ಸಂಪಾದಕೀಯ ಬ್ಲಾಗ್ ಯಾರದ್ದು?
ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಕೆಲವೇ ದಿನಗಳಲ್ಲಿ ನಿಮಗೆ ತಿಳಿಸುತ್ತೇವೆ.
ಹೇಗೆ ಅಂತೀರಾ?
ಅದಕ್ಕಾಗಿ ನೀವು ತುಸು ಕಾಯಬೇಕು. ಏನಂತೀರಾ?
ಎಲ್ಲರ ತನಿಖೆ ಮಾಡುವ, ತಾವೇ ಮಾಧ್ಯಮಲೋಕದ ಪರಮ ಪ್ರಚಂಡರು ಎಂಬಂತೆ ಪೋಸು ಕೊಡುವ ಇವರು ಯಾರು ಎಂಬುದನ್ನು ತಿಳಿದುಕೊಳ್ಳುವುದು ಬೇಡವಾ?
ಇವರ ತನಿಖೆಯನ್ನೂ ಮಾಡೋಣ..
.
ಇವರು ಈಗಾಗಲೇ ಬೃಹಸ್ಪತಿಗಳು. ಇವರು ಯಾರ ಮೇಲೆ ಬೇಕಾದರೂ ಕಾಮೆಂಟ್ ಮಾಡಬಲ್ಲರು. ಎಲ್ಲರೂ ಇವರಿಗೆ ಕಿವಿ ಹಿಂಡಿಸಿಕೊಳ್ಳಲು ಅನುಮತಿ ಕೊಟ್ಟುಬಿಟ್ಟಿದ್ದಾರೆ. ಹಾಗಿದೆ ಇವರ ಧೋರಣೆ !
( ಕೃಪೆ :ಸುದ್ದಿರಂಗ ಬ್ಲಾಗ್ )
....................
ಏನೇನ್ ಮಾಡ್ತೀವಿ ನೋಡ್ತಾ ಇರಿ!
ಹಾಗಂತ ಕಪ್ರ ಜಾಹೀರಾತು ಪ್ರಕಟಿಸುತ್ತಿದೆ. ಜಾಹೀರಾತುಗಳೇನೋ ಚೆನ್ನಾಗಿವೆ. ಆದರೆ ಪತ್ರಿಕೆಯಲ್ಲಿ ತುಂಬಾ ಹೊಸದೇನು ಕಾಣುತ್ತಿಲ್ಲ. ಒಂದೆರಡು ಅಂಕಣಕಾರರು, ಸ್ವಲ್ಪ ವಿನ್ಯಾಸದಲ್ಲಿ ಬದಲಾವಣೆ ಹೊರತುಪಡಿಸಿ ಹೊಸದೇನು ಓದುಗರಾದ ನಮಗೆ ಕಂಡಿಲ್ಲ.
ಹೀಗಾಗಿ ನಮ್ಮ ದ್ರಷ್ಟಿಯಲ್ಲಿ ಏನೇನ್ ಮಾಡ್ತೀವಿ ನೋಡ್ತಾ ಇರಿ ಎಂಬುದು ಸ್ವಲ್ಪ ಧಿಮಾಕಿನ ಮಾತು. ಪತ್ರಿಕೆಯಲ್ಲಿ ಏನೇ ಹೊಸತು ಮಾಡಿದರು ಎಲ್ಲರಿಗು ಕಾಣುತ್ತದೆ. ಕಂಡಾಗ ನೋಡುತ್ತಾರೆ. ಅದು ಬಿಟ್ಟು ಏನೇನ್ ಮಾಡ್ತೀವಿ ನೋಡ್ತಾ ಇರಿ!ಅಂದ್ರೆ?
ನಮಗೇನು ಅದೇ ಕೆಲಸಾನ? ಕಪ್ರ ದವರು ಏನು ಮಾಡಿದ್ರು? ಅದ್ರಲ್ಲಿ ಹೊಸದೇನು? ಎಂದು ಹುಡುಕ್ತಾ ಕೂತ್ಕೊಬೇಕ?
ಜನಕ್ಕೆ ಅದೆಲ್ಲ ಬೇಕಾಗಿಲ್ಲ. ಬೆಳಗ್ಗೆದ್ದು ಪೇಪರ್ ಓದುವಾಗ ಅದು ಇಷ್ಟವಾಗಬೇಕು. ಆಸಕ್ತಿಕರವಾಗಿ ಓದಿಸಿಕೊಂಡು ಹೋಗಬೇಕು. ಆಕರ್ಷಕವಾಗಿರಬೇಕು. ಇಷ್ಟೇ. ಅದು ಬಿಟ್ಟು ನೀವು ಏನೇನ್ ಮಾದಿದ್ರು ನೋಡ್ತಾ ಇರೋಕೆ ಜನಕ್ಕೆ ಪುರುಸೊತ್ತಿಲ್ಲ.
ಗೊತ್ತಾಯ್ತ ಸ್ವಾಮಿ ಸಂಪಾದಕರೆ?
ಸ್ವಲ್ಪ ಧಿಮಾಕು ಕಡಿಮೆ ಮಾಡ್ಕೊಳ್ಳಿ. ಅದು ಆರೋಗ್ಯಕ್ಕೆ ಒಳ್ಳೇದಲ್ಲ.
ಕೃಪೆ: ಮೀಡಿಯಾ ಮನ
ಕೃಪೆ: ಮೀಡಿಯಾ ಮನ
No comments:
Post a Comment