ ನ್ಯೂ ಎಡಿಟರ್ ಬೌಂಡರಿ ಸಿಕ್ಷ್ ಹೊಡೆದದ್ದೇ ಹೊಡೆದದ್ದು. ಇದನ್ನು ನೋಡಿ ನಾಥ ಬಳಗ ಇಂಗು ತಿಂದ ಮಂಗ ನ ಹಾಗೆ ಆದದದ್ದು.. .. !

ನಾವಡ ಪಟ್ಟಾಭಿಷೇಕ ಕ್ಕೆ ಬಂದು ಕಪಿ ಸೇನೆಯ ನಾಯಕ ಆನಾಥನನ್ನುಪಕ್ಕಕ್ಕೆ ಇರಿಸಿ ಮೆರೆಸಿದ ರಾಘವನ ಪರಾಕ್ರಮ ನೋಡಿದ ವಿ ಕೆ ಸಂಪಾದಕೀಯದ ಸಿಬ್ಬಂದಿಗಳೇ ವೋಳಗೊಳಗೆ ಖುಷಿ ಪಟ್ಟುಕೊಂಡದ್ದು ಅದನ್ನು ಗೆಳೆಯರಲ್ಲಿ ಹೇಳಿಕೊಂದದ್ದ್ದೆ ಹೇಳಿದ್ದ್ದು. ಇದಕ್ಕೂ ಅರ್ಥ ಇದೆ.





  • ಬೆಂಗಳೂರು ಪತ್ರಕರ್ತ ಮಿತ್ರರೂ ರಾಘವನ್ ಕುರಿತು ಹೇಳಿದ್ದ ಮಾತಿನಲ್ಲಿ ಅರ್ಥ ಇಲ್ಲ ಅಂತ ಈಗ ಅನಿಸುತ್ತಿದೆ. ಕು.ನಾಥ ನ ಅನಾಥಾಲಯಕ್ಕೆ ಬಂದ ಸಂಕೇಶ್ವರ, ವಿ ಭಟ್, ಎಚ್ ಅರ್ ಡಿವಿಭಾಗ ಜಾಹೀರಾತು, ಬ್ರಾಂಡ್ ಎಂಥೆಂಥ ಮುಕ್ಯಸ್ತರನ್ನೇ ಬಲೆಗೆ ಬೀಳಿಸಿದ ಕು. ಖ್ಯಾತಿಯ ನಾಥ್ಈ ಬಾರಿ ಮಕಾಡೆ ಮಲಗಿದ್ದು ನೋಡಿದರೆ ರಾಘವನ್ ಸಾಮಾನ್ಯ ಸಂಪಾದಕ ಅಂತ ಕಾಣುವುದಿಲ್ಲ. ಮಂಗಳವಾರ ಮಂಗಳೂರಿನ ಮಹಾ ಸಭೆಗೆ ಬಂದ ಎಡಿಶನ್ ನ ಎಲ್ಲ ವಿ ಕೆ ಸುದ್ದಿಗಾರರಿಗೆ ನಾಥನನ್ನು ಝಾದಿಸಿದ್ದು ನೋಡಿ ಅಚ್ಚರಿ moodiದ್ದು ಸುಳ್ಳಲ್ಲ. ಜಾಹೀರಾತು ಸಂಗ್ರಹಕ್ಕೆ, ಮಂತ್ಹ್ಲಿ ಕಲೆಕ್ಷನ್ಗೆ ಪತ್ರಿಕೆ ಬಳಸುತ್ತಿರುವ ದಂಡಪಿಂದಗಳಿಗೆ ಝಾಡಿಸಿದ ಸ್ಟೈಲ್ ವೀಡಿಯೋ
    ಮಾಡುವಂತಿತ್ತು.
ಪತ್ರಿಕೆ ಪ್ರಸಾರ ಹೆಚ್ಚಾಗಲು ನನ್ನ ಐದಿಯ ಗಳೇ ಎಂದು ಬೊಗಳೆ ಬಿಡುತ್ತಿದ್ದ ನಾಥ ನನ್ನ ತೆಗೆದು ಹಾಕಿದರೆ ಪ್ರಸಾರ ಕುಸಿಯುತ್ತದೆ ಎಂಬ ಭ್ರಮೆ ಮೂಡಿಸಲು ಪ್ರಯತ್ನಿಸುತ್ತಿದ್ದ. ಈಗಾಗಲೇ ಬಿದ್ದಿರುವ ಪೇಪರ್ ಲೆಕ್ಕ ಹಾಕಿರುವ ಸಂಸ್ಥೆ ನಾಥ್ ನೀಡಿದ ಎಲ್ಲದಾಕಲೆಗಳ ಮೂಟೆಯನ್ನು mooಲೆಗೆ ಎಸೆದಿದೆ. ಹೀಗಾಗಿ ಎಲ್ಲ ಅಧಿಕಾರಗಳನ್ನು ನಾವಡ ಗೆ ಒಪ್ಪಿಸಿದೆ ಎಂದು ಹೇಳ ಲಾಗುತ್ತಿದೆ.





ಹಿ ಹಿ ಹಿ ಹಿ ...

Sunday

ಕೃಷ್ಣ ಲೀಲೆ ತೋರುವ ಬಾಸ್ ಗಳೇ ಎಚ್ಚರ.. ಕಾದಿದೆ ಶಿಕ್ಷೆ

ಟೀವಿ ಚಾನೆಲ್ ಗಳಲ್ಲಿ ಮುಖ್ಯಸ್ಥರು ಹೆಣ್ಣು ಮಕ್ಕಳಿಗೆ, ಕೆಲವೆಡೆ ಗಂಡು ಮಕ್ಕಳಿಗೂ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಸಂತ್ರಸ್ತರು ಕಮೆಂಟ್ ಮೂಲಕ ನೋವು ತೋಡಿಕೊಂಡಿದ್ದಾರೆ. ಸಹೋದ್ಯೋಗಿಗಳಿಗೆ ಕಿರುಕುಳ ನೀಡುವುದು, ಅದರಲ್ಲಿಯೂ ಲೈಂಗಿಕ ಕಿರುಕುಳ ಕ್ಕೆ ದೊಡ್ಡ ಶಿಕ್ಷೆ ಇದೆ. ಕ್ರಾಸ್ ಚೆಕ್ ಬಳಿಕ ಕಾಮೆಂಟ್ ಪ್ರಕಟಿಸಲಾಗುವುದು.
ಇದು ಕಿರಕುಳ ನೀಡುತ್ತಿರುವ ಬಾಸ್ ಗಳಿಗೆ ಎಚ್ಚರಿಕೆ ಕರೆಗಂಟೆ..
ಹೈದರಾಬಾದ್ ಮೂಲದ ಕನ್ನಡ ಚಾನೆಲ್ ಒಂದರ ಮುಖ್ಯಸ್ಥರ ಮೇಲೆ ಆರೋಪ ಬಂದಿದೆ.
ಇನ್ನು ಹಲವು ಕಚೇರಿಗಳಲ್ಲಿ ತಮ್ಮ ಅಧಿಕಾರ ಪ್ರಯೋಗಿಸಿ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಯಾರಾದರೂ ದೂರು ನೀಡುವುದಿದ್ದರೆ ನಾವೇ ಮುಂದೆ ಬಂದು ಪ್ರಕಟಿಸುತ್ತೇವೆ. ಮೇಲಧಿಕಾರಿಗಳಿಗೆ ದೂರು ನೀಡುತ್ತೇವೆ.
ಇ ಮೇಲ್ ಕೂಡಾ ಮಾಡಬಹುದು..
-ಸಂಪಾದಕ ಇಲ್ಲದ ವ್ಯವಸ್ಥಾಪಕ

Friday

ಕದಿಯುವ ಪತ್ರಿಕೆಗಳಿವೆ ಎಚ್ಚರ !



ನಿಲುಮೆ ಬ್ಲಾಗ್ನಲ್ಲಿ ಪ್ರಕಟವಾದ ಪೋಸ್ಟ್ ಇಲ್ಲಿ ಪ್ರಕಟಿಸಿದ್ದೇವೆ.




ಇದಕ್ಕೆ ಮುನ್ನ

http://new-mediablog.blogspot.com/

ನೋಡಿ ಪತ್ರಕರ್ತರ ಬಗ್ಗೆ ತಿಳಿಯಿರಿ


ಇಂತದ್ದೊಂದು ತಲೆಬರಹ ಕೊಡುವುದೇ ಅಷ್ಟು ಚಂದ ಕಾಣುತ್ತಿಲ್ಲ,ಆದರೇನು ಮಾಡುವುದು ನಡೆದ ವಿಷಯವನ್ನ ಹೇಳ ಹೊರಟಾಗ ಹೀಗೆ ಆಗುತ್ತದೆ. ಕಳೆದ ತಿಂಗಳ ೨೭ರಂದು ಅರೆಹೊಳೆ ಸದಾಶಿವ ರಾವ್ ಅವರ ’‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು’ ಲೇಖನ ಹಾಗೆ ೨೫ರಂದು ರಶ್ಮಿ ಕಾಸರಗೋಡು ಅವರ ’‘ಎಂಡೋ ನಿಷೇಧಿಸಿ’ – ಶರದ್ ಪವಾರ್ ಗೊಂದು ಬಹಿರಂಗ ಪತ್ರ’ ಅನ್ನುವ ಲೇಖನವನ್ನ ನಿಲುಮೆಯ ಓದುಗರೆಲ್ಲ ನೋಡಿಯೆ ಇರುತ್ತೀರಿ. ಕಳೆದ ೨೮ರಂದು ’ಕರಾವಳಿ’ಯ ಪತ್ರಿಕೆಯೊಂದು ಏಕಾಏಕಿ ಲೇಖಕ/ನಿಲುಮೆಯ ಅನುಮತಿಯಿಲ್ಲದೆ ಈ ಲೇಖನಗಳನ್ನ ಕದ್ದಿದ್ದು ಅಲ್ಲದೇ ಕಡೆ ಪಕ್ಷ ಕೃಪೆ ಅಂತಲೂ ಹಾಕದೇ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ’ಕರಾವಳಿ’ಯ ಜನರಿಗೆ ಹಂಚಿದೆ.(ಆ ಪತ್ರಿಕೆಯ ಹೆಸರಿಗೆ ನಮ್ಮಿಂದ ಸ್ವಲ್ಪವು ಧಕ್ಕೆ ಬಾರದಿರಲಿ ಅನ್ನುವ ಏಕೈಕ ಉದ್ದೇಶದಿಂದ ಆ ಪತ್ರಿಕೆಯ ಹೆಸರನ್ನ ನೇರವಾಗಿ ಬರೆಯುತ್ತಿಲ್ಲ).

ಹಿಂದೊಮ್ಮೆ ರಾಕೇಶ್ ಶೆಟ್ಟಿಯವರ ‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !? ಅನ್ನುವ ಲೇಖನವನ್ನ ಮೈಸೂರು ಮೂಲದ ಯುವರಾಜಕಾರಣಿಯೊಬ್ಬರು ಕದ್ದಿದ್ದು ಅಲ್ಲದೇ ಅವರ ಹೆಸರನ್ನ ತೆಗೆದು ತನ್ನದೇ ಹೆಸರು/ಪೋಟೋ ಹಾಕಿಕೊಂಡಿದ್ದರು.ಕಡೆಗೆ ಎಚ್ಚರಿಸಿದ ಮೇಲೆ ತಪ್ಪಾಯಿತು ಅಂದಿದ್ದರು.ಅವ್ರಿಗೇನೋ ಬೌದ್ದಿಕ ಹಕ್ಕು ಅನ್ನುವುದೆಲ್ಲ ತಿಳಿದಿರಲಿಕ್ಕಿಲ್ಲ ಅಂದುಕೊಳ್ಳೋಣ.ಆದರೆ,ಕಂಡೋರಿಗೆಲ್ಲ ಬುದ್ದಿ ಹೇಳೊ ಪತ್ರಿಕೆಯವರಿಗೆ ಬೌದ್ದಿಕ ಹಕ್ಕು ಅನ್ನುವುದರ ಅರಿವಿಲ್ಲವೇ? ಈ ಇಬ್ಬರೂ ಲೇಖಕರು ಬೇರೊಂದು ಪತ್ರಿಕೆಗೆ ಬರೆಯುವವರು ಅದನ್ನ ಅನುಮತಿಯಿಲ್ಲದೆ ಪ್ರಕಟಿಸುವುದು ಪತ್ರಿಕಾ ಧರ್ಮವಲ್ಲ ಅನ್ನುವುದನ್ನ ನಾವು ಹೇಳಿಕೊಡಬೇಕಾ? ಸದಾಶಿವ ರಾವ್ ಅವರು ಆ ಪತ್ರಿಕೆಗೆ ಈ ಬಗ್ಗೆ ಪತ್ರ ಬರೆದು ಕೇಳಿದಾಗ ’ಇನ್ಮುಂದೆ ಈ ರೀತಿ ಆಗುವುದಿಲ್ಲ,ತಪ್ಪಾಗಿದೆ’ ಅಂದಿದ್ದಾರೆ.ಆದರೆ ರಶ್ಮಿಯವರು ಕರೆ ಮಾಡಿದರೂ ಸರಿಯಾಗಿದೆ ಉತ್ತರಿಸದೆ ನಿರ್ಲಕ್ಷಿಸಿದ್ದಾರೆ…! ಇದೆಂತ ಉದ್ಧಟತನ?

ವಿಷಯ ಹೆಚ್ಚು ಜನರಿಗೆ ತಲುಪಿಸುವ ಉದ್ದೇಶವೇನೋ ಒಳ್ಳೆಯದೇ,ಆದರೆ ಅದಕ್ಕೊಂದು ನೀತಿ-ರೀತಿ ಅನ್ನುವುದು ಇರುತ್ತದೆ.ಇದು ಕೇವಲ ಈ ಪತ್ರಿಕೆಯೊಂದರ ಚಾಳಿಯಲ್ಲ ಕೆಲವೊಂದು ಪತ್ರಿಕೆಗಳು ಈ ಹಿಂದೆ ಹೀಗೆ ಮಾಡಿರುವ ಉದಾಹರಣೆಗಳು ನಮಗೆ ಹಲವು ಬ್ಲಾಗುಗಳಲ್ಲಿ ಸಿಗುತ್ತವೆ.ಇನ್ಮುಂದಾದರೂ ಪತ್ರಿಕೆಗಳು ಪತ್ರಿಕಾ ಧರ್ಮವನ್ನ ಪಾಲಿಸಲಿ ಅನ್ನುವುದು ನಮ್ಮ ಆಶಯ.ಇಲ್ಲದಿದ್ದರೇ ಬುದ್ದಿ ಹೇಳೊ ಮಾಧ್ಯಮದ ಮಂದಿಯ ಬುದ್ದಿ ಎಲ್ಲಿದೆ ಅಂತ ಜನ ಕೇಳುವಂತಗಾಬಾರದು ನೋಡಿ…!

ಸದಾಶಿವ ರಾವ್ ಅವರು ’ಆ’ ಪತ್ರಿಕೆಗೆ ಬರೆದೆ ಪತ್ರವಿಲ್ಲಿದೆ.

ಪ್ರೀತಿಯ ಸ೦ಪಾದಕರಿಗೆ
ಅರೆಹೊಳೆ ಸದಾಶಿವ ರಾವ್ ಮಾಡುವ ನಮಸ್ಕಾರಗಳು
ದಿನಾ೦ಕ ೨೮.೦೪.೨೦೧೧ರ ತಮ್ಮ ಸ೦ಚಿಕೆಯಲ್ಲಿ ಪ್ರಕಟಿಸಿದ ನನ್ನ ಲೇಖನದ ಬಗ್ಗೆ ಬರೆಯಬೇಕಾದ ಅನಿವಾರ್ಯತೆ ಬ೦ತು.
ಮೊದಲಾಗಿ ನೀವು ‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು ಎ೦ಬ ನನ್ನ ಲೇಖನವನ್ನು ನನ್ನ ಅನುಮತಿ ಅಥವಾ ಅವಾಗಾಹನೆಗೆ ತರದೇ ಪ್ರಕಟಿಸಿದ್ದು ಬೇಸರವೆನಿಸಿತು. ಮತ್ತೆ ಲೇಖನದ ಪೂರ್ಣ ಪಾಠ ಪ್ರಕಟಿಸದೆ, ಲೇಖನದ ಒಟ್ಟು ಆಶಯ ಅಸ್ಪಷ್ಟ ವಾಗುವ೦ತೆ ಮಾಡಿದ್ದಿರಿ. ಲೇಖನದ ಶಿರ್ಶಿಕೆಗು ನೀವು ಪ್ರಕಟಿಸಿರುವ ‘ತು೦ಡು ಲೇಖನ’ ಕ್ಕೂ ಎಲ್ಲಿಯೂ ಸ೦ಬ೦ಧವೇ ಇಲ್ಲದ೦ತಾಗಿದೆ.
ಇನ್ನು ಒ೦ದು ಮುಖ್ಯ ವಿಚಾರವೆ೦ದರೆ, ನಾನು ನೇರವಾಗಿ ಅ ಲೇಖನವನ್ನು ತಮಗೆ ಕಳುಹಿಸಿರಲಿಲ್ಲ. ಅದು ನಾನು ನಿಯಮಿತವಾಗಿ ಬರೆಯುವ ಪತ್ರಿಕೆ ಹಾಗು ನಿಲುಮೆಗೆ ಅ೦ಕಣಕ್ಕೆ೦ದು ನಾನು ಸಿದ್ದ ಪಡಿಸಿದ ಲೇಖನ. ನನ್ನ ಅನಿಸಿಕೆಯ೦ತೆ ನೀವು ಅದನ್ನು ನಿಲುಮೆಯ ಮೂಲಕ ತೆಗೆದುಕೊ೦ಡಿದ್ದೀರಿ. ತಾವು ನಿಲುಮೆಯ ಕ್ರಪೆಯನ್ನು ಆ ಲೇಖನದಲ್ಲಿ ನಮುದಿಸಿದ್ದರೆ, ಈ ಯಾವ ಗೊ೦ದಲಗೂ ಉದ್ಭವಿಸುತ್ತಿರಲಿಲ್ಲವಾಗಿತ್ತು. ಅದನ್ನು ನೀವು ಮಾಡದ್ದು ಮತ್ತೊ೦ದು ಬೇಸರದ ವಿಚಾರ.

ಯಾವುದೇ ಪ್ರಕರಣವನ್ನು ಎಳೆಯುವುದು ನನಗಿಷ್ಟವಿಲ್ಲ. ಆದರೆ ತಾವು ಈ ವಿಷಯದಲ್ಲಿ ಪತ್ರಿಕಾ ಧರ್ಮವನ್ನು ನಿರ್ಲಕ್ಷಿಸಿದ್ದಿರಿ ಎ೦ಬುದು ಕ೦ಡು ಬರುತ್ತದೆ . ಇನ್ನು ಮು೦ದೆ ಇ೦ತಹಾ ಯಾವುದೇ ಬರಹಗಳನ್ನು ಬೇರೆಡೆಯಿ೦ದ ತೆಗೆದುಕೊ೦ಡಲ್ಲಿ, ದಯವಿಟ್ಟು ಅನುಮತಿಯೊ೦ದಿಗೆ ಅಥವಾ ಕನಿಷ್ಠ ಯಾರ ಕ್ರಪೆಯೆ೦ಬ ವಿಷಯದೊ೦ದಿಗೆ ಪ್ರಕಟಿಸುವಿರಾಗಿ ಭಾವಿಸುತ್ತೇನೆ.

ನಿಮ್ಮ ಉತ್ತರದ ನಿರಿಕ್ಷೆಯಲ್ಲಿರುತ್ತೇನೆ.

Wednesday

ಮಾಧ್ಯಮ ಬದಲಾವಣೆ ಪರ್ವ ಕಾಲ. ರಂಗ ಮತ್ತು ರವಿ ಕಪ್ರದಿಂದ ಸುವರ್ಣಗೆ ಹೋದರು. ಚಾರ್ಮ್ ಕಳಕೊಂಡಿದ್ದ ಶಶಿಧರ ಭಟ್ಟರು ಹೊರಬಿದ್ದರು. ಕೆಲವೇ ತಿಂಗಳಲ್ಲಿ ಈ ಟೀವಿಯಾ ರಾಮೋಜಿ ರಾವ್ ಅವರ ಕೆಂಪು ಕಣ್ಣಿನ ಹುಡುಗ ಕೂಡ ಅಲ್ಲಿಂದ ಹೊರಬಂದರು.
ಸುವರ್ಣ ನ್ಯೂಸ್ ಬಕೆಟ್ ಕಥೆ ನಿಮಗೆ ಗೊತ್ಹಿದೆ. ರಂಗ ರವಿ ಕಥೆ ಗೊತ್ಹಿದೆ. ಆಮೇಲೆ ವಿ ಭಟ್ಟರು ವಿಕ ಬಿಟ್ಟರು. ಶಶಿಧರ ಭಟ್ಟರು ಸಮಯ ಸೇರಿದರು. ಸಮಯ ಸೇಲ್ ಆಗಿದ್ದು ಯಾವಾಗ ಅಲ್ಲಿಂದ ಹೊರಬೀಳುತ್ತಾರೆ ನೋಡಬೇಕು. ಪ್ರಜಾವಾಣಿಯಲ್ಲಿ ಅತೀ ಹೆಚ್ಚು ವರ್ಗಾವಣೆ ಅಗೀದೆ. ದಂಡಾವತಿ ಈಗ ಕಾರ್ಯಕಾರಿ ಸಂಪಾದಕ. ಗೇಮ್ expert ಗೋಪಾಲ ಆ ಸ್ಥಾನಕ್ಕೆ ಬಂದಿದ್ದಾರೆ. ದಿನೇಶ್ ಅಮೀನ್ ಮಟ್ಟು ತಮ್ಮ ಟೀಕಾ ಪ್ರಹಾರ ಮುಂದುವರಿಸಿದ್ದಾರೆ.
ಇಂಗ್ಲೀಷ್ ಗೆ ಬರೋಣ ಬಲರಾಮ್, ಕಾಮತ್, ರವಿ ಜೋಷಿ ಹೊಸ ಕಡೆಗೆ ಹೋದರು. ಮುಖ್ಯಮಂತ್ರಿಯ ಆಪ್ತ ವಲಯದ ಶಿವಮೊಗ್ಗದ ಅರುಣ್ ಪ್ರಶಸ್ತಿ ಮಾತ್ರ ಅಲ್ಲದೆ ಎಕ್ಷ ಪ್ರೆಸ್ ಸಂಪಾದಕ ಕೂಡ ಆಗಿ ಡಬ್ಬಲ್ ಲಾಟರಿ ಹೊಡೆದರು. ಅಲ್ಲಿರುವ ಪ್ರತಿಭಾವಂತ ಹುಡುಗ ರಾಜಶೇಖರನಿಗೆ ಯಾಕೋ ಕಿರಿ ಕಿರಿ.
ಮುಂದಿನ ದಿನಗಳಲ್ಲಿ ಸುವರ್ಣ ನ್ಯೂಸ್ ಹೊಸ ಮುಖ ಬರಲಿದ್ದಾರೆ.ಬಲರಾಮ್ ಹೊಸ ಟೀಂ ಕಟ್ಟಲಿದ್ದಾರೆ. ಸಮಯದಲ್ಲಿ ಕೂಡ ಎಡಪಂಥಿಯರು ಹೊರನಡೆದು ಬಳಪಂಥಿಯರಿಗೆ ಅವಕಾಶ ನೀಡಲಿದ್ದಾರೆ. ವಿಜಯ್ ಸಂಕೇಶ್ವರ್ ಅವರ ಹೊಸ ಪೇಪರ್ ಶೀಘ್ರ ಬರಲಿದೆ. ರಾಜ್ ಟೀವಿ ಬರಲಿದೆ. ಏನ್ ಡಿ ಟೀವಿ ಬರಲಿದೆ. ಉದಯಜಕ್ಕೆ ಹೊಸ ಆಡಳಿತ ಸಾರಥಿ ಬರಲಿದ್ದಾನೆ. ಈ ಟೀವಿ ನ್ಯೂಸ್ ಸೆಕ್ಷನ್ ಬಂದ್ ಆಗಲಿದೆ.ಅಥವಾ ಬೇರೆಯವರಿಗೆ ಕೊಡುವ ಅಂದರೆ outsource ಸಾಧ್ಯತೆ ಇದೆ. ಮಿಡ್ ಡೇ ರೀ ಲಾಂಚ್ ಆಗಲಿದೆ.
ಅನೇಕ ತಲೆಗಳು ಉರುಳಲಿವೆ ಅಥವಾ ಹಾoಡ್ಸ್ ಹೋಗಲಿವೆ. ಹಲವರು ವೃತ್ತಿ ಬಿಡಲಿದ್ದಾರೆ, ಬಿಡುತಿದ್ದಾರೆ. ಅಂತು ಇದು ಸಂಪಾದಕರಿಗೆ ಪತ್ರಕರ್ತರಿಗೆ ಒಳ್ಳೆ ಕಾಲ.

ಎಡಿಟ್ ಮಾಡಿ ಸಂಗ್ರಹ : ಬ್ಲಾಗ್ www.newmediablog.blo

ಪತ್ರಕರ್ತರ, ಫೋಟೊಗ್ರಾಫರ್ಗಳ ಕೃಷ್ಣ ಲೀಲೆ


ಮದುವೆ ಮನೆಗೆ ಹೋಗಿ ಚೆಂದದ ಹುಡುಗಿ ಫೋಟೊ ತೆಗೆಯುವುದು, ಕಚೇರಿಗೆ ಬಂದ ಯುವತಿಯನ್ನು ಲವ್ ಮಾಡುವುದು. ಮದುವೆಯಾಗು ಎಂದು ಗಂಟು ಬೀಳುವುದು. ಎಲ್ಲರ ಎದುರೇ ಮದುಮಗನನ್ನು ಬಿಟ್ಟು ಫೋಟೊ ಗ್ರಾಫರ್ನನ್ನು ವರಿಸುವುದು ಈ ರೀತಿಯ ಸನ್ಸೇಶನಲ್ ಸುದ್ದಿ ಆಗಾಗ ನಡೆಯುತ್ತಿದೆ. ಸದ್ಯಕ್ಕೆ ಬಂಟ್ವಾಳದ ಫೋಟೊ ಗ್ರಾಫರ್ ಹಳೆ ಪ್ರೇಮ್ ಕಹಾನಿ ಕೇಳಿ. ಆಮೇಲೆ ಫೋಟೊ ಪತ್ರಕರ್ತ ಸ್ಸಾರಿ.. ಮಂಗಳೂರಿನ ಜಾಹೀರಾತು ಪತ್ರಕರ್ತ, ಕೃಷ್ಣನಂತೆ ಪೋಸು ಕೊಡುವ ರಾಮನ ಹರಾಮಿ ಲವ್ ಸ್ಟೋರಿ, ಮೊನ್ನೆ ಮೊನ್ನೆ ಲವರ್ ಮದುವೆಗೆ ಹೋಗಿ ಗೂಸಾ ತಿಂದ ವಿಚಾರ ಇನ್ನೊಮ್ಮೆ ಹೇಳುತ್ತೇನೆ.
ಈಗ ಕೇಳಿ ಫೋಟೊ ಗ್ರಾಫರ್ ಕಹಾನಿ
ಮದುವೆ ಮನೆಯಲ್ಲಿ ಮದುಮಕ್ಕಳ ಫೋಟೊ ಬದಲು ಇನ್ನಾರದೋ ಚೆಂದ ಚೆಂದದ ಫೋಟೊ ತೆಗೆಯುವ ಫೋಟೋ ಗ್ರಾಫರ್ ರ್್ಗಳಿಗೆ ಇದು ಪಾಠ.
ಕುತೂಹಲ ತಡೆಯಲಾರದೆ ಮನೆಗೆ ಬಂದ ಆಲ್ಬಂ ನೋಡುತ್ತಿದ್ದ ಹದಿಹರೆಯದ ಹುಡುಗಿ ಮತ್ತಷ್ಟು ಕೆಂಪೇರುವಂತೆ ಮಾಡಿದ್ದು ಮದುವೆಮನೆಯಲ್ಲಿ ಅಲ್ಲಿಂದಿಲ್ಲಿಗೆ ತಿರುಗಾಡುತ್ತಿದ್ದ ಅವಳದ್ದೇ ಫೊಟೋ.
ಅರೇ.. ನನ್ನ ಫೋಟೋ ಹೀಗೂ ಚೆನ್ನಾಗಿ ಬರುವುದುಂಟೇ ಎಂದು ಹಿರಿಹಿರಿ ಹಿಗ್ಗಿದ ಹುಡುಗಿಯ ಮನ ಫೋಟೋ ತೆಗೆದ ಯುವಕನನ್ನು ನೆನಪಿಸಿಕೊಂಡಳು. ವ್ಹಾ..! ಅವನೂ ಮನ್ಮಥನಂತಿದ್ದಾನಲ್ಲ ಎಂದು ನಾಚಿ ನೀರಾದಳು. ಅವನು ಹ್ಯಾಗೆ ಸಿಗ್ತಾನೆ? ಎಂದು ಯೋಚಿಸುತ್ತಾ ಬುದ್ದಿ ಓಡಿಸಿದಾಕೆಗೆ ಸಿಕ್ಕಿದ್ದು ಆಲ್ಬಂನಲ್ಲಿ ಫೊಟೊಗ್ರಾಫರ್ ನಂಬ್ರ.
ಅಲ್ಲಿಂದ ಕಥೆ ಆರಂಭ
**************
ಇದು ಭಾರತ ದೇಶದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕೆಂಬ ಪ್ರದೇಶದಲ್ಲಿ ನಡೆದ ಲವ್ ಸ್ಟೋರಿ.
ಫೋಟೋಗ್ರಾಫರ್ ನ ಅಂದ ಚೆಂದಕ್ಕೆ ಮರುಳಾದ ಹುಡುಗಿ ಫೋನ್ ಮಾಡಿ ‘ಈ ವಾ ಪೊರ್ಲು ಯಾ..(ನೀನು ಚೆಂದಾನೋ)’ ಎಂದು ಹೇಳಿಯೇ ಬಿಟ್ಟಳು. ಇಂಥ ಹುಡುಗಿಯರನ್ನೆಸ್ಟು ಆತ ನೋಡಿದ್ದನೋ.. ಸಿಕ್ಕಿದ್ದು ಬಿಡುವುದು ಯಾಕೆ ಎಂದು ಅವನೂ ಚೆನ್ನಾಗಿ ನಾಟಕವಾಡಿದ. ಅವನಿಗಿದ್ದದ್ದು ಪ್ಯೂರ್ ಕಾಮ. ಅವಳಿಗಿದ್ದದ್ದು ಪ್ಯೊರ್ ಪ್ರೇಮ. ಹೀಗೆ ಪ್ರೇಮ, ಕಾಮದಾಟದಲ್ಲಿ ಕಾಮ ಗೆದ್ದಿತು. ಅವರಿಬ್ಬರು ಗುಡ್ಡೆ, ಪಾರ್ಕು, ಸಿನಿಮಾ, ಹೋಟೆಲ್ ಓಡಾಡಿ ಸುಸ್ತಾದರು. ಅವಳು ತನು, ಮನ ಅವನಿಗರ್ಪಿಸಿದಳು. ಅವನು ತನುವನ್ನು ಮಾತ್ರ ಕೊಟ್ಟ!
*********
ಹೀಗೆಲ್ಲಾ ನಡೆಯುತ್ತಿದ್ದರೂ ಹುಡುಗಿ ಅಪ್ಪ, ಅಮ್ಮಂದಿರಿಗೆ ವಿಶಯವೇ ಗೊತ್ತಿಲ್ಲ. ಹಾಗಾಗಿಯೇ ಹುಡುಗಿಯ ಅಣ್ಣನಿಗೆ ಮದುವೆ ನಿಘಂಟು ಮಾಡುವಾಗ ಹುಡುಗಿಗೂ ಒಳ್ಳೆ ಹುಡುಗನನ್ನು ನೋಡಿದರು. ಎಂಗೇಜ್ ಮೆಂಟ್ ಆಯಿತು. ಅಪ್ಪ, ಅಮ್ಮಂದಿರಿಗೆ ಹೇಳಲು ಹುಡುಗಿಗೂ ಧೈರ್ಯ ಬರಲಿಲ್ಲ. ಫೋಟೋಗ್ರಾಫರ್ ಸದ್ದೇ ಮಾಡಲಿಲ್ಲ.
**********
ಮದುವೆಯ ದಿನ ಬಂದೇ ಬಿಟ್ಟಿತು. ಬಿ.ಸಿ.ರೋಡಿನ ರಂಗೋಲಿ ಎಂಬ ಮಂಟಪದಲ್ಲಿ ಎರಡು ಮದುವೆ. ಫೋಟೋಕ್ಕೆ ಅದೇ ಹುಡುಗ. ಮೆಲ್ಲನೆ ಹುಡುಗಿಯ ಕಿವಿಯ ಬಳಿ ಬಂದು ಉಸುರಿದ. ‘ನೀನು ಅವನನ್ನೇ ಮದುವಯಾಗು. ನಾಳೆ ನಿನ್ನನ್ನು ಹಾರಿಸಿಕೊಂಡು ಹೋಗ್ತೇನೆ’
ಅವಾಕ್ಕಾದ ಹುಡುಗಿ ಒಂದು ಗಟ್ಟಿ ನಿರ್ಧಾರಕ್ಕೆ ಬಂದಳು.
*********
ಪುರೋಹಿತರ ಮಂತ್ರ, ಗಟ್ಟಿಮೇಳದ ಸದ್ದು ನಡೆಯುತ್ತಿತ್ತು. ವರ ಮಾಲೆ ಹಾಕಿಸಿಕೊಳ್ಳಲು ಸಿದ್ದನಾಗಿದ್ದ. ಆದರೆ ವಧು ಒಮ್ಮೆಗೇ ಫೋಟೋ ತೆಗೆಯುತ್ತಿದ್ದವನ ಬಳಿ ಧಾವಿಸಿ, ಅವನಿಗೇ ಮಾಲೆ ಹಾಕಲು ಹೆಜ್ಜೆ ಹಾಕಿದಳು. ಆಗ ಸಭಾಂಗಣವೆಲ್ಲ ಗಪ್ ಚಿಪ್!
********
ದಡಬಡನೆ ಫೋಟೋಗ್ರಾಫರ್ ಓಡಿದ. ಅವನನ್ನು ಹಿಡಿದು ಪೋಲೀಸ್ ಸ್ಟೇಶನ್ ಗೆ ಒಪ್ಪಿಸಲಾಯಿತು. ಮತ್ತೆ ಮಾತುಕತೆ ನಡೆಯಿತು. ಹುಡುಗಿ ನಾನು ಅವನನ್ನೇ ಲವ್ ಮಾಡಿದ್ದೇನೆ ಅಂದಳು. ಹುಡುಗ ಇಲ್ಲ, ಇಲ್ಲ ಎಂದ..
******
ಕೊನೆಗೂ ಹುಡುಗಿಯ ಹಟ ಗೆದ್ದಿತು. ಈಗವರು ಸತಿ, ಪತಿ.
ಅದಕ್ಕಾಗಿಯೇ ಏನೋ ದ.ಕ.ಫೋಟೋಗ್ರಾಫರ್ ಗಳ ಮೊಬೈಲ್ ಗಳಲ್ಲಿ ಸಂದೇಶ ಹರಿದಾಡುತ್ತಿದೆ.
“ಮದುವ ಸಮಾರಂಭಗಳಿಗೆ ಫೊಟೊ ತೆಗೆಯಲು ಹೋಗುವಾಗ ಮಾಲೆ ಹಾಕುವ ಸಮಯ ಫೋಟೋಗ್ರಾಫರ್ ಕ್ಯಾಮ್ರಾ ಜೂಮ್ ಇಟ್ಟು, ೧೮ ಮೀಟರ್ ದೂರ ನಿಲ್ಲಿ!”

ಯಾರು ಅನಾಥ ಕು. ನಾಥ ! ಫಿಟ್ಟಿಂಗ್ ಮಾಸ್ತರ್ ರೀ ಪಿಟ್

ಯಾರು ಅನಾಥ ಕು. ನಾಥ !
ವಿ ಕೆ ಯಲ್ಲಿ ಇಂದು ಮಂಗಳೂರಿನ ಮುಖ ಪುಟದಲ್ಲಿ ಪ್ರಕಟವಾದ ಸಾಯಿ ಆಪ್ತ ಅನಾಥ ಸುದ್ದಿ ಹೊಸದಿಗಂತ, ಕೆ ಪಿ , ಉದಯವಾಣಿಯಲ್ಲಿ ಒಂದು ದಿನ ಮುಂಚಿತವಾಗಿ ಫ್ರಂಟ್ ಪೇಜ್ ಸುದ್ದಿ. ವಿ ಕೆ ಯಲ್ಲಿ ಮಿಸ್ಸಿಂಗ್ ! ಮರುದಿನ ಕುದ್ದು ಕುಮಾರ ಉಳಿದ ಪೇಪರ್ ಓದಿ ಅದನ್ನು ಕದ್ದು ವರದಿ ರೆಡಿ ಮಾಡಿದ್ದ. ಪಾಪ ಸತ್ಯಜಿತ್ ಯಾರಿಗೂ ಸಿಕ್ಕಿಲ್ಲ. ಆದರೆ ಮಂಗಲೋರಿನ ಅವರ ಅಪ್ಪಬಳಿ ಮಾತನಾಡಿ ಅವರು ಹೇಳಿದ್ದನ್ನೇ ಮಗ (ಸತ್ಯ) ಹೇಳಿದ ಎಂದು ಇವ ಸುಳ್ಳೇ ಬರೆದ. ಇದು ಓದುಗರಿಗೆ ಮತ್ತು ಸಂಪಾದಕರಿಗೆ ಮಾಡಿದ ಅನ್ಯಾಯ.
ಕಳೆದ ೧೫ ದಿನಗಳಿಂದ ಲವಲವಿಕೆ ಪೇಜ್ ಪೇಜ್ ಗಳೇ ೪ ದಿನಗಳಿಗೆ ಒಮ್ಮೆ ಮತ್ತೆ ಪ್ರಕಟ ಆಗುತ್ತಿವೆ. (ಕಳೆದ ಶುಕ್ರವಾರದ ಪುಟ ಶನಿವಾರ ಪೂರ್ತಿ ಪುಟ , ಮತ್ತು ಮೊನ್ನೆ ಮಂಗಳ ವಾರದ ಪುಟ ಬುಧವಾರ ಏಪ್ರಿಲ್ ೨೨ ರ ಪೇಜ್ ಲವಲವಿಕೆ ೭ , ೨೭ರ ಸಿನಿ ಲವಲವಿಕೆ ಪೇಜ್ ೩ ! ರೀ ಪೀಟ್ ). ಯಾರದೋ ಫೋಟೋ ಯಾರಿಗೋ ತಗುಲಿಸಿ ಸುದ್ದಿ ಪ್ರಕಟಿಸುತ್ತಿದ್ದಾರೆ. ( ಇ ಬಗ್ಗೆ ಇನ್ನೊಮ್ಮೆ ದಾಖಲೆ ಸಹಿತ ರಿಪೀಟ್ ಪುಟಗಳನ್ನೂ ನೀಡುತ್ತೇನೆ. ಜೆ. ರಾಮ ಪ್ರಸಂಗ ಮತ್ತೆ ಮರುಕಲಿಸುವ್ ಸಾಧ್ಯತೆ ಇದೆ. ಒಳ್ಳೆ ಪತ್ರಿಕೆ ಎಂಬ ವಿ ಕೆ ಇಮೇಜ್ ಕು.ನಾಥ ಹೋಗುವ ಮುಂಚೆ ಹಾಳೂ ಮಾಡುವ ಪ್ರಯತ್ನದಲ್ಲಿ ಇದ್ದಾನೆ. ಉದಯವಾಣಿ ಒಂದು ದಿನ ಮುಂಚಿತವಾಗಿ ಪ್ರಕಟವಾದ ಸುದ್ದಿ (ಮನೋಹರ ಪ್ರಸಾದ್ ) ಮತ್ತು ಒಂದು ದಿನ ಬಳಿಕ ಅನಾಥ ಸುದ್ದಿ ತುಲನೆ ಮಡಿ. ಇನ್ನು ಇ ಬಾರಿ ಸಂಪಾದಕರಿಗೆ ಬ್ಲಾಗ್ ತೋರಿಸುವ ದುಸ್ಸಾಹಸ ಮಾಡುವ ಸಾಧ್ಯತೆ ಇಲ್ಲ. ಕಳ್ಳ ಸಿಕ್ಕಿ ಬೀಳುತ್ಥನಲ್ಲ ಹ ಹ ..
ನಾವಡ ಬರುತ್ತಾನೆ ಅಂದಾಗ ನಡುಗಿದ ನಾಥ ಮತ್ತು ಮತ್ತು ಎಡವಟ್ಟು ಮಾಡಿಕೊಳ್ಳುತ್ತಲೇ ಇದ್ದಾನೆ.. ನೋಡೋಣ ಇನ್ನೂ ಏನು ತಪ್ಪು ಮಾಡ್ತಾನೆ ಅಂತ. ಆದ್ರೆ ಪೆಟ್ಟು ಅಭಿಮಾನದ ಪತ್ರಿಕೆ ವಿ ಕೆ ಗೆ ಎನ್ನುವುದೇ ಬೇಸರ.

Tuesday

ಕು ನಾಥ ಸಾಧನೆ... !ಸಂಪಾದನೆ

ಕುಮಾರನಾಥ ಸಾದನೆ ಸೊನ್ನೆ ಎಂದು ಬರೆದ ನಮ್ಮ ಮೇಲೆ ಬ್ಲಾಗ್ ಓದುಗ ವಿನೋದ್ ಸಿಟ್ಟಾಗಿ ಕಾಮೆಂಟ್ ಕಳಿಸಿದ್ದಾರೆ ಅದನ್ನು ಯಥಾವತ್ ಪ್ರಕಟಿಸುತ್ತಿದ್ದೇವೆ

ವಿಕ ಮಂಗಳೂರು ಬ್ಯೂರೋಚೀಪ್. ಸಾಧನೆ ಸೊನ್ನೆ...
who said ? ask the bar attender and cashier ! and who else response team leaders..
Ask Bank Mangers..ಸಾಧನೆ
ಸೊನ್ನೆ too many zeros
banker can count it
wow..wow...

April 12, 2011 8:01 AM

Monday

ನೇ ..ಸಾರ ನೋಡು..ನೇಸರ ನೋಡು...

ತ್ರಿಕಾ ಕಛೇರಿಗಳಲ್ಲಿ ಓತ್ಲಾ ಹೊಡೆದುಕೊಂಡು ಇರುವವರಿದ್ದಾರೆ. ಅದನ್ನು ಸ್ವಯಂ ಘೋಷಿಸಿಕೊಂಡವರು ಕಡಿಮೆ. ಇಲ್ಲೊಬ್ಬರು ಆ ಕೆಲಸವನ್ನು ಮಾಡಿದ್ದಾರೆ. ಒಬ್ಬರು ಕೆಪಿ ಬಿಟ್ಟು ವಿಜಯ ನೆಕ್ಸ್ಟ್ ಸೇರಿಕೊಂಡವರು. ಇನ್ನೊಬ್ಬರು ಕನ್ನಡಪ್ರಭದಲ್ಲಿ ಮೈಸೂರಿನಲ್ಲಿ ಇರುವವರು. ಇಬ್ಬರ ನಡುವೆ ಶಿವ!

ನೇಸರ ಕಾಡನಕುಪ್ಪೆ ಮತ್ತು ವಿಜಯ ನೆಕ್ಸ್ಟ್ ನಲ್ಲಿರುವ ಚೇತನ ತೀರ್ಥಹಳ್ಳಿ ಅವರ ನಡುವಿನ ಚಾಟ್ ಸಂಭಾಷಣೆಯನ್ನು ವಿಜಯ ನೆಕ್ಸ್ಟ್ ನಲ್ಲಿರುವ ನನ್ನ ವಿದ್ಯಾರ್ಥಿನಿ ಕಳುಹಿಸಿದ್ದಾರೆ. ಟೈಮ್ಸ್ ನಲ್ಲಿ ಇಂತಹ ಚಾಟ್ ಗಳೆಲ್ಲ ರೆಕಾರ್ಡ್ ಆಗುತ್ತಂತೆ. ಅದನ್ನೇ ಆಕೆ ಕಳುಹಿಸಿದ್ದಾಳೆ. ನಿಮ್ಮ ಅವಗಾಹನೆಗಾಗಿ ಇಲ್ಲಿ ಕೊಡಲಾಗಿದೆ.

ಕೆಲವರು ಊರಿಗೆಲ್ಲ ಉಪದೇಶ ಮಾಡುತ್ತಾರೆ. ತಾವು ಮಾತ್ರ ಕಚೇರಿಯಲ್ಲಿ ಕುಳಿತು ಇಂತಹ ಚಿಲ್ಲರೆ ಬುದ್ದಿ ತೋರಿಸುತ್ತಾರೆ. ಪ್ರೆಸ್ ಮೀಟ್ ಗಳಲ್ಲಿ ರಾಜಕಾರಣಿಗಳನ್ನು ಗೊಳುಹೊಯ್ದುಕೊಳ್ಳುವ, ಬರಹಗಳ ಮೂಲಕ ನೀತಿಪಾಠ ಹೇಳುವ, ಸಮಾಜ ಸುಧಾರಕರ ರೂಪ ಧರಿಸುವ ಪತ್ರಕರ್ತರ ಒಳಮನಸ್ಸು ಹೇಗಿರುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.
ಫಾರ್ ಮೋರ್ ಡಿಟೇಲ್ಸ್ ವಿಸಿಟ್
http://mediamana.blogspot.com/

Thursday

ಆನಂದ ಕರ್ನಾಟಕಕ್ಕೆ ಎ ನಾರಾಯಣ ಸಂಪಾದಕ

Kumarnath new associate editor of Ananda karnataka news paper by Vijya Sankeshwar. He wil be posted in Hubli.
A.Narayana will be the Editor.

ಹೆಚ್ಚಿನ ಮಾಹಿತಿಗೆ... ನಿರೀಕ್ಷಿಸಿ...


http://chillymedia.blogspot.com/

Tuesday

ನಾವಡ ಮಂಗಳೂರಿಗೆ, ಕುಮಾರ ....?

ಓದುಗರೊಬ್ಬರು ಕಾಮೆಂಟಿಸಿದ್ದರು. ಆಗ ಗೊತ್ತಾಯ್ತು ಕುಮಾರನಾಥ್ ಎಂಬೊಬ್ಬ ವ್ಯಕ್ತಿ ಪತ್ರಿಕೊದ್ಯಮದಲ್ಲಿದ್ದಾನೆ, ಬ್ಯೂರೋಚೀಪ್ ಆಗಿದ್ದಾನೆ ಎಂದು. ವಿಕ ಮೈಸೂರು ಬ್ಯೂರೋ ಮುಖ್ಯಸ್ಥರಾಗಿರುವ ಅರವಿಂದ ನಾವಡ ಅವರನ್ನು ಮಂಗಳೂರಿಗೆ ವರ್ಗಾಯಿಸಲಾಗಿದೆಯಂತೆ. ಅವರು ಮಕ್ಕಳ ಕಾರಣಕ್ಕೆ ಮಂಗಳೂರಿಗೆ ವರ್ಗಾವಣೆ ಬೇಕು ಎಂದು ಬಹು ಸಮಯದಿಂದ ಬೇಡಿಕೆ ಇಟ್ಟಿದ್ದರಂತೆ. ವಿ.ಭಟ್ಟರು ಕುಮಾರನಾಥನ ಮೇಲೆ ಅದೇನು ಪ್ರೀತಿ ಇಟ್ಟಿದ್ದರೋ, ಅವನನ್ನು ವರ್ಗಾಯಿಸಲಿಲ್ಲ. ನಾವಡರ ಆಸೆ ತೀರಲಿಲ್ಲ. ಹೊಸ ಸಂಪಾದಕರು ಬಂದ ಮೇಲೆ ನಾವಡರನ್ನು ಮಂಗಳೂರಿಗೆ ವರ್ಗಾಯಿಸಿದ್ದಾರೆ. ವಿಚಿತ್ರವೆಂದರೆ ಕುಮಾರನಾಥನನ್ನು ವರ್ಗಾಯಿಸಲಾಗಿಲ್ಲ.
ಕೃಪೆ: ಮೀಡಿಯಾ ಮನ
ಹೆಚ್ಚಿನ ವಿವರಗಳಿಗ
ಮೀಡಿಯಾಮನಬ್ಲಾಗ್ ಸ್ಪಾಟ್ ಡಾಟ್ ಕಾಮ್ ಸಂಪರ್ಕಿಸಿರಿ
http://www.mediamana.blogspot.com/

Sunday

ಸಂಕೇಶ್ವರ ವಿಜಯವಾಣಿಗೆ ವಿಕ ಚೀಪ್ ಬ್ಯೂರೊಗಳ ಕ್ಯೂ


ಯುಗಾದಿ ಬ್ರೇಕಿಂಗ್ ನ್ಯೂಸ್
ಮಾನ್ಯ ವಿಜಯ ಸಂಕೇಶ್ವರ ಅವರು ಮುಂದಿನ ಆ.17ಕ್ಕೆ ಹೊಸ ಪತ್ರಿಕೆ ವಿಜಯವಾಣಿ ಹೊರತರಲಿದ್ದಾರೆ. (ವಿ ಕ ಕೂಡಾ ಇದೇ ದಿನಕ್ಕೆ ಹೊರತಂದಿದ್ದರು)" ಹತ್ತೂ ಆವೃತ್ತಿಗಳಲ್ಲಿ ಪತ್ರಿಕೆ ಹೊರ ತರುವ ಬಗ್ಗೆ ಪ್ಲಾನ್ ಸಿದ್ಧವಾಗಿದೆ. ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಪ್ರಿಂಟಿಂಗ್ ಮಿಷನ್ ಜೋಡಿಸಲಾಗುತ್ತಿದೆ. ರಾಜ್ಯದಲ್ಲಿರುವ ವಿಕ ಶೇ.೯೦ ಏಜೆಂಟರುಗಳ ಸಂಕೇಶ್ವರನ ವಿ ಆರ್ ಎಲ್ ಬಸ್ ಏಜೆಂಟ್ ಗಳೇ ಆಗಿದ್ದಾರೆ. ಹೀಗಾಗಿ ಮೊದಲ ಹೊಡೆತ ವಿಕಕ್ಕೆ. ಸಂಕೇಶ್ವರನ ಪತ್ರಿಕೆಗೆ ಸೇರಲು ಹಲವು ಆಸ್ಥಾನಿಕ ಸಂಪಾದಕರು ತುದಿಗಾಲಲ್ಲಿ ನಿಂತಿದ್ದಾರೆ. ಕ.ಪ್ರ. ಬಿಟ್ಟು ವಿ ಭಟ್ಟರು ಬರಲು ಒಪ್ಪದ ಕಾರಣ ಹೊಸ ಸಂಪಾದಕರ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.
ಬಾಲ್ಡಿ ಅನಾಥನಿಗೆ ಹೊಸ ಆಶ್ರಯ
ದಾವಣಗೆರೆ, ಹಾಸನ, ಮಂಗಳೂರು, ಹುಬ್ಬಳ್ಳಿಯ ಚೀಪ್ ಬ್ಯೂರೊಗಳು ಈಗಾಗಲೇ ಹೊರಡಲು ನಿರ್ಧರಿಸಲಾಗಿದೆ. ಅರ್ಧಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಜತೆಯಲ್ಲಿ ಬರಲು ಕಂಬಾರ ನಾತ ಸಂಕೇಶ್ವರ ಬಳಿ ಹೇಳಿಕೊಂಡಿದ್ದಾರೆ. ಮಂಗಳೂರಿನ ಸ್ಥಾನಿಕ ಸಂಪಾದಕ ಹುದ್ದೆಗೆ ಅನೇಕ ಮಂದಿ ಕಣ್ಣಿಟ್ಟಿರುವುದರಿಂದ ಬೋಳು ತಲೆ ಬಾಲ್ಡಿಗೆ ಬಿಸಿಯಾಗಿ ತ್ತು. ಮಂಗಳೂರಿಗೆ ಸಂಕೇಶ್ವರ ಬಂದಾಗ ತಾನು ತಮ್ಮ ಪತ್ರಿಕೆಗೆ ಸೇರುತ್ತೇನೆ, ಸಹಾಯಕ ಸಂಪಾದಕ ಪೋಸ್ಟ್ ನೀಡಬೇಕು ಎಂದುಕೈ ಕಾಲು ಹಿಡಿದ್ದ.
ಅತ್ತ ವಿ ಭಟ್ಟರು ವಿಕ ದ ಪ್ರತಿಭಾನ್ವಿತರನ್ನು ಸೆಳೆದುಕೊಳ್ಳುತ್ತಿದ್ದಾರೆ. ವಿಕ ಆರಂಭದಿಂದಲೇ ರೆಸಿಡೆಂಟ್ (ಮನೆಯಲ್ಲಿ) ಸಂಪಾದಕರಾಗಿ ತಳ ಊರಿದ ಸೋಮಾರಿ ಚೀಪ್ ಬ್ಯೂರೊಗಳ ಕುತಂತ್ರದಿಂದ ನಿಷ್ಠೂರವಾದಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಇಲ್ಲ ಟ್ರಾನ್ಸ್ ಫರ್ ಆಗುತ್ತಿದ್ದಾರೆ. ಒಟ್ಟಾರೆ ಕೊನೆಗೆಉಳಿಯುವುದು ಕೆಲಸಕ್ಕೆ ಬಾರದ, ಹೊಸ ಚಿಂತನೆ ಇಲ್ಲದ, ಕೇವಲ ಬಕಿಟ್ ಹೊಂದಿರುವ ಬಾಲ್ಡಿಗಳು, ಕೆಲವೇ ಮಂದಿ ಮುದಿಯರು, ಸೋಮಾರಿಗಳು, ಮುಗ್ಧರು ಮಾತ್ರ.

ಭವಿಷ್ಯದ ಬೊಗಳೇ ದಾಸರು

ಇನ್ನು ನಮ್ಮ ಪ್ರಳಯಾಂತಕ ನರೇಂದ್ರ ಸ್ವಾಮಿಯ ವಿಷಯಕ್ಕೆ ಬರೋಣ. ಈತ ಮಾತು-ಕಥೆ ಎಂಬ ಸಾರ್ವಜನಿಕ ಕಾರ್ಯಕ್ರಮಗಳನ್ನು ಆರಂಭಿಸಿದ್ದಾನೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದ ಪ್ರಸಾರ ನಿನ್ನೆ ಮತ್ತು ಮೊನ್ನೆ ಜೀ ಟಿವಿಯಲ್ಲಿ ಪ್ರಸಾರವಾಯಿತು. ಅಲ್ಲಿ ಆತನ ಪ್ರಕಾಂಡ ಪಾಂಡಿತ್ಯವನ್ನು ಕೇಳದವರೇ ದುರ್ಭಾಗ್ಯವಂತರು. ಕೆಲವು ಸ್ಯಾಂಪಲ್ ಇಲ್ಲಿವೆ ನೋಡಿ.

ನೋಡಿ, ನನ್ನ ವಿರುದ್ಧ ಪತ್ರಿಕೆಗಳಲ್ಲಿ, ಅಲ್ಲಿ-ಇಲ್ಲಿ ಏನೇನೋ ಬರೆದುಕೊಳ್ತಾ ಇದ್ದಾರೆ. ಬರಕೊಳ್ಳಲಿ ನಾನು ಕೇರ್ ಮಾಡಲ್ಲ. ನಾನು ಆತ್ಮವನ್ನು ನಂಬಿದ್ದೇನೆ. ಆತ್ಮವನ್ನು ಯಾರೂ ನೋಡಲಾಗದು, ಮುಟ್ಟಲಾಗದು, ನಾಶಗೊಳಿಸಲಾಗದು.
ನನ್ನ ಪ್ರಕಾರ ಆತ್ಮ ಎಂದರೆ ಎಷ್ಟೋ ದಿನ ಒಗೆಯದೆ ಕೊಳೆತು ನಾರುವ ಲಂಗೋಟಿ ಇದ್ದಂತೆ. ಈ ಲಂಗೋಟಿಯನ್ನು ಯಾರೂ ನೋಡಲಾಗದು, ಮುಟ್ಟಲಾಗದು, ನಾಶಪಡಿಸಲಾಗದು. ಉಡುಪಿಯಲ್ಲಿ ಒಂದು ಕಾರ್ಯಕ್ರಮದಲ್ಲೂ ಇದನ್ನೇ ಹೇಳಿದೆ. ಅಲ್ಲಿದ್ದ ಸ್ವಾಮೀಜಿ ನನ್ನ ಮಾತನ್ನು ಒಪ್ಪಿದರು, ಒಳ್ಳೆ ಹೋಲಿಕೆ ಕೊಟ್ಟಿದ್ದೀರಿ ಅಂದರು.

ಇದು ನರೇಂದ್ರ ಸ್ವಾಮಿಯ ವಾದಸರಣಿ. ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳು ನಮಗೆ ಗೊತ್ತು. ನರೇಂದ್ರ ಸ್ವಾಮಿಯದು ಲಂಗೋಟಾದ್ವೈತ ಸಿದ್ಧಾಂತ. ಅದನ್ನು ಪ್ರಸಾರ ಮಾಡುವ ಜೀ ವಾಹಿನಿಯೇ ಧನ್ಯ.

ಬೆಳಗಾವಿಯ ಒಬ್ಬಾಕೆ ಧೈರ್ಯ ತಂದುಕೊಂಡು ನರೇಂದ್ರ ಸ್ವಾಮಿಯನ್ನು ಕೇಳಿಯೇ ಬಿಟ್ಟಳು: ಎಲ್ಲ ಸರಿ ಗುರೂಜಿ, ನಿಮಗೆ ನಮ್ಮ ನೈಟಿ ಮೇಲೆ ಯಾಕೆ ಕಣ್ಣು?

ನರೇಂದ್ರ ಸ್ವಾಮಿ ಒಮ್ಮೆ ಮೋಹಕವಾಗಿ ನಕ್ಕು.. ದರಿದ್ರ ಕಣ್ರೀ, ಕೊಳೆ ತುಂಬಿಕೊಂಡಿರುತ್ತೆ ನೈಟಿ. ರಾತ್ರಿ ಗಂಡನ ಜೊತೆನೋ.... ಮಲಗಿ ಎದ್ದು ಬೆಳಿಗ್ಗೆ ಹಾಗೇ ಅಡುಗೆ ಮನೆಗೆ ಬರ‍್ತೀರಿ. ಅಲ್ಲಿರೋದು ಏನು? ಒಲೆ ಬೆಂಕಿ. ಬೆಂಕಿ ಅಂದ್ರೆ ಆದಿಶಕ್ತಿ. ಈಚೆಗಾಗಿರ‍್ತೀರಿ (ಮುಟ್ಟು), ಹಂಗೇ ಅಡುಗೆ ಮನೆಗೆ ಬರ‍್ತೀರಿ. ದರಿದ್ರ ಮೆಟ್ಟಿಕೊಳ್ಳದೇ ಇರುತ್ತಾ. ನೈಟಿ ಚೆನ್ನಾಗಿರಲ್ಲ ಅಂತೀನಪ್ಪ, ನಿಮ್ಮ ನೈಟಿ ಕಟ್ಕೊಂಡು ನನಗೇನಾಗಬೇಕು.. ಎಂದು ನುಡಿಯಿತು.

ನರೇಂದ್ರ ಸ್ವಾಮಿ ಬಿಟ್ವೀನ್ ದ ಲೈನ್ಸ್ ಏನನ್ನು ಹೇಳಿದ ಅನ್ನೋದು ಎಲ್ಲ ಹೆಣ್ಣುಮಕ್ಕಳಿಗೂ ಚೆನ್ನಾಗಿಯೇ ಅರ್ಥವಾಗಿರಬೇಕು. ಆದರೂ ಅವು ಪೆಚ್ಚು ಮುಖ ಮಾಡಿಕೊಂಡು ಕುಳಿತಿದ್ದವೇ ವಿನಃ ಪ್ರತಿಭಟಿಸಲಿಲ್ಲ.

ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಕರೆಂಟೇ ಇರಲ್ಲ, ಬರ‍್ಕೊಂಡು ಬಿಡಿ. ಆಮೇಲೆ ಏನ್ ಮಾಡ್ತೀರಾ? ನಿಮ್ಮ ಲೈಟು, ಫ್ರಿಡ್ಜು, ಮಿಕ್ಸಿ ಯಾವುದೂ ವರ್ಕ್ ಆಗಲ್ಲ. ಎಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ತೀರಾ?...

ಹೀಗೆ ಹೇಳುತ್ತಲೇ ಹೋಯಿತು ನರೇಂದ್ರ ಸ್ವಾಮಿ. ಅದು ಹಾಗೆ ವಟಗುಟ್ಟುತ್ತಲೇ ಇರಲಿ. ಈತನೂ ಸೇರಿದಂತೆ ಎಲ್ಲ ಚಾನಲ್‌ಗಳ ಭಂಡ, ಮೂಢ ಜ್ಯೋತಿಷಿಗಳ ವಿರುದ್ಧ ಒಂದು ಸಣ್ಣ ಆಂದೋಲನ ಹುಟ್ಟಿಕೊಂಡಿದೆ. ಈ ಕೋಡಂಗಿ ಜ್ಯೋತಿಷಿಗಳ ಉಪಟಳ ನಿಯಂತ್ರಿಸುವುದು ಹೇಗೆ? ಎಂಬ ಪೋಸ್ಟ್‌ಗೆ ೪೭ ಮಂದಿ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಮಂದಿ ಇ-ಮೇಲ್ ಮೂಲಕ ಸಲಹೆಗಳನ್ನು ನೀಡಿದ್ದಾರೆ. ಏನು ಮಾಡಬಹುದು ಎಂಬ ಕುರಿತು ಸಾಕಷ್ಟು ವಿಸ್ತ್ರತವಾಗಿ ಚರ್ಚೆ ಆಗಿದೆ. ಈ ಚರ್ಚೆ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ.

ನಾಳೆಯ ಹೊತ್ತಿಗೆ ಈ ಜ್ಯೋತಿಷಿಗಳ ವಿರುದ್ಧದದ ನಮ್ಮ ಪ್ರಜಾಸತ್ತಾತ್ಮಕ ಹೋರಾಟದ ವಿವಿಧ ಸಾಧ್ಯತೆಗಳನ್ನು ಪಟ್ಟಿ ಮಾಡಿ, ಆ ಪ್ರಕಾರವಾಗಿ ಮುಂದುವರೆಯೋಣ.

ಒಂದು ಹಳೆಯ ಜೋಕ್ ಕೇಳಿಸಿಕೊಳ್ಳಿ: ಚಾನಲ್ ಒಂದರ ಜ್ಯೋತಿಷ್ಯ ಕಾರ್ಯಕ್ರಮಕ್ಕೆ ಯುವತಿಯೊಬ್ಬಳು ಕರೆ ಮಾಡುತ್ತಾಳೆ. ಆಕೆಯ ಪ್ರಶ್ನೆ ತನ್ನ ಅಣ್ಣನನ್ನು ಕುರಿತಾಗಿತ್ತು. ಅಣ್ಣ ತುಂಬಾ ಕುಡಿಯುತ್ತಿದ್ದಾನೆ, ಹೇಗೆ ಬಿಡಿಸುವುದು ಅನ್ನೋದು ಆಕೆಯ ಪ್ರಶ್ನೆ.

ನೋಡಮ್ಮಾ, ರಮ್ ಇದೆಯಲ್ಲಾ ಅದು ರಾಹು, ವಿಸ್ಕಿ ಇದೆಯಲ್ಲ ಅದು ಕೇತು. ಒಂದು ಬಾಟಲಿ ರಮ್, ಒಂದು ಬಾಟಲಿ ವಿಸ್ಕಿ ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಡು, ಅವನು ಕುಡಿಯುವುದನ್ನು ಬಿಟ್ಟುಬಿಡುತ್ತಾನೆ.

ಆಕೆ ಮತ್ತೆ ಪ್ರಶ್ನಿಸುತ್ತಾಳೆ. ಗುರೂಜಿ, ನೀರಲ್ಲಿ ಬಿಡಬೇಕಾ?

ಮತ್ತಿನ್ನೇನು ನೀರಿಗೆ ಬಿಡದೇ ನೀನೇ ಕುಡೀತೀಯಾ, ಕುಡಿ... ಗುರೂಜಿ ಸಿಡುಕುತ್ತಾರೆ.

ಆ ಗುರೂಜಿ ಯಾರು ಅಂತ ಹೇಳಬೇಕಾಗಿಲ್ಲ ಅಲ್ಲವೇ?
ಜಪಾನ್್ ಸುನಾಮಿ ದುರಂತದಲ್ಲಿ ಸಾವಿರಾರು ಮಂದಿ ಸತ್ತಾಗ ಪಾಪಿ ಹೇಳಿದ್ದು, " ಹಾವು ತಿನ್ನೋರು ಅದಕ್ಕೆ ಹೀಗಾಗಿದೆ' ! ಏನು ಹೇಳಬೇಕು ಬೊಗಳೆ ಭವಿಷ್ಯಗಾರನಬಗ್ಗೆ !
ಕೃಪೆ: ಸಂಪಾದಕೀಯ

ಪತ್ರಕರ್ತ ರ ಸಂಪುಟ- ಆಡಳಿತ ಮಂಡಳಿಗೆ ಸಂಕಟ

ಒಂದು ವೇಳೆ ಪತ್ರಕರ್ತರೆಲ್ಲ ಸೇರಿ ಒಂದು ಸರಕಾರ ರಚಿಸಿದರೆ ಯಾರ‍್ಯಾರಿಗೆ ಯಾವ ಯಾವ ಸಚಿವ ಸ್ಥಾನ ದೊರೆಯಬಹುದು? ತಮಾಷೆಯಾಗಿ ನಮ್ಮ ಅನಾಮಿಕ ಓದುಗರೊಬ್ಬರು ಒಂದು ಪಟ್ಟಿಯನ್ನು ಕಳುಹಿಸಿದ್ದಾರೆ. ಓದಿ, ಹೊಟ್ಟೆ ತುಂಬಾ ನಕ್ಕು ಬಿಡಿ.
ವಿಶ್ವೇಶ್ವರ ಭಟ್: ಮುಖ್ಯಮಂತ್ರಿ (ಮಾಹಿತಿ ತಂತ್ರಜ್ಞಾನ, ಶಿಕ್ಷಣ ವಿತ್ತ)
ರಂಗನಾಥ್ ಎಚ್.ಆರ್.: ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ
ಕುಮಾರನಾಥ (ಮಂಗಳೂರು ವಿಕ) :ಗೃಹ (ಮನೆಯಿಂದಲೇ ಕಾರ್ಯಾಚರಣೆ) ಇಲಾಖೆ ಸಹಾಯಕ ಸಚಿವ
ರವಿ ಬೆಳಗೆರೆ: ಸಹಾಯಕಶಿಕ್ಷಣ ಮತ್ತು ಅಪಹರಣ, ಗಣಿ ಮತ್ತು ಭೂವಿಜ್ಞಾನ
ದು.ಗು.ಲಕ್ಷ್ಮಣ್: ಮುಜರಾಯಿ
ಕೆ.ಎನ್.ಶಾಂತಕುಮಾರ್: ಕ್ರೀಡೆ
ಪದ್ಮರಾಜ ದಂಡಾವತಿ: ಲೋಕೋಪಯೋಗಿ
.ರಾಘವನ್: ಹಣಕಾಸು, ಕಂದಾಯ
ರಾಧಾಕೃಷ್ಣ ಬಡ್ತಿ: ನೀರಾವರಿ
ಲಕ್ಷ್ಮಣ ಕೊಡಸೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಜಿ.ಎನ್.ಮೋಹನ್: ಒಳಾಡಳಿತ, ಗುಪ್ತಚರ ಇಲಾಖೆ
ಅಶೋಕ್ ರಾಮ್: ಚರಂಡಿ ಮತ್ತು ಒಳಚರಂಡಿ ಮಂಡಳಿ
ಚಿದಂಬರ ಬೈಕಂಪಾಡಿ (ಮಂಗಳೂರು) : ಕೃಷಿ, ತೋಟಗಾರಿಕೆ
ಸಂಧ್ಯಾ ಪೈ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಿರಾಶ್ರಿತರ ಪುನರ್ವಸತಿ
ಗಿರೀಶ್ ರಾವ್ (ಜೋಗಿ): ಗ್ರಂಥಾಲಯ
ಕರಿಸ್ವಾಮಿ : () ಸಹಕಾರ
ಜಯಪ್ರಕಾಶ್ ನಾರಾಯಣ : ಸಹಾಯಕ ಗುಪ್ತ ಚರ ಇಲಾಖೆ
ಪಿ.ತ್ಯಾಗರಾಜ್: ಇಂಧನ
ಕನ್ನಡಪ್ರಭ ಡಾ ವೆಂಕಿ: ವೈದ್ಯಕೀಯ ಶಿಕ್ಷಣ
ಕರಾವಳಿ ಅಲೆ ಸೀತಾರಾಂ: ಕಾರಾಗೃಹ
ರವಿ ಹೆಗಡೆ: ವಿಜ್ಞಾನ ಮತ್ತು ತಂತ್ರಜ್ಞಾನ
ಇಂದ್ರಜಿತ್ ಲಂಕೇಶ್: ಯುವಜನ ಸೇವೆ
ತುಫೈಲ್ ಮೊಹಮ್ಮದ್: ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ
ಗಂಗಾಧರ ಮೊದಲಿಯಾರ್: ವಾರ್ತಾ ಮತ್ತು ಪ್ರಚಾರ
ಪ್ರತಾಪ್ ಸಿಂಹ: ಪಂಚ ವಾರ್ಷಿಕ ಯೋಜನೆ

ವಿನಾಯಕ ಭಟ್ ಮೂರೂರು, ಶಿವಪ್ರಸಾದ್ ಟಿ.ಆರ್.: ದೆಹಲಿ ವಿಶೇಷ ಪ್ರತಿನಿಧಿಗಳು
ಡಾ. ಆರ್.ಪೂರ್ಣಿಮ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಲಕ್ಷ್ಮಣ ಹೂಗಾರ್: ಸಮಾಜ ಕಲ್ಯಾಣ
ಶಿವಸುಬ್ರಹ್ಮಣ್ಯ: ಅರಣ್ಯ
ಲೋಕೇಶ್ ಕಾಯರ್ಗ : ಕಾರ್ಮಿಕ
ಅರವಿಂದ ನಾವಡ: ರೇಷ್ಮೆ
ದೀಪಕ್ ತಿಮ್ಮಯ ಮತ್ತು ರಾಧಿಕಾ ಭಾರದ್ವಾಜ್: ವಯಸ್ಕರ ಶಿಕ್ಷಣ
ತಿಮ್ಮಪ್ಪ ಭಟ್: ಸಣ್ಣ ಉಳಿತಾಯ್

ನಿಗಮ ಮಂಡಳಿಗೆ ಮೊದಲ ಪ್ರಾಶಸ್ತ್ಯ:
ಉಮಾಪತಿ ಮತ್ತು ದಿನೇಶ್ ಅಮೀನ್ ಮಟ್ಟು, ಕೆ.ವಿ.ಪ್ರಭಾಕರ್


ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಒದಗಿಸಲಾಗುವುದು.
ಕೃಪೆ:ಸಂಪಾದಕೀಯ ( ಸ್ವಲ್ಪ ಎಡಿಟ್ ಮಾಡಲಾಗಿದೆ)

Friday

ಚೇತನಾ ಬರೆದಾಗ

ಕನ್ನಡಪ್ರಭದಲ್ಲಿ ತಸ್ಲೀಮಾ ನಸ್ರೀನ್ ಅವರ ಅನುವಾದಿತ ಲೇಖನವೊಂದು ಪ್ರಕಟಗೊಂಡಿದ್ದು, ಆನಂತರ ರಾಜ್ಯದ ವಿವಿಧ ಭಾಗಗಳಲ್ಲಿ ಗಲಭೆ ನಡೆದಿದ್ದು, ಗಲಭೆಯಲ್ಲಿ ಇಬ್ಬರು ಬಲಿಯಾಗಿದ್ದು, ಮೂಲ ಲೇಖನವನ್ನು ತಿರುಚಲಾಗಿದೆ ಎಂದು ಸ್ವತಃ ತಸ್ಲೀಮಾ ನಸ್ರೀನ್ ಸ್ಪಷ್ಟನೆ ನೀಡಿದ್ದು ನಿಮಗೆ ನೆನಪಿರಬಹುದು. ಕನ್ನಡಪ್ರಭ ಸಾಪ್ತಾಹಿಕದಲ್ಲಿ ಸಿಂಧು ಎಂಬ ಹೆಸರಿನಲ್ಲಿ ಪ್ರಕಟಗೊಂಡ ಈ ಲೇಖನವನ್ನು ಬರೆದಿದ್ದು ಚೇತನಾ ತೀರ್ಥಹಳ್ಳಿಯವರು ಎಂಬ ವದಂತಿಯನ್ನು ಹಬ್ಬಿಸಲಾಗಿತ್ತು. ಇದರಿಂದಾಗಿ ಚೇತನಾ ಸಾಕಷ್ಟು ನೊಂದಿದ್ದರು. ಈಗ ಲೇಖನ ಬರೆದದ್ದು ಯಾರು ಎಂಬುದು ಬಹಿರಂಗವಾಗಿದೆ. ಆ ದಿನಗಳಲ್ಲಿ ತಾವು ಅನುಭವಿಸಿದ ನೋವನ್ನು ಚೇತನಾ ಇದೀಗ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ. ಅವರ ಅನುಮತಿ ಪಡೆದು ಈ ಬರಹವನ್ನು ಸಂಪಾದಕೀಯದಲ್ಲಿ ಪ್ರಕಟಿಸಬೇಕು ಎನ್ನುವಷ್ಟರಲ್ಲಿ ಅವರೇ ಈ ಲೇಖನವನ್ನು ಪ್ರಕಟಣೆಗಾಗಿ ಮೇಲ್ ಮಾಡಿದ್ದಾರೆ. ಚೇತನಾ ಅವರ ಈ ಲೇಖನ ಅವರ ವಿರುದ್ಧ ಪಿತೂರಿ ನಡೆಸಿದವರ ಕಣ್ತೆರೆಸಲಿ ಎಂಬುದು ನಮ್ಮ ಆಶಯ. ಚೇತನಾ ಅವರಿಗೆ ನಮ್ಮ ನೈತಿಕ ಬೆಂಬಲವಿರುತ್ತದೆ

ಕ.ಪ್ರ,. ತಸ್ಲಿಮಾ ವಿವಾದದ ಹಿಂದೆ ಜೇಪಿ: ಚೇತನ ತೀರ್ಥಳ್ಳಿ

ವರ್ಷದ ಹಿಂದಿನ ಮಾತು. ತಸ್ಲಿಮಾ ಮಾತುಗಳನ್ನ ಮಹಾಶಯರೊಬ್ಬರು ಹುಡುಗಿ ಹೆಸರಲ್ಲಿ ಅನುವಾದಿಸಿ ಕ.ಪ್ರ.ದಲ್ಲಿ ಪ್ರಕಟಿಸಿದ್ದರು. ಪರಿಣಾಮ- ಬೆಂಕಿ ಬಿದ್ದಿತ್ತು. ಎರಡು ಜೀವ ಹೋಗಿತ್ತು. ನಾನು ಆಗ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಕಪ್ಪು ಚುಕ್ಕೆ ಅದು. ಜೊತೆಗೆ ವೈಯಕ್ತಿಕ ನಷ್ಟವೂ. ನನ್ನ ಕೆಲವು ಗೆಳೆಯರು, ಮನಸು- ಹೃದಯಗಳೊಂದೂ ಇಲ್ಲದೆ ಬುದ್ಧಿಯಲ್ಲಷ್ಟೆ ಜೀವಿದುವವರು- ಇಂಥವರೆಲ್ಲ ಅದು ನಾನು ಎಂದು ತೀರ್ಮಾನಿಸಿಬಿಟ್ಟಿದ್ದರು. ಕೆಲವರ ಚುಚ್ಚು ಮಾತು, ಮೆಸೇಜುಗಳು, ಕಮೆಂಟುಗಳು ಮತ್ತಷ್ಟು ಜನರ ಹಾದಿ ತಪ್ಪಿಸಿ ನನ್ನೆದುರು ನಿಲ್ಲಿಸಿದ್ದವು. ಈ ಮಧ್ಯೆ ಒಂದೆರಡು ಬೆದರಿಕೆ ಕರೆಗಳೂ ಬಂದು, ನಾನು ಸಂಪಾದಕರ ಬಳಿ ಓಡಿ ರಕ್ಷಣೆ ಕೊಡಿಸುವಂತೆಯೂ ಕೇಳಬೇಕಾಗಿ ಬಂತು.
ಅದೆಲ್ಲ ಈಗ ನಡೆದ ಹಾಗಿದೆ. ಅಂದಿನ ಕ.ಪ್ರ.ಸಂಪಾದಕರು ಮಹಾವಲಸೆಯಿಂದ ಚೇತರಿಸಿಕೊಂಡು ಪತ್ರಿಕೆ ಕಟ್ಟುತ್ತಿದ್ದ ಅವಧಿಯದು. ಮ್ಯಾಗಜಿನ್‌ನ ಸಂಪೂರ್ಣ ಜವಾಬ್ದಾರಿ ಪುರವಣಿ ಸಂಪಾದಕರ ಮೇಲೆಯೆ ಇತ್ತು. ಅಂದಿನ ಸಂಪಾದಕರು ನಂಬಿ ಕೆಟ್ಟರು. ನಂಬಿದ್ದೇ ನನ್ನ ತಪ್ಪು, ಅದು ನನ್ನ ಬೇಜವಾಬ್ದಾರಿತನ ಅಂತ ಆಮೇಲೆ ಬಹಳ ಬಾರಿ ಬಹಳ ಕಡೆ ಅವಲತ್ತುಕೊಂಡಿದ್ದು ಕೇಳಿದ್ದೇನೆ. ಪುರವಣಿ ಸಂಪಾದಕರು ತಮ್ಮ ಗೆಳೆಯ ಕಳಿಸಿಕೊಟ್ಟ ಲೇಖನವನ್ನು ವಿವೇಚನೆ ಇಲ್ಲದೆ ಪ್ರಕಟಿಸಿಬಿಟ್ಟರು. ಆ ಗೆಳೆಯನಾದರೂ ಮತ್ತೊಂದು ಪತ್ರಿಕೆಯ ಕೆಲಸಗಾರನಾಗಿದ್ದ, ಜವಾಬ್ದಾರಿ ಹುದ್ದೆಯಲ್ಲಿದ್ದ, ಹೊರ ಜಗತ್ತಿಗೆ ಬುದ್ಧಿವಂತನಂತೆ ಪೋಸ್ ಕೊಡುವವನಾಗಿದ್ದ. ಆ ಅವಿವೇಕದ ಲೇಖನವನ್ನು ಒಂದು ಹುಡುಗಿಯ ಹೆಸರಲ್ಲಿ ಪ್ರಕಟಿಸಲಾಯ್ತು. ಕೆಲವರು ಅದು ಪುರವಣಿ ಸಂಪಾದಕರೇ ಎಂದೂ, ಕೆಲವರು ಅವರ ಗೆಳತಿ ಇರಬಹುದೆಂದೂ ಊಹಿಸಿಕೊಂಡರು. ಪುರುಸೊತ್ತಿನಲ್ಲಿದ್ದು, ನನ್ನ ಮೇಲೆ ಏನಾದರೊಂದು ಆಕ್ಷೇಪ ಇಟ್ಟುಕೊಂಡಿದ್ದ ಕೆಲವರ ಬಾಯಿಗೆ ನಾನು ಬಿದ್ದೆ. ಮತ್ತವೇ ಕೋಮುವಾದಿ, ಬಲಪಂಥೀಯ, ಕೇಸರಿ ಮದ್ಯದಂತಹ ಕಿತ್ತೋದ ಡೈಲಾಗುಗಳು, ಕುಹಕಗಳು.
ಚೇತನಾ ತೀರ್ಥಹಳ್ಳಿ
ಅಷ್ಟೆಲ್ಲ ಬೇಸರಪಟ್ಟುಕೊಳ್ಳುವ ಅಗತ್ಯವಿದ್ದಿಲ್ಲ, ಆದರೂ ನೋವಾಗಿಬಿಟ್ಟಿತು. ಆ ಒಂದು ತಿಂಗಳ ನನ್ನ ಒಳಗುದಿ ಹೇಳಿಕೊಳ್ಳಲು ಆಗದಂಥದ್ದು. ಪತ್ರಕರ್ತ ಮಿತ್ರರು ಕೆಲವರು ಈ ಗಾಸಿಪ್ ಅನ್ನು ಮತ್ತಷ್ಟು ವ್ಯಾಪಕಗೊಳಿಸುವಲ್ಲಿ ಸಕ್ರಿಯರಾಗಿದ್ದ ಬಹಳ ಬೇಸರ ಮಾಡಿತ್ತು. ಕೆಲವರಂತೂ ಕಾಲ್ ಮಾಡಿ ಆರೋಪವನ್ನು ನನ್ನ ಮೇಲೆ ಹೇರಿದರು. ಅಷ್ಟು ಶ್ರಮ ತೆಗೆದುಕೊಂಡರು.
ಈಗ, ಈಗ ಏನು? ಐದಾರು ತಿಂಗಳ ಹಿಂದಿನಿಂದಲೇ ಜೆಪಿ ಯ ಹೆಸರು ಬಹಿರಂಗಗೊಂಡು ಹರಿದಾಡುತ್ತಿದೆ. ಈಗಲಂತೂ ಅದು ಅಧಿಕೃತವಾಗಿ ಘೋಷಣೆಯಾಗಿದೆ. ಹೊರಗಿನವರ ಮಾತು ಬಿಡಿ, ಪತ್ರಿಕೋದ್ಯಮದ ಒಳಗಿನವರ ಬಗ್ಗೆ ರೇಜಿಗೆಯಾಗುತ್ತಿದೆ. ಅವತ್ತು ಕರೆ ಮಾಡಿ, mail ಮಾಡಿ ದೂಷಿಸುವ ಕಷ್ಟ ತೆಗೆದುಕೊಂಡ ಯಾರಿಗೂ ಇವತ್ತು sorry ಕೇಳಲು ನೆನಪಾಗುತ್ತಿಲ್ಲ. ಗಾಸಿಪ್ ಮಾಡುವವರ ಹಣೆಬರಹವೆ ಇಷ್ಟಲ್ಲ? ಟೊಳ್ಳು ಜನ. ಮರೆವು ಜಾಸ್ತಿ.
ಸಾಲದ್ದಕ್ಕೆ ಈಗ ಪ್ರಣತಿಯ ಭೂತ ಮೆಟ್ಟಿಕೊಂಡಿದೆ. ಅನವಶ್ಯಕವಾಗಿ ನಾನು ನಾನಲ್ಲ ಅನ್ನುವ ಸಮಜಾಯಿಷಿ ಕೊಟ್ಟುಕೊಳ್ಳಬೇಕಾಗಿದೆ. ಅದು ಕೂಡ ಸುಮ್ಮನೆ ಗಾಸಿಪ್ ಎಂದು ಗೊತ್ತಿದ್ದೇ ಸಾಂಕ್ರಾಮಿಕ ಹರಡುವಿಕೆಯ ವೈರಸ್ ಗಳಾಗುತ್ತಿದ್ದಾರೆ ಸಹಪತ್ರಕರ್ತರು. ಅದನ್ನು ಇಲ್ಲಿಗೇ ನಿಲ್ಲಿಸಿಬಿಟ್ಟರೆ ಒಳ್ಳೆಯದು. ಇಲ್ಲವಾದರೆ, ನನಗೆ ಕೆಟ್ಟದ್ದು.
ಇನ್ನೂ ಹೇಳಬೇಕನಿಸಿದ್ದು-ಬ್ಲಾಗ್ ಜಗತ್ತಿನ ತುಂಬ ಪತ್ರಿಕೋದ್ಯಮದ ವಾಚ್‌ಡಾಗ್‌ಗಳು ತುಂಬಿಕೊಳ್ಳುತ್ತಿದ್ದಾರೆ. ಕೆಲವರು ಹಿಂದೆಮುಂದೆ ನೋಡದೆ ಸ್ವಾರಸ್ಯಕರ ಗಾಸಿಪ್, ಅರೆಬರೆ ಮಾಹಿತಿ, ತಪ್ಪು ಅರ್ಥ ಕೊಡುವ ಸುದ್ದಿಗಳನ್ನೆಲ್ಲ ಪ್ರಕಟಿಸುತ್ತಿದ್ದಾರೆ. ಕೆಲವರು ಚೆನ್ನಾದ ವಿಶ್ಲೆಷಣೆ ನಡೆಸ್ತಿದ್ದರೂ ನಡುನಡುವೆ ಬಕೆಟ್ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. (ಬಕೆಟ್ ಈಗ ಸಖತ್ ಚಾಲ್ತಿಯಲ್ಲಿರುವ ಪದ. ಅದಕ್ಕೆ ಪರ್ಯಾಯ ಸಿಗ್ತಿಲ್ಲ). ಯಾರಿಗೂ ಇದರ ಪರಿಣಾಮದ ಅರಿವು ಇದ್ದ ಹಾಗಿಲ್ಲ. ಪತ್ರಿಕೆ, ವೆಬ್ ಗಳಲ್ಲಿ ಬರುತ್ತಿರುವ ಸುದ್ದಿಗಳಿಂದಾಗಿ ಜರ್ನಲಿಸಮ್ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳು ಇತ್ತ ತಲೆ ಹಾಕಲು ಹೆದರುವಂಥ ಮಾಹೋಲ್ ನಿರ್ಮಾಣವಾಗ್ತಿದೆ. ಇಷ್ಟು ದಿನ ಜನ ರಾಜಕಾರಣ ಅಂದರೆ ಮೂಗು ಮುರೀತಿದ್ದರು, ಇನ್ನು ಖಚಡಾ ಕೆಲಸಕ್ಕೆಲ್ಲ ಇದೇನು ಜರ್ನಲಿಸಮ್ಮಾ ಅಂತ ಕೇಳುವ ಕಾಲವೂ ಬರಬಹುದು. ಹಾಗಂತ ನಾವು ಬೇರೆ ಬೇರೆ ಪತ್ರಿಕೆಯಲ್ಲಿದ್ದೂ ಗೆಳೆತನ ಇಟ್ಟುಕೊಂಡಿರುವ ಹೆಣ್ಣುಮಕ್ಕಳು ಆನ್‌ಲೈನ್ ಚಾಟ್‌ನಲ್ಲಿ ಹತಾಶರಾಗ್ತಿದೇವೆ.
ಎಲ್ಲಿಂದ ಎಲ್ಲಿಗೆ ಏನು ಲಿಂಕೋ? ತಮ್ಮಂದಿರಲ್ಲಿ ಒಬ್ಬ, ನನ್ನ ಕ್ಲಾರಿಫಿಕೇಶನ್ ಗಳ ನಂತರವೂ ನನ್ನ ಬಗ್ಗೆ ಅನುಮಾನ ಇರಿಸಿಕೊಂಡಿದ್ದ. ಈಗ ತಾನೆ ಯಾವುದೋ ಬ್ಲಾಗ್ ನೋಡಿ ‘ಸಿಂಧು ನೀವಲ್ಲ ಅಂತ ಖಾತ್ರಿ ಆಯ್ತು’ ಅಂತ ಸರ್ಟಿಫಿಕೇಟ್ ಕೊಟ್ಟ. ಹಾಗಾದರೆ ನಂಬಿಕೆ, ಅಧಿಕೃತತೆಯ ಮಾನದಂಡ ಏನು? ವೈಯಕ್ತಿಕ ವಿಶ್ವಾಸಕ್ಕಿಂತ ಕಂಡು ಕೇಳಿಲ್ಲದ ಮುಖಗಳ ಮಾತೇ ಪ್ರಮಾಣವಾಗುತ್ತದಲ್ಲ, ಯಾಕೆ? ಅವತ್ತು ಗಾಸಿಪ್ ನಂಬಿ ನೋವು ಕೊಟ್ಟವರು ನಂಬಿದ್ದೂ ಇಂಥವೇ ಸಾಕ್ಷಿಗಳನ್ನು. ವ್ಯಕ್ತಿಯನ್ನು ಸ್ವಂತ ಅನ್ನಿಸಿಕೆ, ಅಳತೆಯಿಂದ ತೂಗಿ ನೋಡಲು ಸಾಧ್ಯವೇ ಇಲ್ಲವಾ? ಯಾರನ್ನ ಕೇಳುವುದು?
ಇಷ್ಟಕ್ಕೂ ಇಲ್ಲಿ ಆ ಹುಡುಗ, ಅಗ್ಗದ ಸಾಕ್ಷಿಗಳನ್ನು ನಂಬುವ ಮನಸ್ಥಿತಿಗಳ ಪ್ರತಿನಿಧಿ ಮಾತ್ರ...

ಕೃಪೆ: ಸಂಪಾದಕೀಯ ಬ್ಲಾಗ್ ಗೆ ಚೇತನಾ ತೀರ್ಥಳ್ಳಿ ಬರೆದ ಪತ್ರ

ಕ್ಯಾಫ್ಟನ್ ರಂಗನ ಮೇಜರ್ ದುರಂತ !

ಅಯ್ಯೋ ಯಾಕೆ ಹೀಗಾಯ್ತು? ರಂಗ ಬಿಡ್ತಾರೆ ಅನ್ನೋ ಸುದ್ದಿಯನ್ನು ಮಾಡಲು ಸ್ಫೋಟಿಸಿದ್ದೆ ಮೀಡಿಯಾಮನ. ಬಹುಷಃ ನೀವು ಬೇರಾವುದೋ ಕೆಲಸದಲ್ಲಿ ಬ್ಯುಸಿ ಆಗಿರಬೇಕು ಅನ್ಸುತ್ತೆ. ಅದ್ಕೆ ನನಗೆ ಸಿಕ್ಕ ಅಧಿಕೃತ ಮಾಹಿತಿಯನ್ನು ಪೋಸ್ಟ್ ಮಾಡುತ್ತಿದ್ದೇನೆ. ಸಾಧ್ಯವಾದರೆ ಬಳಸಿಕೊಳ್ಳಿ.

ಕ್ಯಾಪ್ಟನ್ ರಂಗನ ಕಪ್ತಾನಗಿರಿ ಮುಗಿದಿದೆ. ಅವರ ಸರ್ವಾಧಿಕಾರಿ ಧೋರಣೆಗೆ ಪೆಟ್ಟು ಬಿದ್ದಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ರಂಗ ಹಾಗೂ ಶಿವಸ್ವಾಮಿ ಎಂಬುವರನ್ನು ಕರೆದ ಮ್ಯಾನೇಜ್ಮೆಂಟ್ `ನಿಮ್ಮಿಂದ ಕಚೇರಿ ವಾತಾವರಣ ಹಾಳಾಗುತ್ತಿದೆ. ಇದೆಲ್ಲ ಸರಿಯಲ್ಲ' ಎಂದು ಎಚ್ಚರಿಸಿದೆ. ಅದರೂ ರಂಗ ತಮ್ಮ ಸರ್ವಾಧಿಕಾರಿ ಧೋರಣೆ ಬದಲಿಸಿಕೊಳ್ಳಲಾರದೆ ಎಲ್ಲರನ್ನೂ ಏಕವಚನದಲ್ಲಿ ಬಯ್ಯುತ್ತ, ಸಿಟ್ಟು ಮಾಡಿಕೊಳ್ಳುತ್ತ ನಂಗೆ ಇದೆಲ್ಲ ಬೇಡ ಎಂದು ಚೇಮ್ಬರಿನ ಬಾಗಿಲು ಹಾಕಿ ಮನೆ ದಾರಿ ಹಿಡಿಯುತ್ತಿದ್ದರು.

ಆದರೆ ಇಂದು ಮ್ಯಾನೇಜ್ಮೆಂಟ್ ನವರೇ ಹೋಗಿ, ನಿಮ್ಮ ಸಹವಾಸ ಸಾಕು ಎಂದರೂ `ಹೊಸ ಸಂಪಾದಕರು ಬರುವವರೆಗೆ ಇರುತ್ತೇನೆ' ಎನ್ನುತ್ತಿದ್ದಾರಂತೆ. ಇದೆಂಥ ವಿಪರ್ಯಾಸ! ಅಲ್ಲದೆ ರಂಗ ಅವರು ತಮ್ಮ ಸಹೋದ್ಯೋಗಿಗಳ ಬಳಿ `ನಂಗೆ ಆರೋಗ್ಯ ಚೆನ್ನಾಗಿಲ್ಲ. ಅದ್ಕೆ ನ್ಯೂಸ್, ಪ್ರೋಗ್ರಾಮ್ಸ್ ಮಾತ್ರ ನೋಡ್ಕೋತೀನಿ. ಆಡಳಿತ ನಿರ್ವಹಣೆ ನನ್ನಿಂದ ಸಧ್ಯ ಇಲ್ಲ ಅಂತ ಮ್ಯಾನೇಜ್ಮೆಂಟ್ ಗೆ ಹೇಳಿದೀನಿ. ನಾನೆಲ್ಲೂ ಹೋಗಲ್ಲ' ಅಂತ ಪುಂಗಿ ಊದುತ್ತಿದ್ದಾರಂತೆ.

ಇದನ್ನೆಲ್ಲಾ ಕೇಳಿಸಿಕೊಂಡ ಮ್ಯಾನೇಜ್ಮೆಂಟ್ `ಅವ್ರ ಆರೋಗ್ಯ ಸರಿ ಇಲ್ಲ ಅಂತಾನೆ ಅವ್ರಿಗೆ ರಾಜೀನಾಮೆ ಕೊಡಿ ಅಂದ್ವಿ. ಅವ್ರು ಒಪ್ಪಲಿಲ್ಲ. ಆದ್ದರಿಂದ ರಂಗ ಅವರನ್ನು ಹಲವು ಕೆಲಸಗಳಿಂದ ಮುಕ್ತಿಗೊಳಿಸಿದ್ದೇವೆ. ಅವರು ಇನ್ಮುಂದೆ ಕೇವಲ ಸಂಪಾದಕೀಯ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ. ಅವರು ಜುಗಲ್ಬಂದಿ ಹಾಗೂ ಪಬ್ಲಿಕ್ ವಾಯ್ಸ್ ಕಾರ್ಯಕ್ರಮ ಮಾತ್ರ ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಕರೆಸುವ ಜವಾಬ್ದಾರಿಯನ್ನು ನಾಲ್ಕೈದು ದಿನಗಳಲ್ಲಿ ರಚನೆಯಾಗಲಿರುವ ಕೋರ್ ಕಮಿಟಿ ಮಾಡಲಿದೆ. ಅಂದರೆ ಕ್ಯಾಪ್ಟನ್ ರಂಗ ಅವ್ರು ಕೇವಲ ಕಾರ್ಯಕ್ರಮ ನಿರೂಪಕರು ಮಾತ್ರ!' ಎಂದು ಮ್ಯಾನೇಜ್ಮೆಂಟ್ ಸ್ಪಷ್ಟವಾಗಿ ಹೇಳಿದೆ.

ಮುಂದಿನ ಬದಲಾವಣೆ ವರೆಗೆ ನಿರೂಪಕ ಹಮೀದ್ ಪಾಳ್ಯ ಸಂಪಾದಕೀಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಂಗ ಅವರು ಇತ್ತೀಚಿಗೆ ಹತಾಶೆಗೆ ಒಳಗಾಗಿದ್ದರಾ? ಅವರು ವರ್ತಿಸುತ್ತಿದ್ದ ರೀತಿ ನೋಡಿದರೆ ಹೌದು ಎನ್ನುತ್ತಾರೆ ಸುವರ್ಣ ನ್ಯೂಸ್ ನ ಹಲವರು. ಟಿವಿ ೯ ನಲ್ಲಿ ವಿಶೇಷ ವರದಿ ಬಂದರೂ ಅದು ನಮ್ಮಲ್ಲಿ ಯಾಕೆ ಬರಲಿಲ್ಲ ಎಂದು ದಬಾಯಿಸುತ್ತಿದ್ದರಂತೆ. ಅವರ ಅಧಿಕಾರಾವಧಿಯ ಆರಂಭದಿಂದ ಕೊನೆವರೆಗೂ ಅವರು ಟಿವಿ ೯ ಅನ್ನು ಯಶಸ್ವಿಯಾಗಿ ಅನುಕರಣೆ ಮಾಡಿದರು. ಎರಡು ವಾರದ ಹಿಂದೆ ಸುವರ್ಣ ನ್ಯೂಸ್ ಪಿಸಿಆರ್ (ಪ್ಯಾನೆಲ್ ಕಂಟ್ರೋಲ್ ರೂಂ) ನಲ್ಲಿದ್ದ ಇಬ್ಬರ ಮೇಲೆ ಹಲ್ಲೆಯನ್ನೂ ನಡೆಸಿದ್ದರಂತೆ ರಂಗ. ಇದನ್ನು ತಿಳಿದ ಮ್ಯಾನೇಜ್ಮೆಂಟ್ ಅವರಿಂದ ರಾಜೀನಾಮೆ ಪಡೆಯಲು ಮುಂದಾಯಿತು.

ಇದೇನೇ ಇರಲಿ. ರಂಗ ಮತ್ತು ರವಿ ಹೆಗ್ಡೆ ಕಳೆದ ಒಂದೂವರೆ ವರ್ಷದಲ್ಲಿ ಸುವರ್ಣ ನ್ಯೂಸ್ ನಲ್ಲಿ ಮಾಡಬಾರದ ಎಲ್ಲ ಅನಾಹುತಗಳನ್ನೂ ಮಾಡಿದ್ದಾರೆ. *(ಕಳೆದ ಒಂದೂವರೆ ತಿಂಗಳಿನಿಂದ ರವಿ ಹೆಗ್ಡೆ ಉದಯವಾಣಿ ಸಂಪಾದಕರು.) ಮುಖ್ಯವಾಗಿ ಹೇಳುವುದಾದರೆ, ವೇತನ ತಾರತಮ್ಯ. ರವಿ ಹೆಗ್ಡೆ ಎಲ್ಲ ಮಹಿಳಾ ಆಂಕರ್ ಗಳ ಸಂಬಳವನ್ನು ಹೆಚ್ಚಿಸಿದರು. ಆದರೆ ಇತರ ಮಹಿಳಾ ಸಿಬ್ಬಂದಿಗೆ metarnity ರಜೆಯ ಸಂಬಳ ಕೊಡುವುದಕ್ಕೂ ನಿರಾಕರಿಸಿದ ಉದಾಹರಣೆಗಳಿವೆ. ಯಾಕೆ ಈ ತಾರತಮ್ಯ?

ರಂಗ ಅವರಂತೂ ತಮ್ಮವರಿಗೆ ಅಂದರೆ ಲಾಬಿ ಮಾಡುವವರಿಗೆ, ಬಕೆಟ್ ಹಿಡಿಯುವವರಿಗೆ, ಭ್ರಷ್ಟಾಚಾರ ಮಾಡುವವರಿಗೆ ಮನಸೋ ಇಚ್ಛೆ ವೇತನ ಹೆಚ್ಚಿಸಿದರು. ಸಂಬಳ ಹೆಚ್ಚಿಸಿಕೊಳ್ಳಬೇಕು ಎನಿಸಿದವರೆಲ್ಲ ಅವರಿಗೆ ಕಚೇರಿ ಒಳಗಿನ, ಹೊರಗಿನ ಮಾಹಿತಿಗಳನ್ನು ನೀಡುತ್ತ, ತನಗೆ ಬೇರೆ ಚಾನಲ್ ನಿಂದ ಆಫರ್ ಇದೆ ಎಂದರೆ ಸಾಕು. ಇಲ್ಲ, ನೀನೆಲ್ಲೂ ಹೋಗಬೇಡ. ಸಂಬಳ ಜಾಸ್ತಿ ಮಾಡ್ತೀನಿ ಎಂದು ಅದೇ ತಿಂಗಳಲ್ಲೇ ಸ್ಯಾಲರಿ ಹೆಚ್ಚಿಸುತ್ತಿದ್ದರು.

ಕೆಲವರಿಗಂತೂ ಆರು ತಿಂಗಳಲ್ಲಿ ಮೂರು ಬಾರಿ ಸಂಬಳ ಹೆಚ್ಚಳವಾದ ಉದಾಹರಣೆಗಳೂ ಇವೆ. ಆರು ತಿಂಗಳ ಹಿಂದೆ 25 ಸಾವಿರ ರೂ. ಪಡೆಯುತ್ತಿದ್ದವರು ಈಗ 45 ಸಾವಿರ ರೂ. ಪಡೆಯುತ್ತಿದ್ದಾರೆ! ಆರಂಭದಿಂದಲೂ ಇಲ್ಲೇ ಇರುವ ಕೆಲವರ ಸಂಬಳ 12 ಸಾವಿರವೂ ದಾಟಿಲ್ಲ. ಕೆಲ ಕಾಪಿ ಎಡಿಟರ್, ರಿಪೋರ್ಟರ್ ಗಳು ಈಗಲೂ 6 ರಿಂದ 8 ಸಾವಿರ ಸಂಬಳ ಪಡೆಯುತ್ತಿದ್ದಾರೆ. ಅದೇ ಸುವರ್ಣ ನ್ಯೂಸ್ ಗೆ ಕನ್ನದಪ್ರಭದಿಂದ ವರ್ಷದ ಹಿಂದಷ್ಟೇ ಬಂದ ಕೆಲವರು 38000, 45000 ರೂ. ಸಂಬಳ ಪಡೆಯುತ್ತಿದ್ದಾರೆ. ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿರುವ ನಿಷ್ಠಾವಂತರಿಗೆ ಉಂಡೆ ನಾಮ ಹಾಕುವಲ್ಲಿ ರಂಗ ಯಶಸ್ವಿಯಾಗಿದ್ದಾರೆ.

ಇನ್ನೂ ಒಂದು ಸೋಜಿಗವಿದೆ- ಸುವರ್ಣ ನ್ಯೂಸ್ ಪತ್ರಿಕೆಗೆ ಅಂತಾ ಕನ್ನದಪ್ರಭದಿಂದ ಬಂದ 15 ಕ್ಕೂ ಹೆಚ್ಚು ಮಂದಿಗೆ 20000 , 40000 ಸಂಬಳ ನೀಡಲಾಗಿತ್ತು. ಕೆಲಸವೇ ಇಲ್ಲದೆ ಅವರೆಲ್ಲ ಓತ್ಲಾ ಹೊಡೆಯುತ್ತ ಸಂಬಳ ಎಣಿಸುತ್ತಿದ್ದರು. ಇದನ್ನೆಲ್ಲಾ ಮಾಡಿದ್ದು ರಂಗ ಮತ್ತು ರವಿ ಹೆಗ್ಡೆ. *(ಈಗ ಅದೇ ರವಿ ಹೆಗ್ಡೆ ಉದಯವಾಣಿಯಲ್ಲಿ ಸುವರ್ಣ ನ್ಯೂಸ್ ನಿಂದ ಬಂದವರಿಗೆ ಅಷ್ಟು ಸಂಬಳ ಕೊಡಿಸಲಾಗದೆ ಒದ್ದಾಡುತ್ತಿದ್ದಾರೆ ಎಂಬುದು ಬೇರೆ ಮಾತು.) ಕಾರ್ಯಕ್ಷಮತೆ ನೋಡಿ ಸಂಬಳ ಕೊಡಬೇಕೇ ಹೊರತು ಲಾಬಿ, ಬಕೆಟ್ ಹಿಡಿಯುವವರಿಗೆಲ್ಲ ಮನಬಂದಂತೆ ಸಂಬಳ ಕೊಟ್ಟರೆ ಹೇಗೆ? ಸುವರ್ಣ ನ್ಯೂಸ್ ನಲ್ಲಿ ರಂಗ ಮಾಡಿರುವ ಅನಾಹುತ ಸರಿಪಡಿಸಲು ವರ್ಷವೇ ಬೇಕಾದೀತು.
ಕೃಪೆ: ಮೀಡಿಯಾ ಮನ

ಮಾಡಿದಮೇಲೆ ಕಂಡೆ ಕಾಣುತ್ತೆ ಬಿಡಿ!

ಸಂಪಾದಕೀಯ ಬ್ಲಾಗ್ ಯಾರದ್ದು?

ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಕೆಲವೇ ದಿನಗಳಲ್ಲಿ ನಿಮಗೆ ತಿಳಿಸುತ್ತೇವೆ.
ಹೇಗೆ ಅಂತೀರಾ?

ಅದಕ್ಕಾಗಿ ನೀವು ತುಸು ಕಾಯಬೇಕು. ಏನಂತೀರಾ?

ಎಲ್ಲರ ತನಿಖೆ ಮಾಡುವ, ತಾವೇ ಮಾಧ್ಯಮಲೋಕದ ಪರಮ ಪ್ರಚಂಡರು ಎಂಬಂತೆ ಪೋಸು ಕೊಡುವ ಇವರು ಯಾರು ಎಂಬುದನ್ನು ತಿಳಿದುಕೊಳ್ಳುವುದು ಬೇಡವಾ?
ಇವರ ತನಿಖೆಯನ್ನೂ ಮಾಡೋಣ..
.
ಇವರು ಈಗಾಗಲೇ ಬೃಹಸ್ಪತಿಗಳು. ಇವರು ಯಾರ ಮೇಲೆ ಬೇಕಾದರೂ ಕಾಮೆಂಟ್ ಮಾಡಬಲ್ಲರು. ಎಲ್ಲರೂ ಇವರಿಗೆ ಕಿವಿ ಹಿಂಡಿಸಿಕೊಳ್ಳಲು ಅನುಮತಿ ಕೊಟ್ಟುಬಿಟ್ಟಿದ್ದಾರೆ. ಹಾಗಿದೆ ಇವರ ಧೋರಣೆ !

ನಿಮ್ಮ ಕುತೂಹಲ ತಣಿಸಲು ನಾವು ಸಿದ್ಧ. ಆರ್ ಯು ರೆಡಿ ?
( ಕೃಪೆ :ಸುದ್ದಿರಂಗ ಬ್ಲಾಗ್ )

....................

ಏನೇನ್ ಮಾಡ್ತೀವಿ ನೋಡ್ತಾ ಇರಿ!

ಹಾಗಂತ ಕಪ್ರ ಜಾಹೀರಾತು ಪ್ರಕಟಿಸುತ್ತಿದೆ. ಜಾಹೀರಾತುಗಳೇನೋ ಚೆನ್ನಾಗಿವೆ. ಆದರೆ ಪತ್ರಿಕೆಯಲ್ಲಿ ತುಂಬಾ ಹೊಸದೇನು ಕಾಣುತ್ತಿಲ್ಲ. ಒಂದೆರಡು ಅಂಕಣಕಾರರು, ಸ್ವಲ್ಪ ವಿನ್ಯಾಸದಲ್ಲಿ ಬದಲಾವಣೆ ಹೊರತುಪಡಿಸಿ ಹೊಸದೇನು ಓದುಗರಾದ ನಮಗೆ ಕಂಡಿಲ್ಲ.

ಹೀಗಾಗಿ ನಮ್ಮ ದ್ರಷ್ಟಿಯಲ್ಲಿ ಏನೇನ್ ಮಾಡ್ತೀವಿ ನೋಡ್ತಾ ಇರಿ ಎಂಬುದು ಸ್ವಲ್ಪ ಧಿಮಾಕಿನ ಮಾತು. ಪತ್ರಿಕೆಯಲ್ಲಿ ಏನೇ ಹೊಸತು ಮಾಡಿದರು ಎಲ್ಲರಿಗು ಕಾಣುತ್ತದೆ. ಕಂಡಾಗ ನೋಡುತ್ತಾರೆ. ಅದು ಬಿಟ್ಟು ಏನೇನ್ ಮಾಡ್ತೀವಿ ನೋಡ್ತಾ ಇರಿ!ಅಂದ್ರೆ?

ನಮಗೇನು ಅದೇ ಕೆಲಸಾನ? ಕಪ್ರ ದವರು ಏನು ಮಾಡಿದ್ರು? ಅದ್ರಲ್ಲಿ ಹೊಸದೇನು? ಎಂದು ಹುಡುಕ್ತಾ ಕೂತ್ಕೊಬೇಕ?

ಜನಕ್ಕೆ ಅದೆಲ್ಲ ಬೇಕಾಗಿಲ್ಲ. ಬೆಳಗ್ಗೆದ್ದು ಪೇಪರ್ ಓದುವಾಗ ಅದು ಇಷ್ಟವಾಗಬೇಕು. ಆಸಕ್ತಿಕರವಾಗಿ ಓದಿಸಿಕೊಂಡು ಹೋಗಬೇಕು. ಆಕರ್ಷಕವಾಗಿರಬೇಕು. ಇಷ್ಟೇ. ಅದು ಬಿಟ್ಟು ನೀವು ಏನೇನ್ ಮಾದಿದ್ರು ನೋಡ್ತಾ ಇರೋಕೆ ಜನಕ್ಕೆ ಪುರುಸೊತ್ತಿಲ್ಲ.

ಗೊತ್ತಾಯ್ತ ಸ್ವಾಮಿ ಸಂಪಾದಕರೆ?

ಸ್ವಲ್ಪ ಧಿಮಾಕು ಕಡಿಮೆ ಮಾಡ್ಕೊಳ್ಳಿ. ಅದು ಆರೋಗ್ಯಕ್ಕೆ ಒಳ್ಳೇದಲ್ಲ.
ಕೃಪೆ: ಮೀಡಿಯಾ ಮನ

Tuesday

ನಟಿ ರಮ್ಯಾ ಹಾಗು ನಿರ್ಮಾಪಕ ಗಣೇಶ್ ನಡುವಿನ ಜಗಳ ಇಡೀ ಕನ್ನಡ ಸಿನಿಮಾರಂಗವನ್ನೇ ಎರಡು ಭಾಗವಾಗಿ ವಿಂಗಡಿಸಿದೆ. ಒಂದೆಡೆ ಕಲಾವಿದರ ಸಂಘ ಮತ್ತೊಂದೆಡೆ ನಿರ್ಮಾಪಕರ ಸಂಘ ತೊಡೆ ತಟ್ಟಿ ನಿಂತಿವೆ. ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯೆ ನಿಂತು ಏನೂ ಮಾಡಲಾಗದೆ ಒದ್ದಾಡುತ್ತಿದೆ. ರಮ್ಯಾ ಪರವಾಗಿ ಕನ್ನಡ ಚಿತ್ರರಂಗದ ಹಿರಿಯಣ್ಣ ಅಂಬರೀಷ್ ಅಬ್ಬರಿಸುತ್ತಿದ್ದರೆ, ಅತ್ತ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ ಕುಮಾರ್ ಪಾಟೀಲ್ ನಾನೇ ಹೈಕಮಾಂಡ್ ಎಂದು ರೋಧಿಸುತ್ತಿದ್ದಾರೆ.

ಇಷ್ಟು ದೊಡ್ಡ ಸಂಘರ್ಷ ಬೇಕಿತ್ತೆ? ಇದು ಇಷ್ಟು ದಿನಗಳ ಕಾಲ ಬೆಳೆಯಬೇಕಿದ್ದ ವಿವಾದವೇ?

ಒಂದು ಸಿನಿಮಾ ತಯಾರಾಗುತ್ತಿದೆಯೆಂದರೆ ಅದರಲ್ಲಿ ನೂರೆಂಟು ಸಮಸ್ಯೆಗಳು ಇದ್ದೇ ಇರುತ್ತವೆ. ಮನೆಯೊಳಗೆ ಜಗಳ, ಅಲ್ಲಲ್ಲೇ ತೀರ್ಮಾನವಾಗಬೇಕು, ಬಹುತೇಕ ಹೀಗೇ ಆಗುತ್ತದೆ. ಇತ್ತೀಚಿಗೆ ನಟ ಗಣೇಶ್ ಅಭಿನಯಿಸಿದ ಸಿನಿಮಾ ಒಂದರ ಪ್ರಮೋಷನ್‌ಗೆ ಆತ ಬಂದಿರಲಿಲ್ಲ. ಹೀಗಾಗಿಯೇ ಸಿನಿಮಾ ಸೋತು ಹೋಯಿತು ಎಂದು ಅದರ ನಿರ್ದೇಶಕ, ನಿರ್ಮಾಪಕ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯೂಸು ಟಿವಿಗಳಲ್ಲಿ ಗಂಟೆಗಟ್ಟಲೆ ಚರ್ಚೆಯೂ ನಡೆದಿತ್ತು. ಆದರೆ ನಿರ್ಮಾಪಕರ ಸಂಘ ಹೀಗೆ ಫೀಲ್ಡಿಗೆ ಇಳಿದಿರಲಿಲ್ಲ. ಹೀಗೆ ನಾಯಕ-ನಾಯಕಿ ಚಿತ್ರದ ಪ್ರಮೋಷನ್‌ಗೆ ಬರದೇ ಇರುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತದೆ. ಟಿವಿ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿರುವುದರಿಂದಲೇ ಸಿನಿಮಾ ಪ್ರಮೋಷನ್ ವಿಷಯ ಈಗ ಇಷ್ಟು ಮಹತ್ವದ ಪಾತ್ರ ವಹಿಸುತ್ತಿದೆ.

ದಂಡಂ ದಶಗುಣಂ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ರಮ್ಯಾ ಬರಬೇಕಿತ್ತು, ಬರಲಿಲ್ಲ. ಬರದೇ ಹೋಗಿದ್ದಕ್ಕೆ ಕಾರಣವೂ ಆಕೆಯ ಬಳಿಯಿತ್ತು. ಚಿತ್ರದ ನಿರ್ಮಾಪಕ ಗಣೇಶ್, ನಿರ್ಮಾಪಕರ ಸಂಘದ ಪದಾಧಿಕಾರಿಯೂ ಆಗಿದ್ದರು. ರಮ್ಯಾ ಹಾಗು ಗಣೇಶ್ ಕುಳಿತು ಇಬ್ಬರ ನಡುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು.

ಆದರೆ ಯಾಕೆ ಇಷ್ಟು ರಂಪಾಟ ನಡೆಯಿತು. ಯಾಕೆ ಗಣೇಶ್ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡರು? ನಮಗೆ ಗೊತ್ತಿರುವ ಮಾಹಿತಿ ಪ್ರಕಾರ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಗಣೇಶ್‌ರನ್ನು ಕೆರಳಿಸಿದ್ದು ಓರ್ವ ಪತ್ರಕರ್ತ. ಅಲ್ರೀ, ನಿಮ್ಮ ಸಿನಿಮಾ ಕಾರ್ಯಕ್ರಮಕ್ಕೇ ಅವಳು ಬರಲಿಲ್ಲ ಅಂದ್ರೆ ಏನ್ರೀ? ಏನು ಮಾಡ್ತಾ ಇದೆ ನಿಮ್ಮ ನಿರ್ಮಾಪಕರ ಸಂಘ. ಇಂಥವರನ್ನು ಹೀಗೇ ಬಿಡ್ತೀರಾ ಎಂದು ಗಣೇಶ್‌ರನ್ನು ಛೂ ಬಿಟ್ಟಿದ್ದು ಓರ್ವ ಪತ್ರಕರ್ತ.

ಹೌದ್ದಲ್ವಾ? ಒಂದು ಕೈ ನೋಡೇ ಬಿಡೋಣ ಎಂದು ಗಣೇಶ್ ಫೀಲ್ಡಿಗಿಳಿದರು. ಈಗ ರಣರಂಪವಾಗಿ ಹೋಗಿದೆ. ಸಿನಿಮಾ ಪತ್ರಕರ್ತರ ಪೈಕಿ ಕೆಲವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿರಲು ಬಯಸುತ್ತಾರೆ. ಅವರು ಹೆಸರಿಗಷ್ಟೆ ಪತ್ರಕರ್ತರು. ಸಿನಿಮಾ ನಟ-ನಟಿಯರಿಗೆ ಛಾನ್ಸು ಕೊಡಿಸುವುದರಿಂದ ಹಿಡಿದು ಸಿನಿಮಾ ಪ್ರೊಡಕ್ಷನ್‌ನ ಎಲ್ಲ ಕೆಲಸಗಳಲ್ಲೂ ಅವರು ಮೂಗು, ಕಣ್ಣು, ಬಾಯಿ ಇತ್ಯಾದಿಗಳನ್ನು ತೂರಿಸುತ್ತಾರೆ.

ನಿಮಗೆ ಆಶ್ಚರ್ಯ ಅನಿಸಬಹುದು, ಸಿನಿಮಾಗಳಿಗೆ ಫೈನಾನ್ಸು ಕೊಡಿಸುವ ದಂಧೆಯನ್ನೂ ಕೆಲವರು ಮಾಡುತ್ತಾರೆ. ರಾಜಿ ಪಂಚಾಯ್ತಿಗಳನ್ನೂ ನಡೆಸುತ್ತಾರೆ. ಒಂದರ್ಥದಲ್ಲಿ ಸಿನಿಮಾ ಮಂದಿಗೂ, ಸಿನಿಮಾ ಪತ್ರಕರ್ತರಿಗೂ ನಡುವಿನ ಅಂತರದ ಗೆರೆಯೇ ಅಳಿಸಿ ಹೋದಂತಾಗಿದೆ.

ಕೆಲವು ಪತ್ರಕರ್ತರು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಛಾನ್ಸು ಸಿಗಲಿಲ್ಲವೆಂದರೆ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ, ನಿರ್ದೇಶಕರು ಹಣ್ಣುಗಾಯಿ-ನೀರುಗಾಯಿಯಾಗುತ್ತಾರೆ. ಸಿನಿಮಾ ಮಂದಿಯ ನಡುವೆ ಜಗಳ ತಂದಿಡುವುದು, ಚಾಡಿ ಹೇಳುವುದು, ಫಿಟ್ಟಿಂಗ್ ಇಡುವುದು ಇದೆಲ್ಲವೂ ಕೆಲವು ಸಿನಿಮಾ ಪತ್ರಕರ್ತರಿಗೆ ಮಾಮೂಲಿ ಖಯಾಲಿ. ಕೆಲವರ ವರ್ತನೆ ಅತಿಯಾದಾಗ ದೊಡ್ಡ ಸಿನಿಮಾ ಸಂಸ್ಥೆಗಳ ಧಣಿಗಳು ಪತ್ರಿಕಾ ಸಂಸ್ಥೆಗಳ ಮಾಲೀಕರ ಜತೆ ಮಾತನಾಡಿ ಪತ್ರಕರ್ತರ ಸಿನಿಮಾ ಬೀಟ್ ಕಳೆದ ಅನಾರೋಗ್ಯಕರ ಬೆಳವಣಿಗೆಗಳೂ ನಡೆದಿವೆ.

ಒಮ್ಮೆ ಜನಪ್ರಿಯ ಚಿತ್ರನಟಿಯೊಬ್ಬಾಕೆ ಪತ್ರಕರ್ತರೊಬ್ಬರೊಂದಿಗೆ ಆಡಿದ ಖಾಸಗಿ ಮಾತುಗಳೆಲ್ಲ ಆಕೆ ಅಭಿನಯಿಸುತ್ತಿದ್ದ ಚಿತ್ರದ ನಿರ್ದೇಶಕನಿಗೆ ಗೊತ್ತಾಗಿ ಹೋಯಿತು. ಇಬ್ಬರೂ ಜಗಳವಾಡಿ ಹಾವು ಮುಂಗುಸಿ ಆಗಿ ಹೋದರು. ಯಾಕೆ ಹೀಗಾಯಿತು ಎಂದರೆ ಪತ್ರಕರ್ತ ಮಾತನಾಡುವಾಗ ತನ್ನ ಮೊಬೈಲ್‌ನ ಲೌಡ್ ಸ್ಪೀಕರ್ ಆನ್ ಮಾಡಿ ಇತರ ಪತ್ರಕರ್ತ ಮಿತ್ರರಿಗೂ ಕೇಳಿಸಿದ್ದ. ಅವರಲ್ಲಿ ಒಬ್ಬ ಅದನ್ನು ನಿರ್ದೇಶಕನಿಗೆ ಯಥಾವತ್ತಾಗಿ ವರದಿ ಮಾಡಿದ್ದ.

ಹಿಂದೆಲ್ಲ ಮುಹೂರ್ತ, ಆಡಿಯೋ ರಿಲೀಸು, ಕುಂಬಳಕಾಯಿ, ಸಿನಿಮಾ ರಿಲೀಸು, ನೂರು ದಿನದ ಸಂಭ್ರಮ ಹೀಗೆ ಹಲವು ಸಂದರ್ಭಗಳಲ್ಲಿ ಸಿನಿಮಾದ ನಿರ್ಮಾಪಕರು ಪತ್ರಕರ್ತರಿಗೆ ಪಾರ್ಟಿ ಕೊಡುತ್ತಿದ್ದರು. ಈ ಪಾರ್ಟಿಗಳಲ್ಲಿ ಕೆಲವರು ಎಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರೆಂದರೆ ಅವರನ್ನು ರಾತ್ರಿ ಸರಿಹೊತ್ತಿನಲ್ಲಿ ಮನೆಗಳಿಗೆ ತಲುಪಿಸುವುದೇ ಕಷ್ಟವಾಗುತ್ತಿತ್ತು. ಎರಡು ಲಾರ್ಜು ಒಳಗೆ ಇಳಿದ ಮೇಲೆ ಎದುರಿಗೆ ಕುಳಿತವನು ಯಾರು ಎತ್ತ ಎಂದು ನೋಡದೆ ಸೊಂಟದ ಕೆಳಗೆ ಮಾತನಾಡುವ ಚಾಳಿ ಹಲವರದ್ದು. ಪುಗಸಟ್ಟೆ ಪಾರ್ಟಿಯಲ್ಲವೇ? ಕೆಲವರು ತಮ್ಮ ಗೆಳೆಯರು, ಅಕ್ಕಪಕ್ಕದ ಮನೆಯವರು, ಬಂಧುಗಳನ್ನೂ ಕರೆತರುತ್ತಿದ್ದರು. ಪಾರ್ಟಿ ಮುಗಿಸಿ ಹೋಗುವಾಗ ಗಿಫ್ಟು ಎಲ್ರೀ ಎಂಬ ಕೂಗಾಟ. ಎಲ್ಲ ನೋಡಿ ಬೇಜಾರಾದ ನಿರ್ಮಾಪಕರ ಸಂಘ, ಇನ್ನು ಮೇಲೆ ಯಾರೂ ಪಾರ್ಟಿ ಕೊಡಬಾರದು ಎಂದು ಫರ್ಮಾನು ಹೊರಡಿಸಿತು. ಪ್ರೊಡಕ್ಷನ್ ಕಾಸ್ಟ್ ಏರಿರುವುದರಿಂದ ಪಾರ್ಟಿ ಕೊಡಿಸುವುದಿಲ್ಲ ಎಂದು ಅದು ಸಮಜಾಯಿಷಿ ನೀಡಿತು. ಇಂಥ ಅವಮಾನ ಬೇಕಿತ್ತೆ?

ಹಾಗಂತ ಎಲ್ಲ ಸಿನಿಮಾ ಪತ್ರಕರ್ತರೂ ಹಾಗಲ್ಲ. ಅಲ್ಲೂ ಬೇಕಾದಷ್ಟು ಮಂದಿ ಮಾನವಂತರು ಇದ್ದಾರೆ. ಆದರೆ ಎಲ್ಲರ ಹೆಸರು ಕೆಡಿಸಲು ನಾಲ್ಕೈದು ಮಂದಿ ಸಾಕಲ್ಲವೇ?:
ಕೃಪೆ ಸಂಪಾದಕೀಯ

Monday

ಪತ್ರಕರ್ತಾರಾ ರಾಜಕಾರಣಿಗಳ ವಕ್ರ ತುಂದೊಕ್ತಿ...ವದಂತಿ

ಅವ್ರು ಈ ಪತ್ರಿಕೆ ಸೇರ್‍ತಾರಂತೆ, ಇವ್ರನ್ನು ೧೫ನೇ ತಾರೀಖು ಒದ್ದು ಹೊರಗೆ ಹಾಕ್ತಾರಂತೆ, ಇವ್ರಿಗೆ ಅವ್ರು ದುಡ್ಡು ಹಾಕಿ ಹೊಸ ಪೇಪರ್ ತರ್‍ತಾರಂತೆ, ಅವ್ರು ಮತ್ತು ಇವ್ರು ಇಬ್ರೂ ಸೇರಿ ಆ ಪತ್ರಿಕೆ ಸೇರೋದಕ್ಕೆ ಕಾಯ್ತಾ ಇದಾರಂತೆ, ಇವ್ರು ಒಂದು ಎರಡು ಮೂರು ನಾಲ್ಕು ಆಮೇಲಿನ್ನೇನು ಅಂತ ಹಾಡ್ತಾ ಇದಾರಂತೆ… ಇವ್ರ ಫೋನ್ ಸ್ವಿಚ್‌ಆಫ್… ಅವ್ರ ಮ್ಯಾನೇಜ್‌ಮೆಂಟ್ ಸ್ಟೇಕ್ ಇನ್ನು ಒಂದೇ ವಾರದಲ್ಲಿ ಹೆಚ್ಚಾಗುತ್ತಂತೆ…. ಅಕಸ್ಮಾತ್ ಅವ್ರು ಬಿಟ್ಟಿದ್ದೇ ಆದ್ರೆ ಈ ಪತ್ರಿಕೆಯಿಂದ ಇವ್ರು ಅಲ್ಲಿಗೆ ಹೋಗೋದಕ್ಕೆ ತಯಾರಿ ನಡೆದಿದೆಯಂತೆ…

ಇವ್ರೆಲ್ಲ ಯಾರು? ಇವ್ರ ಬಗ್ಗೆ ಬರೀತಾ ಇರೋರು ಯಾರು? ಎಸ್ ಎಂ ಎಸ್‌ಗಳನ್ನು ಹರಿಬಿಡ್ತಾ ಇರೋರು ಯಾರು? ಇದಕ್ಕೆಲ್ಲ ಏನು ಆಧಾರ? ನಂಗೊತ್ತಿಲ್ಲ.

ಕಳೆದ ಹತ್ತು ದಿನಗಳಿಂದ ಇಂಥದ್ದೇ ವದಂತಿಗಳನ್ನು ಗಿರಣಿಗಳಲ್ಲಿ ಅರೆದು ಅರೆದು ಹೊರೆ ಹರಿಬಿಡಲಾಗುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಏನೋ ಭಯಂಕರ ಬದಲಾವಣೆಗಳು ಆಗಿಬಿಡುತ್ತವೆ ಅನ್ನೋ ಕಲ್ಪನೆಯನ್ನು ಕೊಡೋ ಈ ವದಂತಿಗಳು ನಿಜವಾಗುವವರೆಗೂ ಟ್ರಾಶ್ ಎಂದೇ ಕರೆಯಬೇಕಷ್ಟೆ. ವದಂತಿಗಳನ್ನು ಆಧರಿಸಿ ಮ್ಯಾನೇಜ್‌ಮೆಂಟ್‌ಗಳು ನಿರ್ಧಾರ ತಗೋಳೋದೇ ಆಗಿದ್ರೆ…. ಆಹಾ…

ಎಂಥ ಮಜಾ ನೋಡಿ, ಸುದ್ದಿಯನ್ನು ಜನರಿಗೆ ತಲುಪಿಸೋ ಪರಮ ಪವಿತ್ರ ಕೆಲಸ ಮಾಡ್ತಾ ಇರೋ ಈ ಪತ್ರಕರ್ತರು ಹರಿದುಬಿಡ್ತಾ ಇರೋ ವದಂತಿಗಳೇನು…. ಇವುಗಳ ಸತ್ಯಾಸತ್ಯತೆ ಎಷ್ಟು? ವದಂತಿಗಳಿಗೇ ಬ್ಲಾಗುಗಳನ್ನು ಬಳಸಿಕೊಳ್ಳೋ ಹೊಸ ಪ್ರವೃತ್ತಿಗೆ ಏನು ಹೇಳೋಣ? ದಾಖಲೆಯಿಲ್ಲ, ಅಧಿಕೃತ ಹೇಳಿಕೆಯಿಲ್ಲ, ಕಣ್ಣಿಗೆ ಕಾಣುವ ಯಾವುದೇ ಬೆಳವಣಿಗೆಗಳೂ ಇಲ್ಲ. ಆದರೂ ಇವೆಲ್ಲ ಕ್ಷಣಕ್ಷಣಕ್ಕೂ ನಡೀತಾ ಇರೋ ವಿದ್ಯಮಾನಗಳು ಎಂದು ಮಾತನಾಡುವ ಪತ್ರಕರ್ತರು ನಮ್ಮ ನಡುವೆಯೇ ಇದ್ದಾರೆ. ನಿಜಘಟನೆಗಳನ್ನು ವರದಿ ಮಾಡುವವರು ಹೀಗೆ ಅತಿರಂಜಿತ ವದಂತಿಗಳನ್ನು ಬರೆಯುತ್ತಿರೋದು ನೋಡಿದರೆ ವಾಕರಿಕೆ ಬರುತ್ತದೆ.

ವಿಮರ್ಶಕಿ ಎಂದೂ ಇಂಥ ವದಂತಿಗಳನ್ನು ಬರೆಯುವ ಗೋಜಿಗೆ ಹೋಗದಿರಲು ನಿರ್ಧರಿಸಿದ್ದಾಳೆ. ನಡೆದ ಘಟನೆಗಳಷ್ಟೇ ವಿಮರ್ಶಕಿಗೆ ಆಧಾರ ಮತ್ತು ಮೂಲ. ಅದನ್ನು ಬಿಟ್ಟು ವದಂತಿಗಳನ್ನು ಹರಡುವವರಿಗೆ ಆಕಾಶವಾಣಿಯಲ್ಲಿ ಬಿತ್ತರವಾಗುವಂತೆ ಎಚ್ಚರಿಕೆ ನೀಡಬೇಕಿದೆ. ವದಂತಿಗಳನ್ನು ಹರಡಬೇಡಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸಿಕೊಳ್ಳಬೇಕಿದೆ.

ಇಲ್ಲಿ ಅವರಿವರು ಆ ಸಂಸ್ಥೆ ಬಿಡುವ, ಸೇರುವ ವಿಷಯಗಳನ್ನು ಅತ್ಯಂತ ಜಾಣತನದಿಂದ ಹರಡುತ್ತಿರುವ ಕುತ್ಸಿತ ಮನಸ್ಸುಗಳಿವೆ ಎಂದೇ ಬಲವಾಗಿ ಅನ್ನಿಸುತ್ತದೆ. ಇಂಥ ವ್ಯಕ್ತಿಗಳನ್ನು ಹುಡುಕಿ ತದಕುವ ಕೆಲಸ ನಡೆಯಬೇಕಿದೆ.

ಒಂದೊಂದು ಪತ್ರಿಕೆಯೂ ಒಂದೊಂದು ಥರದ ಮ್ಯಾನೇಜ್‌ಮೆಂಟನ್ನು ಹೊಂದಿದೆ. ಉದಯವಾಣಿಯ ಆಡಳಿತ ವರ್ಗವು ನಿನ್ನೆ ಮೊನ್ನೆ ಸೇರಿದ ತಿಮ್ಮಪ್ಪ ಭಟ್ಟರನ್ನು ಸಂಸ್ಥೆಯಲ್ಲೇ ಮೂಲೆಗುಂಪಾಗಿಸುವಂಥ ಕ್ಷುದ್ರ ಸಂಸ್ಥೆಯಂತೂ ಅಲ್ಲ. ಕನ್ನಡಪ್ರಭದ ಮ್ಯಾನೇಜ್‌ಮೆಂಟ್ ಒಂದು ವರ್ಷದ ಹಿಂದೆ ನಡೆದ ಕ್ಷಿಪ್ರಕ್ರಾಂತಿಯಿಂದ ಕಂಗೆಟ್ಟಿದ್ದರೂ ಪತ್ರಿಕೆಯ ರೀಡರ್‌ಶಿಪ್ಪನ್ನು ಮೇಲೆತ್ತಿದ ಶಿವಸುಬ್ರಹ್ಮಣ್ಯರನ್ನು ಅಷ್ಟು ಸಲೀಸಾಗಿ ಸರಿಸಿಬಿಡುತ್ತದೆ ಎಂದು ನಂಬಬೇಕೆ? ಹಾಗೇನಾದರೂ ನಡೆದೀತು ಅಂದುಕೊಳ್ಳೋಣ. ಆಗ ಅದೊಂದು ದುರಂತವೇ ಹೊರತು ಸಹಜ ಘಟನೆಯಾಗಲಾರದು. ವಿಮರ್ಶಕಿಗೆ ಶಿವಸುಬ್ರಹ್ಮಣ್ಯರನ್ನು ಹೊಗಳಿ ಏನೂ ಆಗಬೇಕಿಲ್ಲ. ಎನ್ ಆರ್ ಎಸ್ ನ ಪ್ರಕಟಿತ ಅಧಿಕೃತ ಅಂಕಿ ಅಂಶಗಳೇ ಸಾಕಲ್ಲವೆ? ವಿಶ್ವೇಶ್ವರ ಭಟ್ಟರು ಪತ್ರಿಕೆಯನ್ನು ಮೇಲೆತ್ತಿದರು ಎಂದು ಎಷ್ಟೇ ನಂಬಬೇಕೆಂದರೂ, ಅದೇ ಹೊತ್ತು ಅವರೇ ಪತ್ರಿಕೆಯ ರೀಡರ್‌ಶಿಪ್ ಕುಸಿಯಲೂ ಕಾರಣರಾದರು ಎಂಬ ಮಾತನ್ನು ಯಾಕೆ ಒಪ್ಪಿಕೊಳ್ಳಬಾರದು? ಅಷ್ಟಿದ್ದಾಗ ಅವರನ್ನು ಯಾವುದೇ ಸಂಸ್ಥೆಯು ಕೆಂಪುಹಾಸಿನ ಸ್ವಾಗತ ನೀಡುತ್ತದೆ ಎಂದು ನಂಬಬೇಕೆ? ಹಾಗೆ ನಡೆಯಿತು ಅಂದುಕೊಳ್ಳೋಣ. ಹಾಗೆ ಸೇರಿಸಿಕೊಳ್ಳುವ ಮ್ಯಾನೇಜ್‌ಮೆಂಟ್‌ಗೆ ಕಾಮನ್‌ಸೆನ್ಸ್ ಇಲ್ಲ ಎಂದೇ ಹೇಳಬೇಕಾಗುತ್ತದೆ. ಉನ್ನತ ಶಿಕ್ಷಣಕ್ಕೆ ಹೋಗಬಯಸಿ ರಾಜೀನಾಮೆ ನೀಡಿದ ಭಟ್ಟರು ಇನ್ನೂ ಭಾರತದಲ್ಲಿ ಯಾಕೆ ಇದ್ದಾರೆ ಎಂಬುದೇ ದೊಡ್ಡ ಪ್ರಶ್ನೆ.

ಪತ್ರಿಕೋದ್ಯಮದ ಬಗ್ಗೆ ಸದಾ ಅತ್ಯಂತ ಹಳೆಯ ದಾಖಲೆಗಳನ್ನೆಲ್ಲ ಎತ್ತಿ ಕಾಲಂ ಬರೆಯುತ್ತಿದ್ದ ಭಟ್ಟರೆಲ್ಲಿ? ಪ್ರತಾಪಸಿಂಹ, ಯಶವಂತ ಸರದೇಶಪಾಂಡೆಯವರ ನಿಯಂತ್ರಣದಲ್ಲಿ ತಮ್ಮ ವೆಬ್‌ಸೈಟನ್ನು ಬಿಟ್ಟುಕೊಟ್ಟು ಹಾಯಾಗಿರುವ ಭಟ್ಟರೆಲ್ಲಿ? ಪತ್ರಿಕೋದ್ಯಮದ ಬಗ್ಗೆ, ತಮ್ಮ ಅನುಭವಗಳನ್ನು ಬರೆಯಲು ಈಗ ಅವರಿಗೆ ಸಕಾಲವಾಗಿತ್ತು. ವ್ಯಕ್ತಿಗತ ನಿಂದನೆ, ಕಟಕಿಗೇ ತಮ್ಮ ವೆಬ್‌ಸೈಟನ್ನು ಮೀಸಲಾಗಿಟ್ಟ ಅವರ `ಕ್ವಾಲಿಟಿ ಪಾಲಿಸಿ’ ಹೇಸಿಗೆ ತರುತ್ತದೆ. ವೆಬ್‌ಜಗತ್ತಿಗೆ ಬಂದಮೇಲೆ ವೆಬ್ ಮಾಧ್ಯಮದ ಪ್ರಾಥಮಿಕ ಹೊಣೆಗಾರಿಕೆಗಳನ್ನೂ ಅರಿಯದೇ ಹೋದ ಭಟ್ಟರ ಬಗ್ಗೆ ಕನಿಕರ ಮೂಡುತ್ತದೆ. ಅವರು ಹಾಗೇ, ಭಟ್ಟಂಗಿಗಳ ವೇದಘೋಷಗಳ ಗುಂಗಿನಲ್ಲೇ ಇದ್ದರೆ ಒಳ್ಳೆಯದು; ಆದಷ್ಟು ಬೇಗ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತಾರೆ!

ಅವರ ಸಂಪಾದಕತ್ವದಲ್ಲಿ ನಡೆದ ಸುದ್ದಿಗಳ ಭಾನಗಡಿಯ ಬಗ್ಗೆ ವಿಮರ್ಶಕಿಯು ಬರೆದ ಯಾವ ಬ್ಲಾಗಿಗೂ ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ. ಈಗಲೂ ಅವರು ಮೌನಿಯಂತೆ. ಅವರ ಬಾಯಿ ತೆರೆದಾಗ ಏನೆಲ್ಲ ಘನಘೋರ ಸತ್ಯಗಳು ಹೊರಬೀಳುತ್ತವೆ ಎಂದು ವಿಮರ್ಶಕಿಯಂತೂ ಕಾತರಳಾಗಿಲ್ಲ. ವೆಬ್ ಜಗತ್ತಿಗೆ ಬಂದಮೇಲಾದರೂ ಸ್ವಲ್ಪ ಹೊಸ ಜರ್ನಲಿಸಮ್ ಪಾಠ ಕಲಿತರೆ ಒಳ್ಳೆಯದು ಎಂದಷ್ಟೆ ಹೇಳಬಹುದು.

ಕೃಪೆ :vimarshaki